ಕೇಂದ್ರ ಬಜೆಟ್ 2023 ಬೆನ್ನಲ್ಲೇ ಈಗ ನಾಳೆ (ಫೆ.17) ರಾಜ್ಯ ಬಜೆಟ್ (Karnataka Budget 2023) ಮಂಡನೆಯಾಗಲಿದೆ. ರಾಜ್ಯ ಬಜೆಟ್ ಕುರಿತಾಗಿ ಈಗಾಗಲೇ ನಿರೀಕ್ಷೆಗಳು ಹೆಚ್ಚಾಗಿದ್ದು, ನಿರೀಕ್ಷೆ, ಕುತೂಹಲಗಳಿಗೆ ನಾಳೆಯೇ ಉತ್ತರ ಸಿಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಹಣಕಾಸು ಖಾತೆಯನ್ನೂ ಅವರ ಬಳಿಯೇ ಇಟ್ಟುಕೊಂಡಿದ್ದರಿಂದ, ಬಜೆಟ್ (Budget ) ಮೇಲೆ ಜನಸಾಮನ್ಯರಿಗೆ ಸಾಕಷ್ಟು ನಿರೀಕ್ಷೆಗಳಿವೆ.
ರಾಜ್ಯ ಬಜೆಟ್ನಲ್ಲಿ ಬದಲಾವಣೆ ಇದೆಯೇ?
ರಾಜ್ಯ ಬಜೆಟ್ ಕುರಿತಾಗಿ ಕೆಲವು ಕುತೂಹಲಗಳು, ಚರ್ಚೆಗಳು ನಡೆಯುತ್ತಿರುವುದಂತು ನಿಜ, ಅದರಲ್ಲಿ ಮುಖ್ಯವಾಗಿ ರಾಜ್ಯ ಬಜೆಟ್ ಎಷ್ಟು ಮೊತ್ತದ್ದಾಗಿರಬಹುದು ಎಂಬ ಪ್ರಶ್ನೆಗಳು ಸದ್ಯ ಮೂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳ ಆದಾಯ ಸಂಗ್ರಹವು ನಿರೀಕ್ಷೆ ಮೀರಿ ಸಂಗ್ರಹವಾಗಿದ್ದರಿಂದ ಈ ಸಲ ರಾಜ್ಯ ಬಜೆಟ್ ಗಾತ್ರ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
3 ಲಕ್ಷ ಕೋಟಿ ರೂಪಾಯಿಯ ರಾಜ್ಯ ಬಜೆಟ್:
2023-24ನೇ ಸಾಲಿನ ಬಜೆಟ್ 3 ಲಕ್ಷ ಕೋಟಿ ರೂಪಾಯಿ ಗಾತ್ರದ್ದಾಗಿರಲಿದೆ ಎಂದು ವರದಿಗಳು ತಿಳಿಸಿದ್ದು, ಕಳೆದ ಸಲದ ಬಜೆಟ್ 2,65,720 ಕೋಟಿ ರೂಪಾಯಿ ಗಾತ್ರದ್ದಾಗಿತ್ತು. ಬಜೆಟ್ ಮತ್ತು ನೀತಿ ಅಧ್ಯಯನಗಳ ಕೇಂದ್ರದ ಹಿರಿಯ ಸಂಶೋಧನಾ ಸಲಹೆಗಾರ ಮಧುಸೂದನ್ ರಾವ್ ಬಿವಿ, ಬೊಮ್ಮಾಯಿ ಅವರು 3 ಲಕ್ಷ ಕೋಟಿಗಿಂತ ಕಡಿಮೆ ಬಜೆಟ್ ಅನ್ನು ಪ್ರಸ್ತಾಪಿಸಲು ಯಾವುದೇ ಬಲವಾದ ಕಾರಣವಿಲ್ಲ. ಹೀಗಾಗಿ ರಾಜ್ಯಕ್ಕೆ 3 ಲಕ್ಷ ಕೋಟಿ ರೂಪಾಯಿ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Prithvi Shaw: ಸೆಲ್ಫಿ ಕೊಡದ ಪೃಥ್ವಿ ಶಾ ಕಾರಿನ ಮೇಲೆ ಅಟ್ಯಾಕ್, ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ಸ್ವಲ್ಪದರಲ್ಲೇ ಬಚಾವ್!
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಈ ಸಲ ನಿರೀಕ್ಷೆ ಮೀರಿ ಆದಾಯ ಬಂದಿದೆ. ತೆರಿಗೆ ಆದಾಯ ಕೂಡ ನಿರೀಕ್ಷೆ ಮೀರಿ ಸಂಗ್ರಹವಾಗಿದೆ. ಇದರಲ್ಲಿ ಬಹುಪಾಲು ವಾಣಿಜ್ಯ ತೆರಿಗೆ, ಸಾರಿಗೆ (ಮೋಟಾರು ವಾಹನ ತೆರಿಗೆ), ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ.
ಅಂಕಿಅಂಶಗಳ ಪ್ರಕಾರ ಸಾರಿಗೆ (ಮೋಟಾರು ವಾಹನ ತೆರಿಗೆ), ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳು ಮತ್ತು ಅಂಚೆ ಚೀಟಿಗಳು ಮತ್ತು ನೋಂದಣಿ ಇಲಾಖೆಗಳು ಎಲ್ಲಾ ಪ್ರಮುಖ ಆದಾಯದ ಮೂಲಗಳು ಅವರ ವಾರ್ಷಿಕ ಸಂಗ್ರಹಣೆ ಗುರಿಗಳನ್ನು ಮೀರಿವೆ. ವಾಣಿಜ್ಯ ತೆರಿಗೆಗಳ ಸಂಗ್ರಹವು ಗುರಿಗಿಂತ 18,990 ಕೋಟಿ ರೂ.ಗಳಷ್ಟಿರುವ ನಿರೀಕ್ಷೆಯಿದ್ದರೆ, ಮುದ್ರಾಂಕಗಳು ಮತ್ತು ನೋಂದಣಿ ಮತ್ತು ಅಬಕಾರಿಗಳು ತಲಾ 1,000 ಕೋಟಿ ರೂ.ಗಳನ್ನು ಹೆಚ್ಚು ಸಂಗ್ರಹಿಸುವ ನಿರೀಕ್ಷೆಯಿದೆ.
2020-21 ಮತ್ತು 2021-22 ರಲ್ಲಿ ಕೇವಲ 15 ಲಕ್ಷ ಮತ್ತು 17 ಲಕ್ಷ ದಾಖಲೆಗಳನ್ನು ನೋಂದಾಯಿಸಲಾಗಿದ್ದು, ಈ ಹಣಕಾಸು ವರ್ಷದಲ್ಲಿ ಜನವರಿ 31ರ ವರೆಗೆ ರಾಜ್ಯವು 21 ಲಕ್ಷ ದಾಖಲೆಗಳನ್ನು ನೋಂದಾಯಿಸಿದೆ ಎಂದು ಇನ್ಸ್ಪೆಕ್ಟರ್ ಜನರಲ್ ಮತ್ತು ರಿಜಿಸ್ಟ್ರಾರ್ ಮಮತಾ ಬಿಆರ್ ಹೇಳಿದರು. ಒಟ್ಟಾರೆ ಬೆಳವಣಿಗೆ ಗಮನಾರ್ಹವಾಗಿದೆ ಮತ್ತು ಈ ವರ್ಷವೂ ನಮ್ಮ ಗುರಿಯನ್ನು ಮೀರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಮಾರ್ಚ್ 31ರ ಅಂತ್ಯಕ್ಕೆ ತೆರಿಗೆ ಸಂಗ್ರಹ 22,090 ಕೋಟಿ:
ಮಾರ್ಚ್ 31ರ ಅಂತ್ಯದ ವೇಳೆಗೆ ಒಟ್ಟಾರೆ ತೆರಿಗೆ ಸಂಗ್ರಹವು 22,090 ಕೋಟಿ ರೂಪಾಯಿಗಳಷ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಕೇಂದ್ರ ತೆರಿಗೆ ವಿಕೇಂದ್ರೀಕರಣದಿಂದ ಅಂದಾಜು 4,813 ಕೋಟಿ ರೂಪಾಯಿ ಮತ್ತು ಅನುದಾನದಿಂದ 2,000 ಕೋಟಿ ರೂಪಾಯಿ ಹೆಚ್ಚು ಆದಾಯವನ್ನು ರಾಜ್ಯ ನಿರೀಕ್ಷಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ತೆರಿಗೆಯೇತರ ಆದಾಯ ಸಂಗ್ರಹವು ರೂ 10,441 ಕೋಟಿ ಗುರಿಯನ್ನು ಮೀರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ