ಭಟ್ಕಳ, ಉತ್ತರ ಕನ್ನಡ: ಜಿಲ್ಲೆಯಲ್ಲಿ ಭಾಷಾ ವಿವಾದ (Language controversy) ಮುಗಿಯುವಂತೆ ಕಾಣುತ್ತಿಲ್ಲ. ಕಾರವಾರದಲ್ಲಿ (Karwar) ಕನ್ನಡ (Kannada)- ಕೊಂಕಣಿ (Konkani) ಭಾಷೆಗಳ ನಡುವೆ ಏರ್ಪಟ್ಟಿದ್ದ ವಿವಾದವೀಗ ಭಟ್ಕಳಕ್ಕೆ (Bhatkal) ಹರಡಿದ್ದು, ಕನ್ನಡದ ಜೊತೆಗೆ ಉರ್ದುವಿನಲ್ಲಿ (Urdu) ಭಟ್ಕಳ ಪುರಸಭೆಯ (Bhatkal Municipality) ನಾಮಫಲಕಗಳನ್ನ (Board) ಬರೆಯಿಸುತ್ತಿರುವುದು ಇದೀಗ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಒಂದೆಡೆ ಉರ್ದು ನಾಮಫಲಕ ಅಳವಡಿಕೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದು ಹೋರಾಟ ನಡೆಸುತ್ತಿದ್ದರೆ ಇನ್ನೊಂದೆಡೆ ಕೆಲ ಮುಸಲ್ಮಾನ ಸಂಘಟನೆಯವರು ಉರ್ದು ಭಾಷಾ ನಾಮಫಲಕ ತೆರವು ಮಾಡದಂತೆ ಒತ್ತಾಯಿಸಿದ್ದಾರೆ. ಭಾಷಾ ವಿವಾದ ಈಗ ಬಳ್ಳಿಯಂತೆ ಹಬ್ಬುತ್ತಿದೆ.
ಭಟ್ಕಳ ಪುರಸಭೆ ಆಯುಕ್ತರೆ ಎಡವಟ್ಟು ಮಾಡಿದರೆ?
ಕೆಲ ದಿನಗಳ ಹಿಂದೆಷ್ಟೇ ಭಟ್ಕಳ ಪುರಸಭೆ ಕಟ್ಟಡಕ್ಕೆ ಹೊಸದಾಗಿ ಸುಣ್ಣಬಣ್ಣ ಬಳಿಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಕಟ್ಟಡದ ಮುಂಭಾಗದಲ್ಲಿ ಪುರಸಭಾ ಕಚೇರಿ, ಭಟ್ಕಳ ಎಂಬ ನಾಮಫಲಕ ಅಳವಡಿಸಲಾಗುತ್ತಿದೆ. ಈ ವೇಳೆ ಕನ್ನಡ, ಇಂಗ್ಲಿಷ್ ಜೊತೆಗೆ ಉರ್ದುವಿನಲ್ಲೂ ನಾಮಫಲಕ ಅಳವಡಿಸುತ್ತಿರುವುದಕ್ಕೆ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಉರ್ದು ನಾಮಫಲಕ ತೆರವು ಮಾಡುವಂತೆ ಪುರಸಭೆಯೆದುರು ಪ್ರತಿಭಟಿಸಿವೆ.
ಪುರಸಭೆ ಕಚೇರಿ ಒಳಗಡೆ ನುಗ್ಗಲು ಯತ್ನ
ಈ ವೇಳೆ ಕಚೇರಿ ಒಳಗೆ ನುಗ್ಗಲು ಯತ್ನಿಸಿದ್ದ ಕನ್ನಡಪರ ಕಾರ್ಯಕರ್ತರನ್ನ ಪೊಲೀಸರು ಚದುರಿಸಿದ್ದಾರೆ. ಯಾವುದೇ ಕಾರಣಕ್ಕೂ ಉರ್ದು ಭಾಷೆಯಲ್ಲಿ ನಾಮಫಲಕ ಹಾಕಬಾರದು ಎಂದು ಕನ್ನಡ ಪರ ಸಂಘಟನೆಯವರು ಆಗ್ರಹಿಸುತ್ತಿದ್ದಾರೆ. ಜತೆಗೆ ಮುಸಲ್ಮಾನ ಸಂಘಟನೆಯವರು ಉರ್ದು ನಾಮಫಲಕ ತೆರವು ಮಾಡದಂತೆ ಒತ್ತಾಯಿಸಿ ಪ್ರತಿಭಟನೆ ಕೂಡಾ ಮಾಡಿದ್ದಾರೆ...
ಇದನ್ನೂ ಓದಿ: Railway Project: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಮತ್ತೆ ಜೀವಂತ, ವನ್ಯಜೀವಿ ಮಂಡಳಿ ನಿಲುವೇನು?
“ಕನ್ನಡದಲ್ಲೇ ನಾಮಫಲಕ ಇರಬೇಕು, ಕನ್ನಡದ ಜತೆ ಉರ್ದು ಬೇಡ”
ಸ್ಥಳೀಯ ಭಾಷೆಯಲ್ಲಿ ನಾಮಫಲಕಕ್ಕೆ ಎಲ್ಲಿಯೂ ಅವಕಾಶವಿಲ್ಲ. ಹಾಗಿದ್ದರೆ ರಾಜ್ಯದಾದ್ಯಂತ ನಾಮಫಲಕಗಳನ್ನು ಕನ್ನಡ ಇಂಗ್ಲೀಷ್ ಮತ್ತು ಹಿಂದಿ ಈ ಮೂರು ಭಾಷೆಗಳಿಗೆ ಆದ್ಯತೆ ಬಿಟ್ಟು ಬೇರೆ ಯಾವುದೇ ಭಾಷೆಗಳಿಗೆ ಆದ್ಯತೆ ನೀಡಲಾಗುವುದಿಲ್ಲ. ಈ ನಡುವೆ ಪ್ರಾದೇಶಿಕ ಭಾಷೆಗೆ ತಕ್ಕಂತೆ ನಾಮಫಲಕಗಳನ್ನು ಅಳವಡಿಸುತ್ತಾ ಬಂದರೆ ಕೊಂಕಣಿ, ಮರಾಠಿ, ಉರ್ದು, ನವಾಯತ್ ಹೀಗೆ ಹತ್ತು ಹಲವು ಬಾಷೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ ಅಂತ ಪ್ರತಿಭಟನಾಕಾರರು ಹೇಳಿದ್ದಾರೆ.
“ಕನ್ನಡಕ್ಕೆ ಬೆಲೆ ಇಲ್ಲದಂತೆ ಆಗುತ್ತದೆ”
ಹೀಗೆ ಮಾಡುವುದರಿಂದ ಪ್ರತಿಯೊಂದು ಬೇರೆ ಬೇರೆ ಭಾಷೆಯವರು ಪಟ್ಟು ಹಿಡಿದು ತಾವು ಮಾತನಾಡುವ ಭಾಷೆಯಲ್ಲಿ ನಾಮಫಲಕಗಳಿಗೆ ಬೇಡಿಕೆಯಿಡುತ್ತಾರೆ. ಆಗ ಕರ್ನಾಟಕದ ಕನ್ನಡಕ್ಕೆ ಭಾಷೆಗೆ ಬೆಲೆ ಇಲ್ಲದಂತಾಗುತ್ತದೆ ಎಂದು ಪ್ರತಿಭಟನಾಕರು ಆತಂಕ ವ್ಯಕ್ತಪಡಿಸಿದ್ದಾರೆ.
ಉರ್ದು ಫಲಕ ತೆರವು ಮಾಡುವಂತೆ ಮನವಿ
ಇನ್ನು ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ಸಿಪಿಐ ಮಹಾಬಲೇಶ್ವರ ನಾಯ್ಕ ಅವರಿಗೆ ಉರ್ದು ನಾಮಫಲಕ ತೆರವು ಮಾಡಬೇಕೆಂದು ಶ್ರೀಭುವನೇಶ್ವರಿ ಕನ್ನಡ ಸಂಘದಿಂದ ಮನವಿ ಸಲ್ಲಿಸಲಾಗಿದ್ದು, ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮುಂದೇನಾಗಲಿದೆ ಎನ್ನುವುದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ: Rock Garden: ಬಣ್ಣವೂ ಇಲ್ಲ, ನಿರ್ವಹಣೆಯೂ ಇಲ್ಲ! ಸೊರಗುತ್ತಿದೆ ಕಾರವಾರದ ರಾಕ್ ಗಾರ್ಡನ್
ಹಿಂದೆ ಹಳೆ ಕಟ್ಟಡಕ್ಕೂ ಇತ್ತು ಉರ್ದು ಭಾಷೆ ನಾಮಫಲಕ
ಹಳೆಯ ಪುರಸಭೆ ಕಟ್ಟಡಕ್ಕೆ ಉರ್ದು ಭಾಷೆಯ ನಾಮಫಲಕ ಇತ್ತು ಆವಾಗ ಯಾವುದೆ ಕನ್ನಡ ಪರ ಸಂಘಟನೆಯವರು ಈ ಬಗ್ಗೆ ಧ್ವನಿ ಎತ್ತಿರಲಿಲ್ಲ ಆದ್ರೆ ಈಗ ಹೊಸ ಕಟ್ಟಡಕ್ಕೆ ಉರ್ದು ನಾಮಫಲಕ ಅಳವಡಿಸುತ್ತಿದ್ದಂತೆ ಕನ್ನಡ ಪರ ಸಂಘಟನೆಯವರು ಉರ್ದು ಭಾಷೆ ನಾಮಫಲಕ ವಿರೋಧಿಸಿ ಹೋರಾಟಕ್ಕೆ ಇಳಿದಿದ್ದಾರೆ ಎಂದು ಮುಸಲ್ಮಾನ ಪ್ರಮುಖರು ಹೇಳುತ್ತಿದ್ದಾರೆ. ಒಟ್ಟಾರೆ ಭಾಷಾ ವಿವಾದ ಜಟಾಪಟಿ ಎಲ್ಲಿ ಬಂದು ನಿಲ್ಲತ್ತೆ ಎನ್ನೋದು ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ