• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Next CM: ಬೆಳಗಿನ ಜಾವ 4 ಗಂಟೆಗೆ ಡಿಕೆಶಿ ಮನೆಗೆ ಬಂದ ಕಾಲಜ್ಞಾನ ಗುರೂಜಿ; ಸಿಎಂ ಆಗ್ತಾರಾ ಕನಕಪುರ ಬಂಡೆ?

Karnataka Next CM: ಬೆಳಗಿನ ಜಾವ 4 ಗಂಟೆಗೆ ಡಿಕೆಶಿ ಮನೆಗೆ ಬಂದ ಕಾಲಜ್ಞಾನ ಗುರೂಜಿ; ಸಿಎಂ ಆಗ್ತಾರಾ ಕನಕಪುರ ಬಂಡೆ?

 ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

DK Shivakumar: ಶುಭವಾರ, ಶುಭ ಘಳಿಗೆ, ಶುಭ ಮುಹೂರ್ತ. ಶುಕ್ರವಾರ ಸರ್ಕಾರ ರಚನೆ ಬಗ್ಗೆ ನೋಡೋಣ. ವರಿಷ್ಠರಿಗೆ ಎಲ್ಲಾ ಕಳಿಸಿದ್ದೇವೆ, ಅವರೇ ನಿರ್ಣಯ ಮಾಡ್ತಾರೆ ಎಂದ ಡಿಕೆ ಶಿವಕುಮಾರ್ ಹೇಳಿದ್ದಾರೆ.

  • Share this:

ಬೆಂಗಳೂರು: ಇಂದು ಬೆಳಗಿನ ಜಾವ 4.15ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ನಿವಾಸಕ್ಕೆ ಕಾಲಜ್ಞಾನ ಗುರೂಜಿ ಆಗಮಿಸಿ ಭವಿಷ್ಯ ನುಡಿದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಶಿವಕುಮಾರ್‌ ಅವರಿಗೆ  ಕಾಲಜ್ಞಾನ ವಿಜಯ್ ರಾಜ್ ಗುರೂಜಿ ಕಾಲಜ್ಞಾನ ಭವಿಷ್ಯ ತಿಳಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಇಂದು ಬೆಳಗಿನ ಜಾವವೇ ಗುರೂಜಿಗಳು ಬಂದು ಮುಂದಿನ ಭವಿಷ್ಯದ ಸುಳಿವು ನೀಡಿದ್ದಾರಂತೆ. ಸಿಎಂ ಆಗುವ ಯೋಗ, ಸಮಯ ಹೇಗಿದೆ, ಯಾವಾಗ ಪ್ರಮಾಣ ವಚನ‌ ಸ್ವೀಕಾರ ಮಾಡಬೇಕು ಅನ್ನೋ ಬಗ್ಗೆ ವಿಜಯ್ ರಾಜ್ ಗುರೂಜಿ (Vijay Raj Guruji) ಮಾಹಿತಿ ನೀಡಿದ್ದಾರಂತೆ. ಗುರುವಾರ ತುಂಬ ಚೆನ್ನಾಗಿದೆ ಎಂದು ವಿಜಯ್ ರಾಜ್ ಗುರೂಜಿ ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಸುತ್ತ ಡಿಕೆ ಶಿವಕುಮಾರ್​ ಅವರಿಗೆ ಬುಧ, ಅಧಿತ್ಯ ಪಂಚಮ ಯೋಗವಿದೆ ಎಂದು  ಗುರೂಜಿ ತಿಳಿಸಿದ್ದಾರೆನ್ನಲಾಗಿದೆ.


ಶುಭವಾರ, ಶುಭ ಘಳಿಗೆ, ಶುಭ ಮುಹೂರ್ತ. ಶುಕ್ರವಾರ ಸರ್ಕಾರ ರಚನೆ ಬಗ್ಗೆ ನೋಡೋಣ. ವರಿಷ್ಠರಿಗೆ ಎಲ್ಲಾ ಕಳಿಸಿದ್ದೇವೆ, ಅವರೇ ನಿರ್ಣಯ ಮಾಡ್ತಾರೆ ಎಂದ ಡಿಕೆ ಶಿವಕುಮಾರ್ ಹೇಳಿದ್ದಾರೆ.


ಹೈಕಮಾಂಡ್ ಅಂಗಳಕ್ಕೆ ಸಿಎಂ ಆಯ್ಕೆ ಚೆಂಡು


ಕಾಂಗ್ರೆಸ್ ಶಾಸಕಾಂಗ ಸಭೆ ಮುಕ್ತಾಯದ ಬಳಿಕ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿದ್ದಾರೆ. ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ವೈಯಕ್ತಿಕವಾಗಿ ಪ್ರತಿಯೊಬ್ಬರ ಅಭಿಪ್ರಾಯ ಪಡೆಯಲಾಗಿದೆ.




ಇದನ್ನೂ ಓದಿ:  Jagadish Shettar: ಸೋತ ಶೆಟ್ಟರ್​​ಗೆ ಮಿನಿಸ್ಟರ್​ ಸ್ಥಾನ! ಏನಿದು ಕಾಂಗ್ರೆಸ್​​ ಹೊಸ ಲೆಕ್ಕಾಚಾರ?

top videos


    ವೀಕ್ಷಕರು ದೆಹಲಿಗೆ ತೆರಳಿ ಹೈಕಮಾಂಡ್ ವರದಿ ನೀಡಲಿದ್ದಾರೆ. ಹೈಕಮಾಂಡ್ ಸಿಎಂ ಆಯ್ಕೆ ಮಾಡುತ್ತೆ ಎಂದಿದ್ದಾರೆ.

    First published: