ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Assembly Election) ದಿನಾಂಕ ಘೋಷಣೆಯಾದ ಬಳಿಕ ಕಾಂಗ್ರೆಸ್ (Congress) ಪಕ್ಷ ಅಳೆದೂ ತೂಗಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು (2nd List) ಬಿಡುಗಡೆ ಮಾಡಿದೆ. ಇಂದು ಎಐಸಿಸಿ ಸಭೆಯಲ್ಲಿ (AICC Meeting) ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದ್ದು, 42 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ. ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿಯ ದೆಹಲಿಯಲ್ಲಿ (Delhi) ನಡೆಯಿತು. ಸಭೆಯಲ್ಲಿ ಭಾಗಿಯಾಗಲು, ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಬಿ.ಕೆ. ಹರಿಪ್ರಸಾದ್ ದೆಹಲಿಗೆ ತೆರಳಿದ್ದರು.
ಮಾರ್ಚ್ 25ರಂದು ಕಾಂಗ್ರೆಸ್ ವಿಧಾನಸಭಾ ಚುನಾವಣೆಗೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು.
42 ಕ್ಷೇತ್ರದ ಅಭ್ಯರ್ಥಿಗಳ ವಿವರ ಹೀಗಿದೆ
ನಿಪ್ಪಾಣಿ: ಕಾಕಾಸಾಹೇಬ್ ಪಾಟೀಲ್
ಗೋಕಾಕ್: ಮಹಾಂತೇಶ್ ಕಡಾಡಿ
ಕಿತ್ತೂರು: ಬಾಬಾಸಾಹೇಬ್ ಡಿ ಪಾಟೀಲ್
ಸವದತ್ತಿ: ವಿಶ್ವಾಸ ವಸಂತ ವೈದ್ಯ
ಮುಧೋಳ: ಆರ್ ಬಿ ತಿಮ್ಮಾಪುರ
ಬೀಳಗಿ: ಜಿಟಿ ಪಾಟೀಲ್
ಬಾದಾಮಿ: ಭೀಮಸೇನ ಚಿಮ್ಮನಕಟ್ಟಿ
ಬಾಗಲಕೋಟೆ: ಹುಲ್ಲಪ್ಪ ಮೇಟಿ
ಬಿಜಾಪುರ ನಗರ: ಅಬ್ದುಲ್ ಹಮೀದ್
ನಾಗಾಠಾಣಾ: ವಿಠಲ್ ಕಟಕ್ದೊಂಡ್
ಅಫಜಲ್ಪುರ: ಎಂವೈ ಪಾಟೀಲ್
ಯಾದಗಿರಿ: ಚನ್ನಾರೆಡ್ಡಿ ಪಾಟೀಲ್
ಗುರುಮಿಠಕಲ್: ಬಾಬುರಾವ್ ಚಿಂಚನಸೂರು
ಗುಲ್ಬರ್ಗಾ ದಕ್ಷಿಣ: ಅಲ್ಲಮಪ್ರಭು ಪಾಟೀಲ್
ಬಸವಕಲ್ಯಾಣ: ವಿಜಯ್ ಧರಂ ಸಿಂಗ್
ಗಂಗಾವತಿ: ಇಕ್ಬಾಲ್ ಅನ್ಸಾರಿ
ನರಗುಂದ: ಬಿಆರ್ ಯಾವಗಲ್
ಧಾರವಾಡ: ವಿನಯ್ ಕುಲಕರ್ಣಿ
ಕಲಘಟಗಿ: ಸಂತೋಷ್ ಲಾಡ್
ಶಿರಸಿ: ಭೀಮಣ್ಣ ನಾಯಕ್
ಯಲ್ಲಾಪುರ: ವಿಎಸ್ ಪಾಟೀಲ್
ಕೂಡ್ಲಿಗಿ: ಡಾ ಶ್ರೀನಿವಾಸ್
ಮೊಳಕಾಲ್ಮೂರು: ಎನ್ ವೈ ಗೋಪಾಲಕೃಷ್ಣ
ಚಿತ್ರದುರ್ಗ: ಕೆ ಸಿ ವೀರೇಂದ್ರ
ಹೊಳಲ್ಕೆರೆ: ಆಂಜನೇಯ ಎಚ್
ಚನ್ನಗಿರಿ: ಬಸವರಾಜ್ ಶಿವಗಂಗಾ
ತೀರ್ಥಹಳ್ಳಿ : ಕಿಮ್ಮನೆ ರತ್ನಾಕರ್
ಉಡುಪಿ: ಪ್ರಸಾದರಾಜ್ ಕಾಂಚಣ
ಕಡೂರು: ಆನಂದ್ ಕೆಎಸ್
ತುಮಕೂರು ನಗರ: ಇಕ್ಬಾಲ್ ಅಹ್ಮದ್
ಗುಬ್ಬಿ: ಎಸ್ ಆರ್ ಶ್ರೀನಿವಾಸ್
ಯಲಹಂಕ: ಕೇಶವ ರಾಜಣ್ಣ
ಯಶವಂತಪುರ: ಎಸ್ ಬಾಲರಾಜ್ ಗೌಡ
ಮಹಾಲಕ್ಷ್ಮಿ ಲೇಔಟ್: ಕೇಶವ ಮೂರ್ತಿ
ಪದ್ಮನಾಭನಗರ: ರಘುನಾಥ್ ನಾಯ್ಡು
ಮೇಲುಕೋಟೆ: ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ
ಇದನ್ನೂ ಓದಿ: Karnataka Election 2023: ಕರಾವಳಿಯಲ್ಲಿ ಬಿಜೆಪಿ ಬತ್ತಳಿಕೆ ಸೇರಿದ ‘ಪ್ರವೀಣ’ ಅಸ್ತ್ರ
ಮಂಡ್ಯ: ಪಿ ರವಿಕುಮಾರ್
ಕೆಆರ್ ಪೇಟೆ: ಬಿಎಲ್ ದೇವರಾಜ್
ಬೇಲೂರು : ಬಿ ಶಿವರಾಂ
ಮಡಿಕೇರಿ: ಡಾ ಮಂಥರ್ ಗೌಡ
ಚಾಮುಂಡೇಶ್ವರಿ: ಸಿದ್ದೇಗೌಡ
ಕೊಳ್ಳೆಗಾಲ: ಎ ಆರ್ ಕೃಷ್ಣಮೂರ್ತಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ