• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ರಾಜ್ಯಕ್ಕೆ ಗುಜರಾತ್‌ EVM ಬೇಡ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್

Karnataka Election 2023: ರಾಜ್ಯಕ್ಕೆ ಗುಜರಾತ್‌ EVM ಬೇಡ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಗುಜರಾತ್​​​ನಲ್ಲಿ ಬಳಕೆಯಾದ ಇವಿಎಂ ನಮಗೆ ಬೇಡ ಅಂತ ಚುನಾವಣಾ ಆಯೋಗಕ್ಕೆ ಪತ್ರದಲ್ಲಿ ಬರೆದಿದ್ದೇವು. ಸದ್ಯ ಹೊಸ ಇವಿಎಂ ರಾಜ್ಯಕ್ಕೆ ತಂದಿದ್ದೀವೆ ಅಂತ ಚುನಾವಣಾ ಆಯುಕ್ತರು ಹೇಳಿದ್ದಾರೆ. ಇದಕ್ಕೆ ನಾವು ಧನ್ಯವಾದ ತಿಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು (Election Commission) ಕರ್ನಾಟಕದ (Karnataka) 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕವನ್ನು (Election Date) ಘೋಷಣೆ ಮಾಡಿದ ಬೆನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)​, ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ್ದಾರೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮೇ 10 ರಂದು ಮತದಾನ (Voting) ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.


ನಿಮ್ಮ ಭವಿಷ್ಯವನ್ನು ನೀವೇ ಬರೆಯುವ ದಿನ


ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್​, ಮೇ 10 ಕೇವಲ ಚುನಾವಣೆ ದಿನ ಅಲ್ಲ, ಭ್ರಷ್ಟಾಚಾರವನ್ನು ಕಿತ್ತು ಹಾಕುವ ದಿನ. ಹೊಸ ನಾಡನ್ನು ಕಟ್ಟುವ ದಿನ. ನವ ಕರ್ನಾಟಕವನ್ನ ಕಟ್ಟುವ ದಿನ. ನಿಮ್ಮ ಭವಿಷ್ಯವನ್ನು ನೀವೇ ಬರೆಯುವ ದಿನ. ಬರಲಿದೆ ಕಾಂಗ್ರೆಸ್ ಪಕ್ಷ, ತರಲಿದೆ ಅಭಿವೃದ್ಧಿಯನ್ನು. ಡಬಲ್ ಇಂಜಿನ್ ರಾಜ್ಯದಲ್ಲಿ ಫೇಲ್ ಆಗಿದೆ ಎಂದು ಆರೋಪಿಸಿದರು.


ಇದನ್ನೂ ಓದಿ: Karnataka Election Dates 2023 LIVE: ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ, ಮೇ 13ಕ್ಕೆ ಫಲಿತಾಂಶ


ನಾವು ಚುನಾವನಣೆ ಘೋಷಣೆಗೂ ಮುನ್ನವೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವು. ಗುಜರಾತ್ ನಲ್ಲಿ ಬಳಕೆಯಾದ ಇವಿಎಂ ನಮಗೆ ಬೇಡ ಅಂತ ಪತ್ರದಲ್ಲಿ ತಿಳಿಸಿದ್ದೇವು. ಸದ್ಯ ಹೊಸ ಇವಿಎಂ ರಾಜ್ಯಕ್ಕೆ ತಂದಿದ್ದೀವೆ ಅಂತಾ ಚುನಾವಣೆ ಆಯುಕ್ತರು ಹೇಳಿದ್ದಾರೆ. ಇದಕ್ಕೆ ನಾವು ಧನ್ಯವಾದ ತಿಳಿಸುತ್ತೇವೆ. ರಾಜ್ಯ ಚುನಾವಣೆ ಆಯೋಗದ ಅಧಿಕಾರಿಗಳು ಹೇಳಿದ್ದು, ಮತದಾನಕ್ಕೂ ಮುನ್ನ ನಮ್ಮ ಏಜೆಂಟಗಳಿಂದ 50 ವೋಟ್ ಹಾಕಿಸಿ ಚೆಕ್ ಮಾಡುತ್ತೇವೆ. ಬಳಿಕ ಮತದಾನಕ್ಕೆ ಅವಕಾಶ ಕಲ್ಪಿಸುತ್ತೇವೆ ಅಂತ ಹೇಳಿದ್ದಾರೆ ನೋಡೋಣ ಏನಾಗುತ್ತೆ ಅಂತ ಹೇಳಿದರು.


top videos



    ಇನ್ನು, ಏಪ್ರಿಲ್​ 5 ರಂದು ಕೋಲಾರದಲ್ಲಿ ಸತ್ಯಮೇವ ಜಯತೆ ಸಮಾವೇಶ ನಡೆಯಲಿದೆ. ರಾಹುಲ್​ ಗಾಂಧಿ ಅವರನ್ನು ಅನರ್ಹಗೊಳಿಸಲು ಕಾರಣವಾದ ಹೇಳಿಕೆ ನೀಡಿದ ಸ್ಥಳದಿಂದಲೇ ಬೃಹತ್​ ಹೊರಟ ನಡೆಸಲಾಗುತ್ತದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

    First published: