ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಬೆಳಗಾವಿ (Belagavi) ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಎಲ್ಲರೂ ಮತದಾನ (Voting) ಮಾಡಿ ಎಂದು ಮನವಿ ಮಾಡುತ್ತೇನೆ. ಪ್ರತಿ ವರ್ಷ ಕುಟುಂಬ (Family) ಸಮೇತವಾಗಿ ಬರುತ್ತಿದೆ. ಈ ಬಾರಿ ಒಬ್ಬಳೇ ಬಂದಿದ್ದೇನೆ, ಮಕ್ಕಳು (Children) ಕೂಡ ಬಂದು ಮತದಾನ ಮಾಡ್ತಾರೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿದೆ. ಬೆಳಗಾವಿಯಲ್ಲಿ 13 ರಿಂದ 14 ಸ್ಥಾನಗಳು ಬಿಜೆಪಿ ಜಿಲ್ಲೆಯಲ್ಲಿ ಬರುತ್ತದೆ ಎಂದು ಬೆಳಗಾವಿ ಸಂಸದೆ ಮಂಗಳಾ ಅಂಗಡಿ (Mangala Angadi) ಹೇಳಿದ್ದಾರೆ.
ಹುಬ್ಬಳ್ಳಿಯ ವಿಶ್ವೇಶ್ವರಯ್ಯ ನಗರದ ಮತಕಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಗಳ ಅಂಗಡಿ ಅವರು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಮತಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿರುವ ಬೀಗರಾದ ಜಗದೀಶ್ ಶೆಟ್ಟರ್ ಅವರ ಸ್ಪರ್ಧೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು. ಬೀಗರ ಕ್ಷೇತ್ರದಲ್ಲಿ ಯಾವ ರೀತಿಯ ವಾತಾವರಣವಿದೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಮಂಗಳಾ ಅಂಗಡಿ ಅವರು, ಅವರ ಕ್ಷೇತ್ರದಲ್ಲೂ ಉತ್ತಮ ವಾತಾವರಣ ಇದೆ. ಅವರು ಗೆದ್ದು ಬರ್ತಾರೆ ಎಂದರು.
ಇದನ್ನೂ ಓದಿ: Karnataka Exit Poll 2023 Live Updates: ಎಕ್ಸಿಟ್ ಪೋಲ್ಗೆ ಕೆಲವೇ ನಿಮಿಷ ಬಾಕಿ, ಯಾರ ಕೈಗೆ ರಾಜ್ಯ ಚುಕ್ಕಾಣಿ?
ಕಾಂಗ್ರೆಸ್ ನಿಂದ ಸ್ಪರ್ಧೆ ಶೆಟ್ಟರ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಇದೇ ರೀತಿ ಎಲ್ಲವೂ ಆಗುತ್ತದೆ. ಶೆಟ್ಟರ್ ಅವರು ಗೆದ್ದು ಬರುತ್ತಾರೆ. ಅಲ್ಲಿ ಮೊದಲಿನಿಂದ ಅವರು ಹೆಸರು ಮಾಡಿದ್ದರು. ಅವರದ್ದು ಅಲ್ಲೇ ನಮ್ಮದು ನಮ್ಮ ಕ್ಷೇತ್ರ. ಅವರು ಕಾಂಗ್ರೆಸ್ ನಾನು ಬಿಜೆಪಿ ಬೇರೆ ಏನು ಮಾಡಲು ಆಗೋದಿಲ್ಲ. ನಾನು ಬಿಜೆಪಿಯಲ್ಲೇ ಇದ್ದೇನೆ. ಮುಂದಿನ ಲೋಕಸಭಾ ಚುನಾವಣೆಗೂ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ