Karnataka Election 2023 Updates: ಇಂದಿನಿಂದ ಮೂರು ಪಕ್ಷಗಳ ಭರ್ಜರಿ ಪ್ರಚಾರ; ಚುನಾವಣೆಯ ಕ್ಷಣ ಕ್ಷಣದ ಮಾಹಿತಿ

Karnataka Assembly Election 2023: ಖ್ಯಾತ ರಾಜಕೀಯ ಮುಖಂಡರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಕರ್ನಾಟಕ ಚುನಾವಣೆಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಬೆಂಗಳೂರು: ಕರ್ನಾಟಕ ಚುನಾವಣೆಯ (Karnataka Election 2023) ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಾಮಪತ್ರ (Nomination) ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರರಾಗಿ ಕಣಕ್ಕಿಳಿದಿರುವ ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ರಾಷ್ಟ್ರೀಯ ರಾಜಕೀಯ ಪಕ್ಷಗಳು (Political Parties) ಪ್ರಯತ್ನಿಸುತ್ತಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಸೇರಿದಂತೆ ಖ್ಯಾತ ರಾಜಕೀಯ ಮುಖಂಡರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಕರ್ನಾಟಕ ಚುನಾವಣೆಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಮತ್ತಷ್ಟು ಓದು ...
23 Apr 2023 19:11 (IST)

Karnataka Election 2023 Live: ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಆರೋಗ್ಯ ಈಗ ಹೇಗಿದೆ?

23 Apr 2023 18:34 (IST)

Karnataka Election 2023 Live: Rahul Gandhi ಹೋದಲೆಲ್ಲಾ Congress ಅವನತಿ ಆಗಿದೆ

23 Apr 2023 18:31 (IST)

Karnataka Election 2023 Live: ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿಗಳನ್ನ ಭೇಟಿಯಾದ ಸಿಎಂ

ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿ ಶಿವಸಿದ್ದೇಶ್ವರ ಅವರನ್ನು ಭೇಟಿ ಮಾಡಿದ್ದು, ಸನ್ಮಾನ ಮಾಡಿ ಆಶಿರ್ವಾದ ಪಡೆದುಕೊಂಡಿದ್ದಾರೆ. ಕಂಚುಗಲ್ ಮಠದ ಮಹಾಲಿಂಗ ಸ್ವಾಮಿಜಿ, ವಿಜಯಪುರ ಟೌನ್ ಬಸವಕಲ್ಯಾಣ ಮಠದ ಶ್ರೀ ಸದಾಶಿವ ಸ್ವಾಮೀಜಿಗಳನ್ನು ಸಿಎಂ ಭೇಟಿ ಮಾಡಿದ್ದರು. ಆ ಬಳಿಕ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಂಡಿದ್ದಾರೆ.

23 Apr 2023 18:15 (IST)

Karnataka Election 2023 Live: ಡಿಕೆ ಶಿವಕುಮಾರ್ ಆಪ್ತನ ಬ್ಯಾಗ್​​ನಲ್ಲಿ ಹಣ ಪತ್ತೆ

ಡಿಕೆ ಶಿವಕುಮಾರ್ ಅವರನ್ನು ಬೈಂದೂರಿಗೆ ಸ್ವಾಗತಿಸಲು ಆಗಮಿಸಿದ್ದ ಉದ್ಯಮಿ ಯುಬಿ ಶೆಟ್ಟಿ ಅವರ ಕಾರಿನಲ್ಲಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 50 ಸಾವಿರ ರೂಪಾಯಿ ಪತ್ತೆಯಾಗಿದೆ. ಬೈಂದೂರು ಹರೇ ಶಿರೂರು ಹೆಲಿಪ್ಯಾಡ್ ಬಳಿ ಘಟನೆ ನಡೆದಿದ್ದು, ಯುಬಿ ಶೆಟ್ಟಿ ಕಾರು ಪರಿಶೀಲನೆ ನಡೆಸಿದ ಚುನಾವಣಾ ಅಧಿಕಾರಿಗಳಿಗೆ 50,000 ನಗದು ಸಿಕ್ಕಿತ್ತು. ಈ ವೇಳೆ ಅಧಿಕಾರಿಗಳು ಹಣದ ಬಗ್ಗೆ ದಾಖಲೆ ಕೇಳಿ ಸೀಜ್​ ಮಾಡಿದ್ದಾರೆ.

23 Apr 2023 17:10 (IST)

Karnataka Election 2023 Live: ದಳಪತಿಗಳ ಭದ್ರಕೋಟೆಗೆ ನಾಳೆ ಚುನಾವಣಾ ಚಾಣಕ್ಯ ಭೇಟಿ

ದಳಪತಿಗಳ ಭದ್ರಕೋಟೆಗೆ ಲಗ್ಗೆಯಿಡಲು ಕಮಲ ಪಡೆ ಸಜ್ಜಾಗಿದ್ದು, ನಾಳೆ ಹಾಸನ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಕಮಲ ನಾಯಕರು ಪ್ರಚಾರ ನಡೆಸಲಿದ್ದಾರೆ. ಇಂದು ಅರಸೀಕೆರೆ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಮತ್ತು ಸುದೀಪ್ ರೋಡ್ ನಡೆಸಿ ಅರಸೀಕೆರೆ ‌ಬಿಜೆಪಿ ಅಭ್ಯರ್ಥಿ ಜಿ.ವಿ ಬಸವರಾಜು ಪರ ಮತಯಾಚನೆ ಮಾಡಲಿದ್ದಾರೆ. ನಾಳೆ ಜಿಲ್ಲೆಗೆ ಬಿಜೆಪಿ ಚುನಾವಣಾ ಚಾಣಾಕ್ಷ ಅಮಿತ್ ಶಾ ಆಗಮಿಸಲಿದ್ದು, ಆಲೂರು ಸಕಲೇಶಪುರ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಪರ ಮತ ಬೇಟೆ ನಡೆಸಲಿದ್ದಾರೆ.

23 Apr 2023 17:05 (IST)

Karnataka Election 2023 Live: ಎದುರಾಳಿ ಅಭ್ಯರ್ಥಿ ಮನೆಗೆ ತೆರಳಿ ಮತಯಾಚನೆ

ಮಂಡ್ಯದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರವಾಗಿ ಮಗ, ಸೊಸೆಯ ಪ್ರಚಾರ ನಡೆಸಿ ಎದುರಾಳಿ ಮನೆಯಲ್ಲಿ ಮತಯಾಚನೆ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಿಎಸ್ ಪುಟ್ಟರಾಜು ಮಗ ಶಿವರಾಜ್ ಮತ್ತು ಸೊಸೆ, ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಮನೆಗೆ ತೆರಳಿ ಮತಯಾಚನೆ ಮಾಡಿದರು. ಸುನಿತಾ ಪುಟ್ಟಣ್ಣಯ್ಯ ಅವರನ್ನ ಆಲಿಂಗಿಸಿ ಪುಟ್ಟರಾಜು ಸೊಸೆ ಮತಯಾಚಿಸಿದರು. ಪುಟ್ಟರಾಜು ಮಗ ಶಿವರಾಜ್​, ಸುನೀತಾ ಪುಟ್ಟಣ್ಣಯ್ಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

23 Apr 2023 16:21 (IST)

Karnataka Election 2023 Live: ಬೆಂಗಳೂರಿನಲ್ಲಿ ₹76.30 ಕೋಟಿ ಮೌಲ್ಯದ ವಸ್ತುಗಳು ಸೀಜ್​!

ನೀತಿ ಸಂಹಿತೆ ಜಾರಿ ಬಳಿಕ ಈವರೆಗೆ ಬೆಂಗಳೂರಿನಲ್ಲಿ 75 ಕೋಟಿ ದಾಟಿದ ಚುನಾವಣಾ ಆಕ್ರಮ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದರಲ್ಲಿ 11.35 ಕೋಟಿ ನಗದು ಹಣ, 25.91 ಕೋಟಿ ಮೌಲ್ಯದ 5.95 ಲಕ್ಷ ಲೀಟರ್‌ ಮದ್ಯ, 10.26 ಕೋಟಿ ಮೌಲ್ಯದ 377 ಕೆ.ಜಿ ಡ್ರಗ್ಸ್, 17 ಕೋಟಿ ಮೌಲ್ಯದ ಚಿನ್ನ, ಗಿಫ್ಟ್ ಗಳು ಹಾಗೂ 5.74 ಕೋಟಿ ಮೌಲ್ಯದ 49937 ವಸ್ತುಗಳು ಸೀಜ್ ಮಾಡಲಾಗಿದೆ. ಈ ಸಂಬಂಧ 2,894 ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಒಟ್ಟಾರೆ ಒಟ್ಟು 76.30 ಕೋಟಿ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ.

23 Apr 2023 16:06 (IST)

Karnataka Election 2023 Live: ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಕೂಡಲಸಂಗಮಕ್ಕೆ ಆಗಮಿಸಿ, ಬಸವಣ್ಣನವರ ಐಕ್ಯ ಮಂಟಪದ ದರ್ಶನ ಪಡೆದರು. ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿ ಪ್ರಮುಖರು ಸಾಥ್ ನೀಡಿದ್ದರು.

23 Apr 2023 15:58 (IST)

Karnataka Election 2023 Live: ಯಲಹಂಕದಲ್ಲಿ ಸಿಎಂ ಬೊಮ್ಮಾಯಿ ಭರ್ಜರಿ ಪ್ರಚಾರ

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಭರ್ಜರಿ ಪ್ರಚಾರ ನಡೆಸಿದ್ದಾರೆ. ಜನವಾಹಿನಿ ವಾಹನದಲ್ಲಿ ಶಾಸಕ ವಿಶ್ವನಾಥ್ ಅವರೊಂದಿಗೆ ಸಿಎಂ  ರೋಡ್ ಶೋ ನಡೆಸಿದ್ದು, ಸಾವಿರಾರರು ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕರ್ತರ ನಡುವೆ ಸಿಎಂ ವಾಹನದ ಮೇಲೆ ನಿಂತು ಹಾಡಿಗೆ ಡ್ಯಾನ್ಸ್ ಮಾಡಿ ಶಿಳ್ಳೆ ಹೊಡೆದು ಹುರಿದುಂಬಿಸಿದ್ದಾರೆ.

23 Apr 2023 14:39 (IST)

Karnataka Election 2023 Live: Siddaramaiah ಕೈಯನ್ನು ಕುತೂಹಲದಿಂದ ನೋಡಿದ ರಾಹುಲ್ |

23 Apr 2023 14:30 (IST)

Karnataka Election Live 2023: ಮಾಜಿ ಸಿಎಂ ಜಗದೀಶ್ ಶೆಟ್ಟೆರ್  ಪ್ರಶ್ನೆ

ಎಲ್ಲಿಂದ ಬೇಕಾದ್ರೂ ವಿಸ್ತಾರಕರು ಬರಲಿ. ಆದ್ರೆ ಅರ್​​​ಎಸ್​​ಎಸ್ ಕೇಂದ್ರ ಸ್ಥಾನವಿರುವ ನಾಗಪುರದಲ್ಲಿಯೇ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಸೋತಿತ್ತು. ಹಾಗಿದ್ರೆ ವಿಸ್ತಾರಕರ ತಂತ್ರಗಾರಿಕೆ ಅಲ್ಲೇಕೆ ವಿಫಲವಾಯ್ತು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟೆರ್  ಪ್ರಶ್ನೆ ಮಾಡಿದ್ದಾರೆ.

 

23 Apr 2023 13:59 (IST)

Karnataka Election 2023 Live: ಸ್ವರೂಪ್ ಹೇಳಿಕೆ

ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಸಿಗ್ತಿದೆ. ಚರ್ಚ್‌ನಲ್ಲಿ ಫಾದರ್ ಆಶೀರ್ವಾದ ಪಡೆದು, ಕ್ರಿಶ್ಚಿಯನ್ ಬಾಂಧವರ ಮತಯಾಚನೆ ಮಾಡಿದ್ದೇನೆ. ಕುಮಾರಣ್ಣರ ಪಂಚರತ್ನ ಯೋಜನೆ ಹಾಗೂ ಪ್ರಣಾಳಿಕೆಯಲ್ಲಿರುವ ಭರವಸೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದೀನಿ. ನಿನ್ನೆ ರಂಜಾನ್ ಹಬ್ಬದ ದಿನ ಮಸೀದಿಗಳಿಗೆ ಹೋಗಿ ಶುಭಕೋರಿ ಮತಯಾಚನೆ ಮಾಡಿದ್ದೀನಿ. ಮುಸ್ಲಿಂ ಬಾಂಧವರು ಅಭೂತಪೂರ್ವವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಬಹಳ ಒಮ್ಮತವಾಗಿ ಎಲ್ಲರೂ ಕೂಡ ಜೆಡಿಎಸ್ ಅಭ್ಯರ್ಥಿಯಾದ ನನಗೆ ಸಹಕಾರ ಮಾಡ್ತಿನಿ ಅಂತ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಹಾಸನ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಹೇಳಿದ್ದಾರೆ.

23 Apr 2023 13:27 (IST)

Karnataka Election 2023: ಶಿವಾಜಿನಗರದಲ್ಲಿ JDSಗೆ ಬಿಗ್ ಶಾಕ್!

23 Apr 2023 12:57 (IST)

Karnataka Election 2023 Live: ಸಿಎಂ ವಾಹನ ತಪಾಸಣೆ

ಚುನಾವಣಾ ಅಧಿಕಾರಿಗಳು ಸಿಎಂ ಬೊಮ್ಮಾಯಿ ಅವರ ಜಯವಾಹನಿ ವಾಹನವನ್ನು ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಹೊಸಹುಡ್ಯ ಕ್ರಾಸ್ ಬಳಿ ತಪಾಸಣೆ ಮಾಡಿದ್ದಾರೆ. ಜಯವಾಹನಿ ಸಿಎಂ ಪ್ರಚಾರದ ವಾಹನವಾಗಿದೆ.

23 Apr 2023 12:28 (IST)

Karnataka Election 2023 Live: ಕೂಡಲಸಂಗಮದಲ್ಲಿ ರಾಹುಲ್ ಗಾಂಧಿ

ಕೂಡಲಸಂಗಮದ ಸಂಗಮನಾಥ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಸಂಗಮನಾಥನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿಯವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ವೇಣುಗೋಪಾಲ ಸಾಥ್ ನೀಡಿದ್ದಾರೆ.

23 Apr 2023 12:08 (IST)

Karnataka Election 2023 Live: ಇಬ್ಬರು ಐಪಿಎಸ್ ಆಫೀಸರ್ ಗಳ ವರ್ಗಾವಣೆ

ಚುನಾವಣೆಗೆ ದಿನಗಣನೆ ಆರಂಭವಾಗಿದ್ದು. ಇಬ್ಬರು ಐಪಿಎಸ್ ಆಫೀಸರ್ ಗಳ ವರ್ಗಾವಣೆಗೊಳಿಸಲಾಗಿದೆ. ಧರ್ಮೇಂದ್ರ ಕುಮಾರ್ ಮೀನಾ – ಸುಪರ್ಡೆಂಡ್ ಆಫ್ ಪೊಲೀಸ್ ಆ್ಯಂಡ್ ಡೈರೆಕ್ಟರ್ ಫೋರೆನ್ಸಿನ್ ಲ್ಯಾಬ್ ಬೆಂಗಳೂರಿನಿಂದ ವೈಟ್ ಫೀಲ್ಡ್ ನ ಡೆಪ್ಯುಟಿ ಕಮಿಷನರ್ ಆಗಿ ನೇಮಕ‌ ಮಾಡಲಾಗಿದೆ.

ಅರುಣ್ ಕುಮಾರ್ (ಸುಪರ್ಡೆಂಟ್ ಆಫ್ ಪೊಲೀಸ್ ಆ್ಯಂಡ್ ಪ್ರಿನ್ಸಿಪಾಲ್, ಪೊಲೀಸ್ ಟ್ರೈನಿಂಗ್ ಸ್ಕೂಲ್ ಕಲಬುರಗಿ) ಸುಪರ್ಡೆಂಟ್ ಆಫ್ ಪೊಲೀಸ್ ದಾವಣಗೆರೆ ಆಗಿ ನೇಮಕ ಮಾಡಲಾಗಿದೆ.

23 Apr 2023 11:55 (IST)

ಕಾಂಗ್ರೆಸ್, ಸಿಪಿಐ ನಡುವೆ ಚುನಾವಣಾ ಪೂರ್ವ ಮೈತ್ರಿ

ಬಿಜೆಪಿಯ ದುರಾಡಳಿತ, 40% ಕಮಿಷನ್, ಕೋಮುವಾದಿ ಬಿಜೆಪಿ ವಿರುದ್ದದ ನಮ್ಮ ಹೋರಾಟಕ್ಕೆ ಸಿಪಿಐ ಬೆಂಬಲ ನೀಡುತ್ತಿದೆ. 215 ಕ್ಷೇತ್ರಗಳಲ್ಲಿ ಯಾವುದೇ ಷರತ್ತು ಇಲ್ಲದೆ ಬೆಂಬಲ ನೀಡುತ್ತಿರುವ ವಿಷಯವನ್ನು ನಡೆಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ತಿಳಿಸಿದರು.

23 Apr 2023 11:40 (IST)

Karnataka Election 2023 Live: ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿ ಶೆಟ್ಟರ್

ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿ ಶೆಟ್ಟರ್

23 Apr 2023 11:16 (IST)

Karnataka Election 2023 Live: ಜೆಡಿಎಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ

ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ (Shivaji Nagar Assembly Constituency) ಜೆಡಿಎಸ್ ಅಭ್ಯರ್ಥಿ ‌ಅಬ್ದುಲ್ ಜಫರ್ ಅಲಿ (Abdul Zafar Ali) ನಾಮಪತ್ರ ತಿರಸ್ಕೃತಗೊಂಡಿದೆ.

23 Apr 2023 10:43 (IST)

Karnataka Election 2023 Live: ಕೂಡಲಸಂಗಮದತ್ತ ಹೊರಟ ರಾಹುಲ್ ಗಾಂಧಿ

ಕೂಡಲಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಕೆಲವೇ ಸಮಯದಲ್ಲಿ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಬಸವ ಮಂಟಪದ ಬಸವ ವೇದಿಕೆಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ‌.ಬಿ ಪಾಟೀಲ್ ಆಗಮಿಸಿದ್ದು, ವೇದಿಕೆ ತಯಾರಿ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.