Karnaraka Election 2023: ನಾಮಪತ್ರ ಪ್ರಕ್ರಿಯೆ ಮುಗಿತು, ಇನ್ಮುಂದೆ ರಂಗೇರಲಿದೆ ಪ್ರಚಾರ

Karnataka Assembly Election: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಚುನಾವಣೆ ಪ್ರಚಾರ ಅಬ್ಬರ ಹೆಚ್ಚಾಗಲಿದೆ.

ಬೆಂಗಳೂರು: ಕರ್ನಾಟಕ ಚುನಾವಣೆಗೆ (Karnataka Election) ನಾಮಪತ್ರ (Nomination) ಸಲ್ಲಿಕೆ ಭರಾಟೆ ಮುಗಿದಿದೆ. ಇಂದಿನಿಂದ ಅಭ್ಯರ್ಥಿಗಳ (Candidates) ಚುನಾವಣೆ ಪ್ರಚಾರ ವೇಗ ಪಡೆದುಕೊಳ್ಳಲಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಪಿಎಂ ಮೋದಿ (PM Modi), ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಸೇರಿದಂತೆ ಬಿಜೆಪಿ ಘಟಾನುಘಟಿ ನಾಯಕರೆಲ್ಲಾ ರಾಜ್ಯಕ್ಕೆ ಬರ್ತಿದ್ದಾರೆ. ಇತ್ತ ಕಾಂಗ್ರೆಸ್ ಸಹ ಹೈಕಮಾಂಡ್ ನಾಯಕರನ್ನು ಚುನಾವಣೆ ಪ್ರಚಾರಕ್ಕೆ ಕರೆಸಿಕೊಳ್ಳುತ್ತಿದೆ.

ಮತ್ತಷ್ಟು ಓದು ...
21 Apr 2023 17:52 (IST)

Karnataka Election 2023 Live: ಬಳ್ಳಾರಿ ಜೆಡಿಎಸ್​ ಟಿಕೆಟ್​ ಆಕಾಂಕ್ಷಿ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ

ಬಳ್ಳಾರಿ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಮುನ್ನಾಬಾಯಿ ಅವರು ಜನಾರ್ದನ ರೆಡ್ಡಿ ಅವರ ಕೆಆರ್ ಪಿಪಿ ಸೇರ್ಪಡೆಯಾಗಿದ್ದಾರೆ. ಬಳ್ಳಾರಿ ನಗರ ಕೆಆರ್ ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಕೊನೆ ಕ್ಷಣದಲ್ಲಿ ಕಾಂಗ್ರೆಸ್​ ಪಕ್ಷದಿಂದ ಬಂಡಾಯ ಬಂದಿದ್ದ ಅನಿಲ್ ಲಾಡ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಿತ್ತು. ಇದರಿಂದ ಮನನೊಂದ ಮುನ್ನಾಬಾಯಿ ಅವರು, ಅಪಾರ ಬೆಂಬಲಿಗರೊಂದಿಗೆ ಕೆಆರ್ ಪಿಪಿ ಸೇರ್ಪಡೆಯಾಗಿದ್ದಾರೆ.

21 Apr 2023 17:49 (IST)

Karnataka Election 2023 Live: ಮಾಲೂರು ಬಂಡಾಯ ಅಭ್ಯರ್ಥಿಗೆ ಸುಧಾಕರ್​ ಗಾಳ

ಮಾಲೂರು ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್​ಗೆ ಬಿಜೆಪಿ ಗಾಳ ಹಾಕಲಾಗಿದೆ ಅಂತೆ. ಈ ಬಗ್ಗೆ ವಿಜಯ್ ​​ಕುಮಾರ್ ಜೊತೆ ಸಚಿವ ಕೆ. ಸುಧಾಕರ್ ಮಾತುಕತೆ ನಡೆಸಿದ್ದು, ನಿಗಮ ಮಂಡಳಿ ಆಫರ್ ನೀಡಲಾಗಿದೆಯಂತೆ. ಮಾಲೂರು ಕಣದಿಂದ ಹಿಂದೆ ಸರಿಯುವಂತೆ ಸೂಚಿಸಲಾಗಿದೆಯಂತೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯ್​ಕುಮಾರ್​​ ನಾಮಿನೇಷನ್ ವಾಪಸ್ ಹಿಂಪಡೆಯಲ್ಲ ಎಂದಿದ್ದಾರೆ.

21 Apr 2023 17:36 (IST)

Karnataka Election 2023 Live: ‘ಕೈ’ ಕೊಟ್ಟ ಶಾಂತವೀರಪ್ಪ

ಶಿಕಾರಿಪುರದ ಕಾಂಗ್ರೆಸ್‌ ಮುಖಂಡ ಶಾಂತವೀರಪ್ಪ ಕಾಂಗ್ರೆಸ್​ಗೆ ಗುಡ್​​ಬೈ ಹೇಳಿದ್ದಾರೆ. ಇದಾದ ಬಳಿಕ ಮಾತನಾಡಿದ ಶಾಂತವೀರಪ್ಪ ಯಡಿಯೂರಪ್ಪನಿಂದಾಗಿ 2 ಬಾರಿ ನನಗೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಜೊತೆ ಯಡಿಯೂರಪ್ಪ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ. ಜೀತದಾಳುಗಳನ್ನಾಗಿ ಮಾಡಿಕೊಂಡು ರಾಜಕೀಯ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ.

21 Apr 2023 16:42 (IST)

Karnataka Election 2023 Live: ಅಮಿತ್ ಶಾ ರೋಡ್​ ಶೋ ರದ್ದು!

ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಇಂದು ದೇವನಹಳ್ಳಿ ಬಳಿಯ ವಿಜಯಪುರ ಪಟ್ಟಣದಲ್ಲಿ ನಡೆಯ ಬೇಕಿದ್ದ ಅಮಿತ್ ಶಾ ರೋಡ್ ಶೋ ರದ್ದಾಗಿದೆ. ಅಮಿತ್ ಶಾ ಏರ್ಪೋಟ್ ನಿಂದ ಬೆಂಗಳೂರಿಗೆ ತೆರಳುವ ನಿರೀಕ್ಷೆ ಇದ್ದು, ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಅಮಿತ್​ ಶಾ, ಸಿಎಮ ಬೊಮ್ಮಾಯಿ ಹಾಗೂ ಸಚಿವ ಡಾ ಕೆ ಸುಧಾಕರ್ ಅವರೊಂದಿಗೆ ವಿಐಪಿ ಲಾಂಜ್​ನಲ್ಲಿ ಕಾಯುತ್ತಿದ್ದಾರೆ.

21 Apr 2023 15:31 (IST)

Karnataka Election 2023 Live: ಪ್ರಶಾಂತ್ ಮಾಡಾಳ್​ಗೆ ಹೈಕೋರ್ಟ್ ಜಾಮೀನು

ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಶಾಂತ್​ ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಜಾಮೀನು ನೀಡಿ ಆದೇಶ ನೀಡಿದೆ. ಮನೆಯಲ್ಲಿ 8 ಕೋಟಿ ರೂಪಾಯಿ ಪತ್ತೆಯಾದ ಪ್ರಕರಣದ ಸಂಬಂಧ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧನ ಮಾಡಿದ್ದರು.

21 Apr 2023 15:25 (IST)

Karnataka Election 2023 Live: ಡಿ.ಕೆ ಶಿವಕುಮಾರ್​ಗೆ ಭಯ ಯಾಕೆ?

ರಾಮನಗರದ ಕನಕಪುರದಲ್ಲಿ ಸ್ಪರ್ಧಿಸುತ್ತಿರುವ ಆರ್.ಅಶೋಕ್, ದೇಗುಲ ಮಠಕ್ಕೆ ಭೇಟಿ ನೀಡಿದ್ದಾರೆ. ಸಚಿವ ಆರ್‌.ಅಶೋಕ್​ ಮಠದಲ್ಲಿ ಪೂಜೆ ಸಲ್ಲಿಸಿದ್ದರು. ಬಳಿಕ ಮಾತಾಡಿದ ಅವರು, ಕನಕಪುರದಲ್ಲಿ ಯಾರೇ ಅಭ್ಯರ್ಥಿ ಆದರೂ ನಾನು ಚುನಾವಣೆಗೆ ಎದರಿಸಲು ಸಿದ್ಧನಿದ್ದೇನೆ. ಕಾಂಗ್ರೆಸ್​ನಲ್ಲಿ ಹಲವರು ಸಿಎಂ ರೇಸ್​ನಲ್ಲಿದ್ದಾರೆ. ಸಿದ್ದರಾಮಯ್ಯ, ಎಂ.ಬಿ ಪಾಟೀಲ್, ಪರಮೇಶ್ವರ್ ಇದ್ದಾರೆ. ಡಿಕೆ ಶಿವಕುಮಾರ್ ಮಾತ್ರ ಯಾಕೆ ಭಯ ಪಡ್ತಾರೆ ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.

21 Apr 2023 14:24 (IST)

Karnataka Election 2023 Live: ಯಡಿಯೂರಪ್ಪರಿಗೆ 81 ವರ್ಷವಾದ್ರೂ ರಟ್ಟೆ ಗಟ್ಟಿ ಇದೆ

21 Apr 2023 14:03 (IST)

Karnataka Election 2023 Live: ವಿನಯ್ ಕುಲಕರ್ಣಿಗೆ ಶಾಕ್

ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. ವಿನಯ್ ಕುಲಕರ್ಣಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

21 Apr 2023 13:53 (IST)

Karnataka Election 2023 Live: ಬಿಜೆಪಿಯಿಂದ ಸತಿ-ಪತಿ ನಾಮಿನೇಷನ್

ಚಿತ್ತಾಪುರ ಬಿಜೆಪಿ ಅಭ್ಯರ್ಥಿಗೂ ನಾಮಪತ್ರ ತಿರಸ್ಕಾರದ ಭಯ ಕಾಡ್ತಿದೆ. ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ನಾಮಪತ್ರ ತಿರಸ್ಕೃತಗೊಳ್ಳುವ ಭಯ ಇರೋದರಿಂದ ಅವರ ಪತ್ನಿ ಭಾರತಿ ಮಣಿಕಂಠ ರಾಠೋಡ್ ಕೂಡಾ ನಾಮಿನೇಷನ್ ಮಾಡಿದ್ದಾರೆ. ನಿನ್ನೆ ಸಂಜೆ ಚಿತ್ತಾಪುರ ತಹಶೀಲ್ದಾರ್ ಕಚೇರಿಯಲ್ಲಿ ಭಾರತಿ ನಾಮಪತ್ರ ಸಲ್ಲಿಸಿದ್ದಾರೆ. ಮಣಿಕಾಂತ್ ರಾಥೋಡ್ ಮೇಲೆ 40ಕೂ ಹೆಚ್ಚು ಪ್ರಕರಣ ಇವೆ. ಆದ್ರಿಂದ ನಾಮಪತ್ರ ತಿರಸ್ಕಾರದ ಭೀತಿ ಎದುರಾಗಿದೆ.

21 Apr 2023 13:35 (IST)

Karnataka Election 2023 Live: ಜಮೀರ್ ಅಹ್ಮದ್ ಖಾನ್​ಗೆ ಸಂಕಷ್ಟ

ಚಾಮರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಆಹಮದ್ ನಾಮಪತ್ರ ತಿರಸ್ಕರಿಸುವಂತೆ ಚುನಾವಣಾಧಿಕಾರಿಗಳಿಗೆ ಬಿಜೆಪಿ ಮನವಿ ಮಾಡಿಕೊಂಡಿದೆ. ನಾಮಪತ್ರ ಸಲ್ಲಿಕೆಯ ವಿವರದಲ್ಲಿ ಒಂದು ಕಾಲಂ ಖಾಲಿ ಬಿಡಲಾಗಿದೆ. ಲೋಕಾಯುಕ್ತಕ್ಕೆ ಮಾಹಿತಿ ಸಲ್ಲಿಸುವ ವೇಳೆ ತನ್ನ ಅವಲಂಬಿತರ ಹೆಸರಿನಲ್ಲಿ ತಾಯಿ ಹೆಸರು ಸೇರಿಸಿದ್ದಾರೆ. ಆದ್ರೆ ನಾಮಪತ್ರದಲ್ಲಿ ಮಾತ್ರ ತಾಯಿ ಹೆಸರನ್ನು ಪ್ರಸ್ತಾಪಿಸಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶ ವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ನಾಮಪತ್ರ ತಿರಸ್ಕರಿಸುವಂತೆ ಚಾಮರಾಜಪೇಟೆಯ ನವಭಾರತ ಸೇನಾ ಪಾರ್ಟಿಯ ವಿಧಾನಸಭಾ ಅಭ್ಯರ್ಥಿ ರುಕ್ಮಂಗ ಎಂನವರು ದೂರು ಸಲ್ಲಿಸಿದ್ದಾರೆ.

21 Apr 2023 13:00 (IST)

Karnataka Election 2023 Live: ಡಿಕೆ ಶಿವಕುಮಾರ್ ನಿರಾಳ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಲ್ಲಿಸಿದ್ದ ನಾಲ್ಕು ನಾಮಪತ್ರಗಳು ಸ್ವೀಕೃತವಾಗಿವೆ. ಚುನಾವಣಾ ಆಯೋಗ ನಾಮಪತ್ರ ಅಂಗೀಕರಿಸಿದ್ದು, ಡಿಕೆ ಶಿವಕುಮಾರ್ ಸ್ಪರ್ಧೆಗೆ ಯಾವುದೇ ಅಡ್ಡಿ ಇಲ್ಲ

21 Apr 2023 12:54 (IST)

Karnataka Election 2023 Live: ಯಡಿಯೂರಪ್ಪ ಅವರ ರಟ್ಟೆ ಇನ್ನೂ ಗಟ್ಟಿಯಾಗಿದೆ

ಯಡಿಯೂರಪ್ಪ ಅವರ ರಟ್ಟೆ ಇನ್ನೂ ಗಟ್ಟಿ ಇದೆ . ಯಡಿಯೂರಪ್ಪ ‌ಇವತ್ತು ರಾಜ್ಯದ ಮುಖ್ಯಮಂತ್ರಿ ಅಲ್ಲ ಪಕ್ಷದ ರಾಜ್ಯಾಧ್ಯಕ್ಷರೂ ಅಲ್ಲ. ಆದರೂ ಸಹ 81 ನೇ ವಯಸ್ಸಿನಲ್ಲು ಸಹ ಅವರ ರಟ್ಟೆ ಇನ್ನೂ ಗಟ್ಟಿ ಇದೆ. ಅವರು ಸುಮ್ಮನೆ ಕೂರುವ ಜಾಯಮಾನದವರಲ್ಲ. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ತನಕ ಯಡಿಯೂರಪ್ಪ ವಿರಮಿಸುವುದಿಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.

21 Apr 2023 12:34 (IST)

Karnataka Election 2023 Live: ಡಿಕೆಶಿ ಹೇಳಿದ್ದೇನು?

21 Apr 2023 12:29 (IST)

Karnataka Election 2023 Live: ಯಾಕೆ ಡಿಕೆ ಶಿವಕುಮಾರ್ ಭಯ ಪಡ್ತಾರೆ

ತಪ್ಪಿದ್ದರೆ ನಾಮಪತ್ರ ತಿರಸ್ಕೃತ ಆಗುತ್ತೆ. ಅದಕ್ಕೆ ಯಾಕೆ ಡಿಕೆ ಶಿವಕುಮಾರ್ ಭಯ ಪಡ್ತಾರೆ. ನಮ್ಮ ಪಕ್ಷದ ಲೀಗಲ್ ಸೆಲ್ ಅವರು ಕನಕಪುರಕ್ಕೆ ಬಂದಿದ್ದಾರೆ. ವ್ಯತ್ಯಾಸ ಇದ್ದರೆ ಅಲ್ಲೇ ಅಬ್ಜೆಕ್ಷನ್ ಮಾಡ್ತಾರೆ. ಕನಕಪುರ ಕ್ಷೇತ್ರದ ಚುನಾವಣೆಯನ್ನು ಹೈಕಮಾಂಡ್ ನೋಡಕೊಳ್ಳುತ್ತಿದೆ. ಇಲ್ಲಿ ಯಾವ ರೀತಿ ಪ್ರಚಾರ ಮಾಡಬೇಕು ಅನ್ನೋದನ್ನು ಕೂಡ ಹೈಕಮಾಂಡ್ ನಿರ್ಧಾರ ಮಾಡುತ್ತದೆ‌ಕನಕಪುರದಲ್ಲಿ ಯಾರೇ ಅಭ್ಯರ್ಥಿ ಆದರೂ ಕೂಡ ನಾನು ಎದುರಿಸುತ್ತೇನೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

21 Apr 2023 11:51 (IST)

Karnataka Election 2023 Live: ಮೈಸೂರಿನಲ್ಲಿ ರಂಗೇರಿದ ಚುನಾವಣಾ ಅಖಾಡ

ಮೈಸೂರು ಚುನಾವಣಾ ಅಖಾಡಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಎಂಟ್ರಿ ಕೊಟ್ಟಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ಆಯೋಜನೆ ಮಾಡಲಾಗಿರುವ ಮೈಸೂರು ವಿಭಾಗದ ಕಾರ್ಯಕರ್ತರ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

21 Apr 2023 11:30 (IST)

Karnataka Election 2023 Live: ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೆ ಡಿಕೆಶಿ ಆಹ್ವಾನ

ಬೆಳಕು ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಗಮನಿಸಿ. ರಾಜ್ಯಕ್ಕೆ ಒಳ್ಳೆಯದಾಗಲಿದೆ ನೀವೆಲ್ಲರೂ ಮುಕ್ತ ಕಂಠದಿಂದ ಪಕ್ಷಕ್ಕೆ ಬನ್ನಿ. ಬೇಜಾರು ಮಾಡಿಕೊಳ್ಳದೆ ಎಲ್ಲರೂ ಪಕ್ಷಕ್ಕೆ ಬನ್ನಿ. ಪಕ್ಷ ಎಲ್ಲರಿಗೂ ಮುಕ್ತ ಅವಕಾಶ ನೀಡಲಿದೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರನ್ನು ಡಿಕೆ ಶಿವಕುಮಾರ್ ಆಹ್ವಾನಿಸಿದರು.

21 Apr 2023 11:08 (IST)

Karnataka Election Live 2023: ಪ್ರಧಾನಿ ಮೋದಿ ಪ್ರಶಂಸೆ ಬಿಜೆಪಿ ಸಂಸ್ಕಾರ

ಇವತ್ತು ಬೆಳಗ್ಗೆ ಪ್ರಧಾನಿ ಮೋದಿ ಕರೆ ಮಾಡಿದ್ದರು. ಮೋದಿಯವರ ಕರೆ ಅಂದಾಗ ನನಗೆ ಆಶ್ಚರ್ಯವಾಯ್ತು. ಹಿರಿಯರ ಸೂಚನೆ ಪ್ರಕಾರ ನಿವೃತ್ತಿ ಪತ್ರ ಬರೆದಿದ್ದೆ. ಈ ಹಿನ್ನೆಲೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಶೆಟ್ಟರ್ ಪಕ್ಷ ಬಿಡುವಾಗ ಅವರಿಗೆ ಪತ್ರ ಬರೆದಿದ್ದೆ. ನನ್ನ ನಿರ್ಧಾರ ನನಗೆ ವಿಶೇಷ ಅನಿಸಿಲ್ಲ. ಪ್ರಧಾನಿ ಮೋದಿ ಪ್ರಶಂಸೆ ಬಿಜೆಪಿ ಸಂಸ್ಕಾರ. ಟಿಕೆಟ್ ಸಿಗೋದಿಲ್ಲ ಅಂತ ಬೇಸರ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

21 Apr 2023 10:39 (IST)

Karnataka Election 2023 Live: ಬೀದರ್ ಜಿಲ್ಲೆಗೆ ನಡ್ಡಾ ಆಗಮನ

ಗಡಿ‌ ಜಿಲ್ಲೆ ಬೀದರ್‌ಗೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸಲಿದ್ದಾರೆ. ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜಿಲ್ಲೆಯ ಪ್ರಮುಖ ಸ್ವಾಮೀಜಿಗಳ ಜೊತೆ ಸಭೆ ನಡೆಸಲಿದ್ದಾರೆ. ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ತಗಳನ್ನಾದರೂ ಗೆಲ್ಲಲೇಬೆಕೆಂದು ಬಿಜೆಪಿ ಪಣತೊಟ್ಟಿದೆ.

21 Apr 2023 10:18 (IST)

Karnataka Election 2023 Live: ಸುದ್ದಿಗೋಷ್ಠಿ ಕರೆದ ಡಿಕೆ ಶಿವಕುಮಾರ್

ನಾಮಪತ್ರ ತಿರಸ್ಕೃತ ಆತಂಕದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗ್ಗೆ 10.30ಕ್ಕೆ ಸುದ್ಗಿಗೋಷ್ಠಿ ಕರೆದಿದ್ದಾರೆ. 500 ಕ್ಕೂ ಹೆಚ್ಚು ಬಿಜೆಪಿಯವರಿಂದ ಡಿಕೆಶಿಯ ಆಸ್ತಿ ಪ್ರಮಾಣ ಪತ್ರಗಳ ಡೌನ್ ಲೋಡ್ ಮಾಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆ ಸುದ್ದಿಗೋಷ್ಠಿ ಕರೆದಿದ್ದಾರೆ ಎನ್ನಲಾಗಿದೆ.

21 Apr 2023 09:57 (IST)

Karnataka Election 2023 Live: ಈಶ್ವರಪ್ಪಗೆ ಪ್ರಧಾನಿ ಮೋದಿ ಕರೆ

ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕುಶಲೋಪಚಾರಿ ವಿಚಾರಿಸಿದ್ದಾರೆ. ಈ ವೇಳೆ ಪಕ್ಷ, ಸಂಘಟನೆ ಸದಾ ನಿಮ್ಮೊಂದಿಗೆ ಇದೆ ಎಂದು ಈಶ್ವರಪ್ಪ ಹೇಳಿದ್ದಾರಂತೆ. ಶಿವಮೊಗ್ಗ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.