Karnataka Election 2023 Live Updates: ಚುನಾವಣಾ ಪ್ರಚಾರಕ್ಕೆ ದೆಹಲಿ ನಾಯಕರು; ಮತದಾರರ ಸೆಳೆಯಲು ಶುರುವಾಯ್ತು ಕಸರತ್ತು!

Karnataka Assembly Election 2023: ಇಂದು ರಾಜ್ಯಕ್ಕೆ ಬಿಜೆಪಿ, ಕಾಂಗ್ರೆಸ್ ನಾಯಕರು ಆಗಮಿಸಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಇಂದಿನ ಚುನಾವಣೆಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಬೆಂಗಳೂರು: ನಾಮಪತ್ರ ಸಲ್ಲಿಕೆ, ಹಿಂಪಡೆಯುವ ಪ್ರಕ್ರಿಯೆ (Nomination) ಎಲ್ಲಾ ಮುಕ್ತಾಯಗೊಂಡಿದ್ದು, ಇಂದಿನಿಂದ ರಿಯಲ್ ಚುನಾವಣೆ ಪ್ರಚಾರ (Election Campaign) ಆರಂಭಗೊಳ್ಳಲಿದೆ. ಇಂದಿನಿಂದ ಎರಡು ರಾಷ್ಟ್ರೀಯ ಮತ್ತು ಒಂದು ಪ್ರಾದೇಶಿಕ ಪಕ್ಷ ಬೃಹತ್​ ರೋಡ್​ ಶೋಗಳನ್ನು (Road shows) ಆಯೋಜನೆ ಮಾಡುತ್ತಿವೆ. ಮತ್ತೊಂದೆಡೆ ಚುನಾವಣಾ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತದಾರರ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಲಿಂಗಾಯತ ಸಿಎಂ (Lingayat CM) ಕಾದಾಟ ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ.

ಮತ್ತಷ್ಟು ಓದು ...
25 Apr 2023 18:58 (IST)

Karnataka Election 2023 Live: ‘ಜೋಶಿಯವರಿಗೆ ಅಧಿಕಾರದ ಮದ’!

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಜೋಶಿಯವರಿಗೆ 60 ವರ್ಷ ವಯಸ್ಸಾಗಿದೆ, ಅರಳು-ಮರಳು ಆಗಿರಬಹುದು. ಇದೀಗ ಅವರಿಗೆ ಅಧಿಕಾರದ ಮದ ಏರಿದೆ. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ. 2024ರ ಚುನಾವಣೆಯಲ್ಲಿ ಜೋಶಿಯವರಿಗೆ ಗೊತ್ತಾಗಲಿದೆ ಅಂತ ಕುಟುಕಿದ್ದಾರೆ.

25 Apr 2023 18:33 (IST)

Karnataka Election 2023 Live: ಪ್ರಿಯಾಂಕಾಗಾಂಧಿ ರೋಡ್ ಶೋ ಅಂತ್ಯ

ಮೈಸೂರಿನ ಕೆ.ಆರ್. ನಗರದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ಅಂತ್ಯವಾಗಿದೆ. 2 ಕಿಲೋ ಮೀಟರ್‌ಗಳ ಕಾಲ ಭರ್ಜರಿ ರೋಡ್ ಶೋ ನಡೆಸಿದ ಪ್ರಿಯಾಂಕಾ ಗಾಂಧಿ ಮತಯಾಚಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭವಾಗಿ ಗರುಡ ವೃತ್ತ, ಬಜಾರ್ ರಸ್ತೆ ಮಾರ್ಗವಾಗಿ ಮುನ್ಸಿಪಲ್ ಸರ್ಕಲ್‌ನಲ್ಲಿ ಅಂತ್ಯವಾಗಿದೆ. ದಾರಿಯುದ್ದಕ್ಕೂ ಪ್ರಿಯಾಂಕಾ ಪರ ಕಾರ್ಯಕರ್ತರು ಘೋಷಣೆ ಕೂಗಿದ್ರು.

25 Apr 2023 18:12 (IST)

Karnataka Election 2023 Live: ಮ್ಯಾಚ್ ಫಿಕ್ಸಿಂಗ್ಗೆ ಮುಂದಾದ್ರಾ ಸೋಮಣ್ಣ?

ಚಾಮರಾಜನಗರದಿಂದ ಸ್ಪರ್ಧಿಸುತ್ತಿರುವ ಸಚಿವ ವಿ. ಸೋಮಣ್ಣ ಮ್ಯಾಚ್ ಫಿಕ್ಸಿಂಗ್‌ಗೆ ಮುಂದಾಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಸ್ವಾಮಿ ಅಲಿಯಾಸ್ ಆಲೂರು ಮಲ್ಲು ಜೊತೆ ವಿ ಸೋಮಣ್ಣ ಕಾಲ್ ಮಾಡಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗುತ್ತಿದೆ.

25 Apr 2023 17:29 (IST)

Karnataka Election 2023 Live: ದಾಖಲೆಯಿಲ್ಲದ 5.45 ಕೋಟಿ ಹಣ ಸೀಜ್

ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲೆ ಇಲ್ಲದ 5.45 ಕೋಟಿ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಕಾರಿಪುರ  ಹಾಗೂ ಸೊರಬ ವಿಧಾನಸಭಾ ಕ್ಷೇತ್ರಗಳಲ್ಲಿ ಘಟನೆ ನಡೆದಿದೆ. ಎಟಿಎಂಗೆ ಹಣ ಸಾಗಿಸುವ ವ್ಯಾನ್‌ನಲ್ಲಿ ದಾಖಲೆ ಇಲ್ಲದ 5.45 ಕೋಟಿ ಹಣ ಪತ್ತೆಯಾಗಿದೆ.

25 Apr 2023 17:00 (IST)

Karnataka Election 2023 Live: ನಾಳೆ ಕಿಚ್ಚ ಸುದೀಪ್ ಪ್ರಚಾರ

ನಾಳೆ ವಿವಿಧೆಡೆ ಬಿಜೆಪಿ ಅಭ್ಯರ್ಥಿಗಳ ಪರ ನಟ ಕಿಚ್ಚ ಸುದೀಪ್ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಬಳಿಕ ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ ಹಾಗೂ ಸಂಡೂರಿನಲ್ಲಿ ಸುದೀಪ್ ಮತಯಾಚಿಸಲಿದ್ದಾರೆ.

25 Apr 2023 16:29 (IST)

Karnataka Election 2023 Live: ಸಿಎಂ ಭರ್ಜರಿ ಪ್ರಚಾರ

ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಪ್ರಚಾರ ನಡೆಸಿದರು. ಜಯವಾಹಿನಿ ಯಾತ್ರೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಜನರು ರಾಜಕೀಯವಾಗಿ ಬಹಳ ಬುದ್ಧಿವಂತರು. ಯಾರನ್ನು ಕೂರಿಸಬೇಕು, ಯಾರನ್ನು ಇಳಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ.

25 Apr 2023 16:06 (IST)

Karnataka Election 2023 Live: ಸಿ.ಟಿ. ರವಿ ಮುಂದಿನ ಸಿಎಂ ಆಗಲಿ!

ಮುಂದಿನ ಸಿಎಂ ಸಿ.ಟಿ. ರವಿ ಆಗಲೆಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ನಿಡಘಟ್ಟದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಮುಂದಿನ ಸಿಎಂ ಎಂದ ಈಶ್ವರಪ್ಪ, ಚಿಕ್ಕಮಗಳೂರಿನಿಂದ ಸಿ.ಟಿ. ರವಿಯನ್ನು ಗೆಲ್ಲಿಸಿ, ಅವರೇ ಮುಂದಿನ ಸಿಎಂ ಆಗಲಿ ಅಂತ ಹೇಳಿದ್ರು.

25 Apr 2023 15:35 (IST)

Karnataka Election 2023 Live: ಯಲಹಂಕದಲ್ಲಿ ನಟ ಪ್ರೇಮ್ ಪ್ರಚಾರ

ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಪರ ನಟ ಪ್ರೇಮ್ ಪ್ರಚಾರ ನಡೆಸಿದ್ದಾರೆ. ಇಂದು ದಾಸನಪುರ ಹೋಬಳಿಯ ಹಲವೆಡೆ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಪ್ರೇಮ್, ಇದು ಪಕ್ಷದ ಪರ ನಡೆಯುತ್ತಿರುವ ಪ್ರಚಾರವಲ್ಲ, ನಾನು ವ್ಯಕ್ತಿ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಅಂತ ಹೇಳಿದ್ರು.

25 Apr 2023 15:10 (IST)

Karnataka Election 2023 Live: 70 ಲಕ್ಷ ರೂಪಾಯಿ ಜಪ್ತಿ

ಬೆಳಗಾವಿಯ ಕಾಗವಾಡ ಹೊರವಲಯದ ಚೆಕ್‌ಪೋಸ್ಟ್‌ನಲ್ಲಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 70 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಣ ಮಹಾರಾಷ್ಟ್ರದ ಖಾಸಗಿ ಬ್ಯಾಂಕ್‌ಗೆ ಸೇರಿದ್ದು ಎನ್ನಲಾಗಿದ್ದು, ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 Apr 2023 14:45 (IST)

Karnataka Election 2023 Live: ಶೆಟ್ಟರ್‌ಗೆ ‘ಕೇಸರಿ’ ಪಡೆ ಖೆಡ್ಡಾ!

ಕೇಂದ್ರ ಗೃಹಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ನಿರಂತರವಾಗಿ ಸಭೆ ನಡೆಸಿದ್ರು. ಪ್ರಹ್ಲಾದ್ ಜೋಶಿ, ಸಿಎಂ ಬೊಮ್ಮಾಯಿ ಜೊತೆ ಅಮಿತ್ ಶಾ ಮೀಟಿಂಗ್ ಮಾಡಿದ್ರು. ಶತಾಯಗತಾಯ ಶೆಟ್ಟರ್‌ನನ್ನು ಸೋಲಿಸಲು ಕೇಸರಿ ನಾಯಕರು ಪಣ ತೊಟ್ಟಿದ್ದಾರೆ. ಶೆಟ್ಟರ್ ಸೋಲಿಸಲು ಕಾರ್ಯತ್ರಂತ ರೂಪಿಸುವಂತೆ ಷಾ, ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರಂತೆ.

25 Apr 2023 14:40 (IST)

Karnataka Election 2023 Live: ಶೆಟ್ಟರ್ ಅವರು ಕ್ಷಮೆ ಕೇಳಿಲ್ಲ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕ್ಷಮೆ ಕೇಳಿಲ್ಲ. ನಾವು ಕೇಳು ಅಂತ ಕೂಡ ಹೇಳಿಲ್ಲ. ಕ್ಷಮೆ ಕೇಳುವ ಪ್ರಮೇಯವೇ ಬಂದಿಲ್ಲ. ನಮ್ಮ ಗುರಿ ಒಂದೇ ಚುನಾವಣೆ ಗೆಲ್ಲಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

25 Apr 2023 14:22 (IST)

Karnataka Election 2023 Live: ಶೆಟ್ಟರ್, ಸವದಿ ಸೋಲಿಸಲು ‘ಹೆಬ್ಬುಲಿ’ ಅಸ್ತ್ರ

ಸ್ಟಾರ್​ ಕ್ಯಾಂಪೇನರ್​ ಮೂಲಕ ಶೆಟ್ಟರ್, ಸವದಿ ಸೋಲಿಸಲು ಸಿಎಂ ಬೊಮ್ಮಾಯಿ ವಿಶೇಷ ತಂತ್ರ ರೂಪಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಹಾಗೂ ಅಥಣಿ ಕ್ಷೇತ್ರಗಳಲ್ಲಿ BJP ಅಭ್ಯರ್ಥಿಗಳ ಪರ ನಟ ಸುದೀಪ್ ಪ್ರಚಾರ ನಡೆಸಲಿದ್ದಾರೆಂದು ನ್ಯೂಸ್18ಗೆ ಸಿಎಂ ಆಪ್ತ ಮೂಲಗಳು ಮಾಹಿತಿ ನೀಡಿವೆ. ಸಿಎಂ ಸೂಚಿಸುವ 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಕಿಚ್ಚ ಕ್ಯಾಂಪೇನ್ ನಡೆಸಲಿದ್ದಾರೆ.

25 Apr 2023 13:59 (IST)

Karnataka Election Live 2023: ಶಾಸಕಿ ಪೂರ್ಣಿಮಾಗೆ ಕುರಿಮರಿ ಗಿಫ್ಟ್

ಹಿರಿಯೂರು, ಚಿತ್ರದುರ್ಗಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸವನಹಳ್ಳಿಯಲ್ಲಿ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಅಭ್ಯರ್ಥಿ ಪೂರ್ಣಿಮಾಗೆ ರಾಮಚಂದ್ರ ಎಂಬ ಕಾರ್ಯಕರ್ತ ಕುರಿಮರಿಯನ್ನು ಗಿಫ್ಟ್ ಮಾಡಿದ್ದಾರೆ. ಈ ವೇಳೆ ಕಾರ್ಯಕರ್ತರು ಮೇಕೆ ಮರಿಗೂ ಬಿಜೆಪಿ ಶಾಲು ಹಾಕಿದರು.

25 Apr 2023 13:43 (IST)

Karnataka Election 2023 Live: ಗೆಲುವಿಗೆ ದೀರ್ಘದಂಡ ನಮಸ್ಕಾರ

ಸಚಿವ ಹಾಲಪ್ಪ ಆಚಾರ ಗೆಲುವಿಗಾಗಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ಕೊಪ್ಪಳದ ದ್ಯಾಂಪೂರು ಗ್ರಾಮದ ಭೀಮರೆಡ್ಡಿ, ಮಲ್ಲಿಕಾರ್ಜುನ, ರವಿ ಸಿಂಧೆ, ಜಗದೀಶ್ ಮಂಡ್ಲಿಗೇರಿ ತಮ್ಮ ಮನೆಗಳಿಂದ ಗ್ರಾಮದ ದ್ಯಾಮಣ್ಣ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕಿದ್ರು.

25 Apr 2023 13:28 (IST)

Karnataka Election 2023 Live: ಅಮಿತ್ ಶಾ ಅಬ್ಬರದ ಪ್ರಚಾರ

25 Apr 2023 13:00 (IST)

Karnataka Election 2023 Live: ಬಿಜೆಪಿಯೇ ಅಧಿಕಾರಕ್ಕೆ ಬರೋದು ನಿಶ್ಚಿತ

ಬಿಜೆಪಿಯೇ ಅಧಿಕಾರಕ್ಕೆ ಬರೋದು ನಿಶ್ಚಿತ. ಯಾವ ಸಮುದಾಯದ ಶಾಸಕರು ಸಿಎಂ ಆಗ್ತಾರೆ ಅಂತಾ ಗೊತ್ತಿಲ್ಲ. ಆದರೆ ಕನ್ನಡಿಗ‌ ಬಿಜೆಪಿ ಶಾಸಕರೇ ಮುಖ್ಯಮಂತ್ರಿ ಆಗೋದು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಿಎಂ ಯಾರೆಂದು ತೀರ್ಮಾನ ಆಗುತ್ತದೆ. ಅದನ್ನು ವರಿಷ್ಠರು ತೀರ್ಮಾನ ಮಾಡ್ತಾರೆ ಎಂದ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.

25 Apr 2023 12:53 (IST)

Karnataka Election 2023 Live: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರೆ

ಬೂತ್​​ಗಳಲ್ಲಿ ನಮ್ಮ ಕಾರ್ಯಕರ್ತರೇ ನಮ್ಮ ಶಕ್ತಿ. ಅಭ್ಯರ್ಥಿಗಳು ಎಲ್ಲರ ಮನೆಗೆ ಹೋಗೋಕೆ ಆಗುವುದಿಲ್ಲ. ಆದರೆ ನಮ್ಮ ಕಾರ್ಯಕರ್ತರು ಪ್ರತಿ ಮನೆಗೆ ಹೋಗ್ತಾರೆ. ಅತಿ ದೊಡ್ಡ ಕಾರ್ಯಕರ್ತರ ಪಾರ್ಟಿ ಅಂದರೆ ಬಿಜೆಪಿ.ಕಾರ್ಯಕರ್ತರ ಶ್ರಮದಲ್ಲೇ ಗೆಲ್ಲುವ ಪಕ್ಷ ಬಿಜೆಪಿ. ಕರ್ನಾಟಕದಲ್ಲಿ ಪೂರ್ಣಪ್ರಮಾಣದ ಸರ್ಕಾರ ಬರಬೇಕು ಎಂದುಬುದು ಮೋದಿಯವರ ಆಶಯ. ಸರ್ಕಾರ ತರಲು ಕಾರ್ಯಕರ್ತರು ಶ್ರಮ ಪಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರೆ ಕೊಟ್ಟಿದ್ದಾರೆ.

25 Apr 2023 12:36 (IST)

Karnataka Election 2023 Live: ಸುಪ್ರೀಂ ನಿರ್ಧಾರಕ್ಕೆ ಬದ್ಧ ಎಂದ ಬಿಎಸ್​ವೈ

ಮುಸ್ಲಿಂ ಮೀಸಲಾತಿ ರದ್ದಿಗೆ ಸುಪ್ರೀಂ ಕೋರ್ಟ್ ತಡೆ ವಿಚಾರಕ್ಕೆ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ನಾವೆಲ್ಲರೂ ತಲೆಬಾಗಬೇಕು. ನಾವೆಲ್ಲರೂ ಅದಕ್ಕೆ ಬದ್ಧರಾಗಬೇಕಾಗುತ್ತವೆ ಎಂದು ಹೇಳಿದರು.

25 Apr 2023 12:20 (IST)

Karnataka Election 2023 Live: ಸಿದ್ದರಾಮಯ್ಯ ಸೋಲಿಸಲು HDD, HDK ರಣತಂತ್ರ

25 Apr 2023 11:45 (IST)

Karnataka Election 2023 Live: ಯಡಿಯೂರಪ್ಪಗೆ ಟಾಸ್ಕ್

ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಸೋಲಿಸುವ ಟಾಸ್ಕ್ ನೀಡಲಾಗಿದೆ ಎಂದು ತಿಳಿದು ಬಂದಿದೆ. 25 ರಂದು ಅಥಣಿ, 26 ರಂದು ಹುಬ್ಬಳ್ಳಿ ಧಾರವಾಡದಲ್ಲಿಯ ಬೃಹತ್ ಸಮಾವೇಗಳಲ್ಲಿ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.