• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಫಲಿತಾಂಶಕ್ಕೂ ಮುನ್ನ ತಾರಕ್ಕಕ್ಕೇರಿದೆ ಚಾಮುಂಡೇಶ್ವರಿ ಕದನ! ಸಿದ್ಧು, ಜಿಟಿ ದೇವೇಗೌಡ ನಡುವೆ ‘ಸಿದ್ದೇಗೌಡ’ ಜಗಳ

Karnataka Election 2023: ಫಲಿತಾಂಶಕ್ಕೂ ಮುನ್ನ ತಾರಕ್ಕಕ್ಕೇರಿದೆ ಚಾಮುಂಡೇಶ್ವರಿ ಕದನ! ಸಿದ್ಧು, ಜಿಟಿ ದೇವೇಗೌಡ ನಡುವೆ ‘ಸಿದ್ದೇಗೌಡ’ ಜಗಳ

ಮಾಜಿ ಸಚಿವ ಜಿಟಿ ದೇವೇಗೌಡ/ ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಚಿವ ಜಿಟಿ ದೇವೇಗೌಡ/ ಮಾಜಿ ಸಿಎಂ ಸಿದ್ದರಾಮಯ್ಯ

ಬಿಜೆಪಿಗೆ ಕೇಂದ್ರದಿಂದ ಬರುತ್ತೆ ಖರ್ಚು ಮಾಡಿದ್ದಾರೆ. ಕಾಂಗ್ರೆಸ್ ನವರು ಅವರವರೇ ಸೇರಿ ದುಡ್ಡು ಹಾಕಿ ಚುನಾವಣೆ ಎದುರಿಸಿದ್ದಾರೆ. ಆದರೆ ಜೆಡಿಎಸ್ ಗೆ ಜನರೇ ತಂದು ಕೊಟ್ಟು ಚುನಾವಣೆ ಮಾಡಿಸಿದ್ದಾರೆ ಎಂದು ಜಿಡಿ ದೇವೇಗೌಡ ಹೇಳಿದ್ದಾರೆ.

  • Share this:

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly ELection)  ಫಲಿತಾಂಶಕ್ಕೂ ಮುನ್ನವೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ (Chamundeshwari Constituency) ಕದನ ತಾರಕ್ಕಕ್ಕೇರಿದೆ. ತಮ್ಮ ವಿರುದ್ಧ ಕೇಳಿ ಬಂದ ಆರೋಪದ ತಿರಸ್ಕರಿಸಿರುವ ಕಾಂಗ್ರೆಸ್ (Congress) ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ, ಉಪ್ಪು ಮುಟ್ಟಿ ಪ್ರಮಾಣ ಮಾಡಿದ್ದಾರೆ. ಆದರೆ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ (JDS)​ ಅಭ್ಯರ್ಥಿ ಜಿಟಿ ದೇವೇಗೌಡ (GT Devegowda), ಈ ಬಾರಿಯ ಚುನಾವಣೆ ಚಾಮುಂಡೇಶ್ವರಿ ಆಶೀರ್ವಾದಿಂದ ಗೆಲ್ಲುತ್ತೇನೆ. ಪ್ರಚಾರದ ವೇಳೆ ನನಗೆ ಎಲ್ಲಾ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೊಟ್ಟಿದ್ದರು ಎಂದು ಹೇಳಿದ್ದಾರೆ.


ನನ್ನ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಅನ್ನೋದು ಗೊತ್ತಿಲ್ಲ


ಸಿದ್ದೇಗೌಡ ಜೊತೆಗೆ ಜಿಟಿಡಿ ಹೊಂದಾಣಿಕೆ ಮಾಡಿದ್ದಾರೆಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪ ಮಾಡಿದ್ದರು. ಇದಕ್ಕೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದರು. ಆದರೆ ಈ ಕುರಿತಂತೆ ಪ್ರತಿಕ್ರಿಯೆ ನೀಡಿ ಸಿಡಿಮಿಡಿಗೊಂಡ ಜಿಟಿ ದೇವೇಗೌಡ ಅವರು, ಜನರು ಭಾರೀ ಉತ್ಸಾಹದಿಂದ ಪ್ರೀತಿಯಿಂದ ಜಿಟಿ ದೇವೇಗೌಡರನ್ನು ಗೆಲ್ಲಿಸುವ ಮನಸ್ಸು ಮಾಡಿದ್ದರು.




ಸಿದ್ದರಾಮಯ್ಯನವರಿಗೆ ಇಷ್ಟು ವರ್ಷ ಇಲ್ಲಿ ರಾಜಕೀಯ ಮಾಡಿದ್ದಾರೆ. ಆದರೆ ನನ್ನ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಅನ್ನೋದು ಅವರಿಗೆ ಗೊತ್ತಿಲ್ಲ. ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸೋತವನನ್ನು ಕರೆದುಕೊಂಡು ಬಂದು ನನ್ನ ವಿರುದ್ಧ ನಿಲ್ಲಿಸಿದ್ದಾರೆ ಎಂದರು.


ಇದನ್ನೂ ಓದಿ: HD Kumaraswamy: ಮತದಾನ ಮುಕ್ತಾಯವಾಗುತ್ತಿದ್ದಂತೆ ವಿದೇಶಕ್ಕೆ ಹಾರಿದ ಮಾಜಿ ಸಿಎಂ ಎಚ್​ಡಿಕೆ

top videos


    ಅಲ್ಲದೆ, ಈ ಸಿದ್ದೇಗೌಡನನ್ನು ನಾನು ಯಾಕೆ ಬುಕ್ ಮಾಡಲಿ? ಹೋಟೆಲ್ ಬುಕ್ ಮಾಡಬೇಕಷ್ಟೇ! ನಾನು ಸಿದ್ದೇಗೌಡನ‌ ಜೊತೆ ಸೇರುವುದು ಬಿಡಿ, ಅವನನ್ನು ನನ್ನ ಮನೆ ಬಾಗಿಲಿಗೆ ಕೂಡ ನಾನು ಸೇರಿಸೋದಿಲ್ಲ. ನಾನು ಗೆಲ್ಲಲಿ ಸೋಲಲಿ ನನ್ನ ಜಾಯಿಮಾನದಲ್ಲಿ ಯಾರ ಜೊತೆಗೂ ನಾನು ಹೊಂದಾಣಿಕೆ ಮಾಡಿಲ್ಲ. ಈ ಸಿದ್ದೇಗೌಡನ ಬಗ್ಗೆ ಇದೇ ಸಿದ್ದರಾಮಯ್ಯ ಅವರಿಗೆ ನಾನು ಹೇಳಿದ್ದೆ, ನಾನು ಹೇಳಿದ್ದೆಲ್ಲಾ ಅವರು ಮರೆತು ಹೋಗಿದ್ದಾರೆ. ನನಗೆ ಹೋದ ಚುನಾವಣೆಯೇ ಕಷ್ಟ ಆಗಲಿಲ್ಲ, ಇನ್ನು ಈಗ ಕಷ್ಟ ಆಗುತ್ತಾ ಎಂದು ಪ್ರಶ್ನಿಸಿದರು.



    ಕೆಲ ಎಕ್ಸಿಟ್ ಪೋಲ್ ಗಳು ಅತಂತ್ರ ಫಲಿತಾಂಶ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇನ್ನೂ ಒಂದೇ ದಿನ, ಜನರ ತೀರ್ಪು ಬರಲಿ ನೋಡೋಣಾ. ಬಿಜೆಪಿಗೆ ಕೇಂದ್ರದಿಂದ ಬರುತ್ತೆ ಖರ್ಚು ಮಾಡಿದ್ದಾರೆ. ಕಾಂಗ್ರೆಸ್ ನವರು ಅವರವರೇ ಸೇರಿ ದುಡ್ಡು ಹಾಕಿ ಚುನಾವಣೆ ಎದುರಿಸಿದ್ದಾರೆ. ಆದರೆ ಜೆಡಿಎಸ್ ಗೆ ಜನರೇ ತಂದು ಕೊಟ್ಟು ಚುನಾವಣೆ ಮಾಡಿಸಿದ್ದಾರೆ. ದೇವೇಗೌಡ, ಕುಮಾರಸ್ವಾಮಿ ಪಕ್ಷ ಉಳಿಬೇಕು ಅಂತ ಜನರು ಚುನಾವಣೆ ಮಾಡಿಸಿದ್ದಾರೆ ಎಂದು ತಿಳಿಸಿದರು.

    First published: