• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Congress: ರಾಜ್ಯ ಕಾಂಗ್ರೆಸ್​​ಗೆ 90+ರ ತಲೆನೋವು; ಹೊಸ ಟೆನ್ಷನ್​ಗೆ ಕೈ ನಾಯಕರ ಪ್ಲಾನ್ ಏನು?

Karnataka Congress: ರಾಜ್ಯ ಕಾಂಗ್ರೆಸ್​​ಗೆ 90+ರ ತಲೆನೋವು; ಹೊಸ ಟೆನ್ಷನ್​ಗೆ ಕೈ ನಾಯಕರ ಪ್ಲಾನ್ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಬ್ಬರೂ ನಾಯಕರಿಗೂ 90 ವರ್ಷಕ್ಕಿಂತಲೂ ಅಧಿಕ ವಯಸ್ಸು ಆಗಿರುವ ಕಾರಣ, ಈ ಕ್ಷೇತ್ರದಲ್ಲಿ ಯುವ ನಾಯಕರಿಗೆ ಟಿಕೆಟ್ ನೀಡಬೇಕು ಅನ್ನೋದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಆಗಿತ್ತು.

  • Share this:

ಬೆಂಗಳೂರು: ಬಿಜೆಪಿಯಲ್ಲಿ (BJP) 75 ವರ್ಷ ಆದರೆ ನಿವೃತ್ತಿ (Retirement) ಎಂಬ ಅಲಿಖಿತ ನಿಯಮ ಇದೆ. ಈ ನಿಯಮದ ಹಿನ್ನೆಲೆಯೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂಬ ಮಾತುಗಳು ಕಮಲ ಅಂಗಳದಲ್ಲಿ ಕೇಳಿ ಬರುತ್ತಿವೆ. ಇತ್ತ ರಾಜ್ಯ ಕಾಂಗ್ರೆಸ್​ನಲ್ಲಿ (Karnataka Congress) ಟಿಕೆಟ್ ಫೈಟ್ ಜೋರಾಗಿದೆ. ಕಳೆದ ವರ್ಷವೇ ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್ ಆಹ್ವಾನ ನೀಡಿತ್ತು. ಹಾಲಿ ಶಾಸಕರಿಗೆ ಟಿಕೆಟ್ ಬಹುತೇಕ ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಹೇಳಿಕೆ ನೀಡಿದ್ರೂ, ಕಾಂಗ್ರೆಸ್ ಎಂಎಲ್​ಎಗಳ  ಕ್ಷೇತ್ರದಲ್ಲಿ 5ಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.


ಈ ಎಲ್ಲಾ ಬೆಳವಣಿಗೆ ನಡುವೆ 90ಕ್ಕಿಂತ ಹೆಚ್ಚು ವಯಸ್ಸು ಆಗಿರುವ ಇಬ್ಬರು ಹಿರಿಯ ನಾಯಕರು (Congress Senior Leaders( ನಮಗೆ ಟಿಕೆಟ್ ನೀಡಬೇಕೆಂದು ಹಠ ಹಿಡಿದಿದ್ದಾರೆ. ಈ ಇಬ್ಬರು ನಾಯಕರಿಗೆ ಟಿಕೆಟ್ ನೀಡಬೇಕಾ ಅಥವಾ ಬೇಡ್ವಾ ಅನ್ನೋ ಗೊಂದಲದಲ್ಲಿ ರಾಜ್ಯ ಕಾಂಗ್ರೆಸ್​ ಇದೆ.


ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ (Former Minister Kagodu Thimmappa) ಮತ್ತು ಶಾಮನೂರು ಶಿವಶಂಕರಪ್ಪ (Former Minister Shamanuru Shivashankarappa) ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.


Kagodu thimmappa and shamanuru shivashankarappa demands for congress ticket mrq
ಕಾಗೋಡು ತಿಮ್ಮಪ್ಪ, ಮಾಜಿ ಸಚಿವ


90+ ಟೆನ್ಷನ್!


ಇಬ್ಬರೂ ನಾಯಕರಿಗೂ 90 ವರ್ಷಕ್ಕಿಂತಲೂ ಅಧಿಕ ವಯಸ್ಸು ಆಗಿರುವ ಕಾರಣ, ಈ ಕ್ಷೇತ್ರದಲ್ಲಿ ಯುವ ನಾಯಕರಿಗೆ ಟಿಕೆಟ್ ನೀಡಬೇಕು ಅನ್ನೋದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಆಗಿತ್ತು. ಆದರೆ ವಯಸ್ಸು 90 ಆದ್ರೆ ಏನಾಯ್ತು, ನಾವು ಸ್ಪರ್ಧೆ ಮಾಡುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಮತ್ತು ಕಾಗೋಡು ತಿಮ್ಮಪ್ಪ ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.




ಕಾಗೋಡು ತಿಮ್ಮಪ್ಪ ಕಂಡೀಷನ್!


ಇನ್ನು ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ನಾಯಕರ ಮುಂದೆ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನನಗೆ ಟಿಕೆಟ್ ನೀಡದಿದ್ರೆ ಪುತ್ರಿಗೆ ಅವಕಾಶ ಕಲ್ಪಿಸಬೇಕು. ಇಲ್ಲವಾದ್ರೆ ನನಗೆ ಟಿಕೆಟ್ ನೀಡಿ. ಪುತ್ರಿಯ ಹೊರತಾಗಿ ನನ್ನ ಕುಟುಂಬದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ನಾನು ಒಪ್ಪಲ್ಲ ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ವರದಿ ಮಾಡಿದೆ.


Kagodu thimmappa and shamanuru shivashankarappa demands for congress ticket mrq
ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ


ಈ ಇಬ್ಬರು ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ಆಗಿದೆ ಎನ್ನಲಾಗಿದೆ. ಆದ್ರೆ ಇಬ್ಬರು ತಮ್ಮ ಪಟ್ಟು ಸಡಿಲಿಸಿಲ್ಲ ಎಂದು ಹೇಳಲಾಗುತ್ತಿದೆ. ಮುಂದೆ ಕಾಂಗ್ರೆಸ್ ಹಿರಿಯರ ಮನವೊಲಿಸುತ್ತಾ ಅಥವಾ ಟಿಕೆಟ್ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.


ಕಮಲ ಮುಡಿಯುತ್ತಾರಾ ಸುಮಲತಾ?


ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಬಿಜೆಪಿಗೆ ಸೇರ್ಪಡೆ ಆಗ್ತಾರಾ? ಮೋದಿ ಸಮ್ಮುಖದಲ್ಲೇ ಬಿಜೆಪಿ ಸೇರ್ಪಡೆಗೆ ಸಿದ್ಧತೆ ನಡೆದಿದೆ ಎಂದು ಸುಮಲತಾ ಆಪ್ತ ವಲಯದಿಂದ ನ್ಯೂಸ್ 18ಗೆ ಮಾಹಿತಿ ಸಿಕ್ಕಿದೆ.


ಇದನ್ನೂ ಓದಿ:  Zameer Ahmed Khan: ಎಲೆಕ್ಷನ್‌ಗೆ ಕುಕ್ಕರ್, ಸೀರೆ ಆಯ್ತು ಈಗ ವಿದೇಶಿ ಕರೆನ್ಸಿ ಸರದಿ; ಸೌದಿ ರಿಯಾಲ್ಸ್‌ ವಿತರಿಸಿದ ಶಾಸಕ ಜಮೀರ್​ ಅಹ್ಮದ್


ಮಾರ್ಚ್ 11 ರಂದು ಸುಮಲತಾ BJP ಸೇರ್ಪಡೆ ಬಗ್ಗೆ ಚರ್ಚೆ ನಡೆದಿದ್ಯಂತೆ. ಮದ್ದೂರಿನಲ್ಲಿ ಬಿಜೆಪಿ ಸಮಾವೇಶ ನಡೆಯಲಿದ್ದು, ಸರ್ಕಾರದ ವತಿಯಿಂದ ಸಮಾವೇಶ ಆಯೋಜನೆಯಾದ್ರೆ ಸುಮಲತಾ ಪಕ್ಷ ಸೇರ್ಪಡೆಗೆ ತೊಡಕಾಗುತ್ತೆ. ಆದ್ದರಿಂದ ಸುಮಲತಾಗಾಗಿ ಪಕ್ಷದ ವತಿಯಿಂದ ಸಮಾವೇಶ ನಡೆಸೋ ಸಾಧ್ಯತೆ ಇದೆ.

Published by:Mahmadrafik K
First published: