• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Budget 2023: ಸಿಎಂ ಬೊಮ್ಮಾಯಿ ಬಜೆಟ್​ ಸರ್ಪ್ರೈಸ್ ಏನಿರಲಿದೆ? ರೈತರಿಗೆ ಸಿಗುತ್ತಾ ಬಂಪರ್ ಕೊಡುಗೆ?

Karnataka Budget 2023: ಸಿಎಂ ಬೊಮ್ಮಾಯಿ ಬಜೆಟ್​ ಸರ್ಪ್ರೈಸ್ ಏನಿರಲಿದೆ? ರೈತರಿಗೆ ಸಿಗುತ್ತಾ ಬಂಪರ್ ಕೊಡುಗೆ?

ಕೃಷಿಗೆ ಸಿಗುತ್ತಾ ಬಂಪರ್ ಆಫರ್?

ಕೃಷಿಗೆ ಸಿಗುತ್ತಾ ಬಂಪರ್ ಆಫರ್?

ರೈತರು, ಕಾರ್ಮಿಕರು, ಮಹಿಳೆಯರು ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಜನಪ್ರಿಯ ಯೋಜನೆ ಘೋಷಣೆ ಸಾಧ್ಯತೆಗಳಿವೆ.

  • Share this:

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಇಂದು ತಮ್ಮ ಎರಡನೇ ಬಜೆಟ್ (Bommai Budget 2023) ಮಂಡನೆ ಮಾಡಲಿದ್ದಾರೆ. ವಿಧಾನಸಭಾ ಚುನಾವಣೆ (Assembly Election 2023) ಹೊಸ್ತಿನಲ್ಲಿರುವ ಈ ವೇಳೆ ಇಡೀ ರಾಜ್ಯದ ಚಿತ್ತ ಬಜೆಟ್​​​ನತ್ತಿದೆ. ಚುನಾವಣೆ ಇರೋದರಿಂದ ಇದೊಂದು ಜನಪ್ರಿಯ ಬಜೆಟ್ ಆಗಿರಲಿದೆ ಎಂಬುವುದು ಬಹುತೇಕರ ಲೆಕ್ಕಾಚಾರ ಆಗಿದೆ. ಇಂದು ಬೆಳಗ್ಗೆ 10.15ಕ್ಕೆ ಸಿಎಂ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ (Budget 2023-24) ಘೋಷಣೆ ಪ್ರಕ್ರಿಯೆ ಪ್ರಾರಂಭಿಸಲಿದ್ದಾರೆ. ಇಂದಿನ ಬಜೆಟ್ ಗಾತ್ರ 3 ಲಕ್ಷ ಕೋಟಿಗೂ ಅಧಿಕ ಇರಲಿದೆ ಎನ್ನಲಾಗಿದೆ. ಈ ಬಾರಿ ಗುರಿ ಮೀರಿದ ಆದಾಯ ಸಂಗ್ರಹ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹೊರೆ ಇಲ್ಲದ ಚುನಾವಣೆ ಬಜೆಟ್ ಮಂಡನೆ ಆಗುವ ಸಾಧ್ಯತೆಗಳಿವೆ.


ಕಳೆದ ವರ್ಷ ₹5 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ಆದಾಯ ಕೊರತೆಯಿತ್ತು. ಈ ಬಾರಿ ಈವರೆಗೆ ಬಜೆಟ್ ಗುರಿಗಿಂತ 13 ಸಾವಿರ ಕೋಟಿ ಅಧಿಕವಾಗಿ ಆದಾಯ ಸಂಗ್ರಹವಾಗಿದೆ. 2022-23 ಸಾಲಿನಲ್ಲಿ ಒಟ್ಟು ₹1,89,887.54 ಕೋಟಿ ರಾಜಸ್ವ ಜಮೆಯ ಅಂದಾಜು ಮಾಡಲಾಗಿದೆ. ಹಣಕಾಸಿನ ಸಂಗ್ರಹ ಉತ್ತಮವಾಗಿದ್ದು ಪರಿಷ್ಕೃತ ರಾಜಸ್ವ ಜಮೆ ಅಂದಾಜು ಮಾರ್ಚ್ ಅಂತ್ಯಕ್ಕೆ ಗುರಿ ಮೀರಲಿದೆ.


ಜನಪ್ರಿಯ ಘೋಷಣೆ ನಿರೀಕ್ಷೆ!


ಈ ಬಾರಿಯ ಬಜೆಟ್​​ನಲ್ಲಿ ಬಡವರಿಗೆ, ಮಹಿಳೆಯರಿಗೆ ಹಾಗೂ ರೈತರಿಗೆ ಹೊಸ ಯೋಜನೆಗಳನ್ನು ಘೋಷಿಸಲು ಸಿಎಂ ಬೊಮ್ಮಾಯಿ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕುಲಕಸುಬು ಮಾಡಲು ಇಚ್ಚಿಸುವವರಿಗೆ ₹50,000 ಆರ್ಥಿಕ ಸಹಾಯ ನೀಡಲು ಸಿಎಂ ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ.


ರೈತರು, ಕಾರ್ಮಿಕರು, ಮಹಿಳೆಯರು ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಜನಪ್ರಿಯ ಯೋಜನೆ ಘೋಷಣೆ ಸಾಧ್ಯತೆಗಳಿವೆ.


ಸ್ತ್ರೀ ಶಕ್ತಿ ವಿಶೇಷ ಯೋಜನೆ: ಕೋವಿಡ್ ಹಾಗೂ ಪ್ರವಾಹದ ಕಾರಣದಿಂದ ದುಡಿಯುವ ವರ್ಗಕ್ಕೆ ಸಹಾಯ  ಮಾಡುವ ಉದ್ದೇಶದಿಂದ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಯೋಜನೆಗಳ ರೂಪುರೇಷೆ ಸಾಧ್ಯತೆಗಳಿವೆ. ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಕನಿಷ್ಠ ಮನೆ  ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ನೆರವು ಸಾಧ್ಯತೆ ಇದೆ.


ರೈತರಿಗೆ ಬಂಪರ್ ಕೊಡುಗೆ:


ಚುನಾವಣೆ ಹೊಸ್ತಿಲಲ್ಲಿ ಸಿಎಂ ಬೊಮ್ಮಾಯಿ‌ ರೈತರನ್ನು ಕೇಂದ್ರೀಕರಿಸಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಬಾರಿ ತಮ್ಮ ಆಯವ್ಯಯದಲ್ಲಿ ಹೊಸ ಕೃಷಿ ನೀತಿ ಘೋಷಿಸುವ ಸಾಧ್ಯತೆಗಳು ದಟ್ಟವಾಗಿವೆ.


ಬೊಮ್ಮಾಯಿ ಬಜೆಟ್ ಸರ್ಪ್ರೈಸ್ ಏನಿರಲಿದೆ?


*25 ತಾಲ್ಲೂಕುಗಳಲ್ಲಿ ಮಿನಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಸಾಧ್ಯತೆ


*ಅಡಿಕೆ ರೋಗ ತಡೆಯುವಿಕೆಗೆ ಬಜೆಟ್​​ನಲ್ಲಿ ವಿಶೇಷ ಅನುದಾನ ಸಾಧ್ಯತೆ


*ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವ ಸಾಧ್ಯತೆ


*ದಿವಂಗತ ಪುನೀತ್ ರಾಜಕುಮಾರ್ ಅವರ ಸಮಾಧಿಯಲ್ಲಿ ಅದ್ಭುತ ಸ್ಮಾರಕ ಸ್ಥಾಪನೆ ಬಗ್ಗೆ ಘೋಷಣೆ ಸಾಧ್ಯತೆ




*ಬೆಂಗಳೂರು ನಗರದಲ್ಲಿ ಸಮಗ್ರವಾಗಿ ರಾಜಕಾಲುವೆ ಪುನರ್ನಿಮಾಣ ಮಾಡಲು ಐಐಎಸ್​​ಸಿ ಸೇರಿದಂತೆ ಇತರೆ ವರದಿಗಳನ್ನು ಆಧರಿಸಿ ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯನ್ನು ಸುಧಾರಣೆಗಾಗಿ ವಿಶೇಷವಾದ ಮಾಸ್ಟರ್ ಪ್ಲಾನ್ ಪ್ರಕಟಿಸುವ ಸಾಧ್ಯತೆಗಳಿವೆ.


*ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಲು ಬಜೆಟ್​​ನಲ್ಲಿ ಅನುದಾನದ ಜೊತೆಗೆ ನಿವೃತ್ತ ಪತ್ರಕರ್ತರಿಗೆ ಮಾಸಾಶನವನ್ನು ಹೆಚ್ಚಳ ಸಾಧ್ಯತೆ.


*ವೃತ್ತಿ ಆಧಾರಿತವಾದ ಕುಲಕಸುಬುಗಳ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ


*ಕೃಷಿ ಇನ್ನಷ್ಟು ಉತ್ತಮಗೊಳ್ಳಲು ಸಣ್ಣ ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಪದ್ಧತಿಯ ಗೋದಾಮುಗಳ ನಿರ್ಮಾಣ ಘೋಷಣೆ ಸಾಧ್ಯತೆ


*ಆಯವ್ಯಯದಲ್ಲಿ ವಿಕಲಚೇತನರಿಗೆ ವಿವಿಧ ಕಾರ್ಯಕ್ರಮಗಳ ಘೋಷಣೆ ಸಾಧ್ಯತೆ


*ವಿವಿಧ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಾಣ ಘೋಷಣೆ ಸಾಧ್ಯತೆ


*ಕರಾವಳಿ ಭಾಗದ ಚಟುವಟಿಕೆ, ಬಂದರುಗಳ ಅಭಿವೃದ್ಧಿ, ಮೂಲ ಉದ್ಯೋಗಕ್ಕೆ ಇಂಬು ಕೊಡುವ, ಪ್ರವಾಸೋದ್ಯಮವನ್ನು ವಿಸ್ತರಿಸುವ ದೊಡ್ಡ


what are the expectations about the budget to be announced by cm basavaraj bommai
ಕರ್ನಾಟಕ ಬಜೆಟ್ 2023-24


ಕಾರ್ಯಕ್ರಮ ಘೋಷಣೆ ಸಾಧ್ಯತೆ


*ಬೆಂಗಳೂರು ಮೂಲಭೂತಸೌಕರ್ಯ ಅಭಿವೃದ್ಧಿಗಾಗಿ ಬಂಪರ್ ಕೊಡುಗೆ ಸಾಧ್ಯತೆ


*ಬಜೆಟ್ ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ವಿಶೇಷವಾದ ಒತ್ತು, ಹಣಕಾಸಿನ ನೆರವು ಸಾಧ್ಯತೆ


*ನೇಕಾರರಿಗೆ ಇನ್ನಷ್ಟು ಬೆಂಬಲ ನೀಡಲು, ಕಚ್ಚಾ ವಸ್ತುವಿನಿಂದ ಹಿಡಿದು, ತಂತ್ರಜ್ಞಾನ ಅಭಿವೃದ್ಧಿಯವರಿಗೆ ಸಹಾಯ ಸಾಧ್ಯತೆ


*ಎಲ್ಲಾ ಸಮಾಜದ ಮಠ, ದಲಿತ ಮಠ, ಹಿಂದುಳಿದ ವರ್ಗಗಳ ಮಠಗಳಿಗೆ ಹೆಚ್ಚಿನ ಅನುದಾನ ಘೋಷಣೆ ಸಾಧ್ಯತೆ.


ಇದನ್ನೂ ಓದಿ:  Karnataka Budget 2023: ಬೊಮ್ಮಾಯಿ ಸರ್ಕಾರದಿಂದ ಜನ ಸಾಮಾನ್ಯರಿಗೆ ಸಿಗುತ್ತಾ ಭರ್ಜರಿ ಗಿಫ್ಟ್? ಈ ಸಲ ರಾಜ್ಯ ಬಜೆಟ್‌ ಮೊತ್ತ ಎಷ್ಟು?


*ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಯೋಜನೆ, ಏತ ನೀರವಾರಿಗಳಿಗೆ ಹೆಚ್ಚಿನ ಅನುದಾನ ಘೋಷಣೆ


*ವಿದ್ಯುತ್ ವಾಹನ ಖರೀದಿದಾರರಿಗೆ ತೆರಿಗೆ ವಿನಾಯಿತಿ, ಸಾರಿಗೆ ಇಲಾಖೆಗೆ ವಿದ್ಯುತ್ ಚಾಲಿತ ಬಸ್ ಗಳ ಖರೀದಿಗೆ ಅನುದಾನ

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು