• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ತಮ್ಮನ್ನು ಉಚ್ಛಾಟನೆ ಮಾಡಲಿ ಎಂದು ಜಿ.ಟಿ ದೇವೇಗೌಡರೇ ಕಾಯುತ್ತಿದ್ದಾರೆ; ಹೆಚ್​ಕೆ ಕುಮಾರಸ್ವಾಮಿ ಲೇವಡಿ

ತಮ್ಮನ್ನು ಉಚ್ಛಾಟನೆ ಮಾಡಲಿ ಎಂದು ಜಿ.ಟಿ ದೇವೇಗೌಡರೇ ಕಾಯುತ್ತಿದ್ದಾರೆ; ಹೆಚ್​ಕೆ ಕುಮಾರಸ್ವಾಮಿ ಲೇವಡಿ

ಹೆಚ್​ಕೆ ಕುಮಾರಸ್ವಾಮಿ

ಹೆಚ್​ಕೆ ಕುಮಾರಸ್ವಾಮಿ

ಜೆಡಿಎಸ್​ ಪಕ್ಷದಿಂದ ಉಚ್ಛಾಟನೆ ಮಾಡಲಿ ಎಂದು ಜಿಟಿ ದೇವೇಗೌಡರೇ ಕಾಯುತ್ತಿದ್ದಾರೆ. ಆಗ ಇನ್ನೂ ಹಗುರವಾಗಿ ಮಾತನಾಡಬಹುದು. ಅವರಿಗೆ ಬೇರೆ-ಬೇರೆ ಅವಕಾಶಗಳಿವೆ. ಅವರ ಮಾತು, ರೀತಿ-ನೀತಿ ನೋಡಿದರೆ ಹಾಗೇ ಅನ್ನಿಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಕೆ ಕುಮಾರಸ್ವಾಮಿ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು (ಜ. 11): ಜಿ.ಟಿ. ದೇವೇಗೌಡರನ್ನು ನಾವು ಉಚ್ಛಾಟನೆ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಅವರೇ ತಮ್ಮನ್ನು ಉಚ್ಛಾಟನೆ ಮಾಡಲಿ ಎಂದು ಕಾಯುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಜಿ.ಟಿ. ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಹೆಚ್​ಕೆ ಕುಮಾರಸ್ವಾಮಿ, ಓರ್ವ ಶಾಸಕ ಪಕ್ಷದಲ್ಲಿ ಗೆದ್ದ ಮೇಲೆ ಅವಧಿ ಇರುವವರೆಗೂ ಪಕ್ಷಕ್ಕೆ ನಿಷ್ಠೆಯಿಂದ ಇರುವುದು ಒಳ್ಳೆಯದು ಎಂದರು.


ಈಗ ಉಚ್ಛಾಟನೆಗೆ ಯಾರೂ ಹೆದರಲ್ಲ. ಏಕೆಂದರೆ, ಅದರಿಂದ ಸದಸ್ಯತ್ವ ಹೋಗುವುದಿಲ್ಲ.  ಜೆಡಿಎಸ್​ ಪಕ್ಷದಿಂದ ಉಚ್ಛಾಟನೆ ಮಾಡಲಿ ಎಂದು ಜಿಟಿ ದೇವೇಗೌಡರೇ ಕಾಯುತ್ತಿದ್ದಾರೆ. ಆಗ ಇನ್ನೂ ಹಗುರವಾಗಿ ಮಾತನಾಡಬಹುದು. ಅವರಿಗೆ ಬೇರೆ-ಬೇರೆ ಅವಕಾಶಗಳಿವೆ. ಅವರ ಮಾತು, ರೀತಿ-ನೀತಿ ನೋಡಿದರೆ ಹಾಗೇ ಅನ್ನಿಸುತ್ತಿದೆ. ನಾವು ಅವರನ್ನ ಪ್ರತಿ ಸಭೆಗೂ ಕರೆಯುತ್ತೇವೆ. ಪಕ್ಷದ ಕರೆಗೆ ಬೆಲೆ ಕೊಟ್ಟು ನಮ್ಮ ಗುಬ್ಬಿ ಶ್ರೀನಿವಾಸ್ ಬಂದಿದ್ದರು. ಅವರನ್ನ ಸ್ವಾಗತಿಸುತ್ತೇವೆ. ಜಿ.ಟಿ. ದೇವೇಗೌಡರಿಗೂ ಕರೆ ಹೋಗಿತ್ತು. ಅವರು ಬಂದಿಲ್ಲ. ಅವರ ಭಾವನೆಗಳು ಏನಿವೆ ಎಂದು ನೋಡೋಣ ಎಂದು ಹೆಚ್​ಕೆ ಕುಮಾರಸ್ವಾಮಿ ಹೇಳಿದ್ದಾರೆ.


ಸಾ.ರಾ. ಮಹೇಶ್ ಕೂಡ ನಮ್ಮ ಪಕ್ಷದ ಶಾಸಕರು. ಜಿ.ಟಿ. ದೇವೇಗೌಡರಿಗೆ ಅವರದ್ದೇ ಆದ ಕ್ಷೇತ್ರವಿದೆ. ಮೊದಲು ಅವರ ಕ್ಷೇತ್ರದಲ್ಲಿ ಗೆದ್ದವರಿಗೆ ಸನ್ಮಾನ ಮಾಡಲಿ. ಆಮೇಲೆ ಬೇರೆ ಕ್ಷೇತ್ರಕ್ಕೆ ಹೋಗಲಿ. ಹೋಗಬಾರದು ಅಂತಲ್ಲ, ಅವರು ನಮ್ಮ ಪಕ್ಷದಲ್ಲಿ ಇನ್ನೂ ಇದ್ದಾರೆ. ನಮ್ಮ ಪಕ್ಷದ ಬಗ್ಗೆ ವಿಶ್ವಾಸ ಇಟ್ಟುಕೊಂಡು ಸ್ಥಳೀಯ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಕರೆದರೂ, ಕರೆಯದಿದ್ದರೂ ನಾನೂ ಪಕ್ಷದ ಶಾಸಕನಿದ್ದೇನೆ, ನಾನೂ ಬರ್ತೀನಿ ಅಂತ ಹೋಗಲಿ. ಆದರೆ, ಅವರು ಯಾವ ರೀತಿ ಹೋಗಿದ್ದಾರೆ ಎಂಬುದು ನನಗೆ ಸರಿಯಾದ ಮಾಹಿತಿ ಇಲ್ಲ ಎಂದಿದ್ದಾರೆ.


ಇನ್ನು ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಕೆ ಕುಮಾರಸ್ವಾಮಿ ಕಿಡಿಕಾರಿದರು. ಬಿಜೆಪಿ ಸರ್ಕಾರ ಬಂದಿದ್ದೇ ಆಪರೇಷನ್ ಕಮಲದ ಮೂಲಕ. ನಮ್ಮ ಶಾಸಕರನ್ನು ಸೆಳೆಯುವುದರ ಮೂಲಕ ಸರ್ಕಾರ ರಚನೆ ಮಾಡಿದರು. ಈಗ ಇದೇ ರೀತಿ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿ ಹಿಡಿಯುವುದಕ್ಕೆ ಬಿಜೆಪಿ ಇಲ್ಲಸಲ್ಲದ ರಣತಂತ್ರ ರೂಪಿಸುತ್ತಿದೆ. ಅಕ್ರಮ ಮಾರ್ಗವಾಗಿ ಗ್ರಾಮ ಪಂಚಾಯಿತಿ ವಿಜೇತ ಸದಸ್ಯರನ್ನು ಸೆಳೆಯಲಾಗುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಮಾರಾಟದ ವಸ್ತುಗಳಲ್ಲ ಎಂದರು. ಹಣದ ಆಮಿಷ, ಅಧಿಕಾರಿದ ಆಸೆ ತೋರಿಸಿ ಬಡವರನ್ನ ಸೆಳೆಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಗಾಂಧೀಜಿ ಕಂಡ ಕನಸಿಗೆ ಇದು ವಿರುದ್ಧವಾದುದು. ಇದನ್ನ ಬಿಜೆಪಿಯವರು ಬಿಡಬೇಕು ಎಂದು ಹೆಚ್​ಕೆ ಕುಮಾರಸ್ವಾಮಿ ಆಗ್ರಹಿಸಿದರು.

Published by:Sushma Chakre
First published: