• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rajya Sabha Election: ಡಿಕೆಶಿ, ಹರಿಪ್ರಸಾದ್ ಭೇಟಿ ಮಾಡಿದ ಜೆಡಿಎಸ್ ನಾಯಕ ಕುಪೇಂದ್ರ ರೆಡ್ಡಿ

Rajya Sabha Election: ಡಿಕೆಶಿ, ಹರಿಪ್ರಸಾದ್ ಭೇಟಿ ಮಾಡಿದ ಜೆಡಿಎಸ್ ನಾಯಕ ಕುಪೇಂದ್ರ ರೆಡ್ಡಿ

ಬಿ.ಕೆ ಹರಿಪ್ರಸಾದ್​ ಭೇಟಿ ಮಾಡಿದ ಕುಪೇಂದ್ರ

ಬಿ.ಕೆ ಹರಿಪ್ರಸಾದ್​ ಭೇಟಿ ಮಾಡಿದ ಕುಪೇಂದ್ರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಭೇಟಿ ಬಳಿಕ ಕುಪೇಂದ್ರ ರೆಡ್ಡಿ, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್​ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಶಾಸಕರ ಬೆಂಬಲ ಕೋರಿದ್ದಾರೆ.

  • Share this:

ಬೆಂಗಳೂರು (ಮೇ 29): ಜೂನ್ 10ಕ್ಕೆ ರಾಜ್ಯಸಭೆ ಚುನಾವಣೆ (Rajya Sabha Election) ಹಿನ್ನೆಲೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯಸಭೆಗೆ ಜೆಡಿಎಸ್ (JDS) ನಿಂದ ಕುಪೇಂದ್ರ ರೆಡ್ಡಿ(Kupendra Reddy) ಅಭ್ಯರ್ಥಿಯಾಗ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ. ಇತ್ತ ರಾಜ್ಯಸಭೆ ಆಕಾಂಕ್ಷಿ ಕುಪೇಂದ್ರ ರೆಡ್ಡಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ (D.K Shivakumar) ಅವ್ರನ್ನು ಭೇಟಿ ಮಾಡಿದ್ದಾರೆ. ಸದಾಶಿವನಗರದ (Sadashivanagar) ಡಿಕೆಶಿ ಮನೆಗೆ ಬಂದ ಕುಪೇಂದ್ರ ರೆಡ್ಡಿ, ಕಾಂಗ್ರೆಸ್ ನಲ್ಲಿ ಉಳಿದ ಮತಗಳ ಬೆಂಬಲ ಕೇಳಿದ್ರು.


ಡಿಕೆಶಿ ಭೇಟಿಯಾಗಿ ಬೆಂಬಲ ಕೇಳಿದ ಕುಪೇಂದ್ರ


4ನೇ ಸ್ಥಾನಕ್ಕೆ ಕುಪೇಂದ್ರ ರೆಡ್ಡಿ ಕಣಕ್ಕಿಳಿಸಲು JDS  ಪಕ್ಷ ಮುಂದಾಗಿದ್ದು, ಈ ಹಿನ್ನೆಲೆ ಕಾಂಗ್ರೆಸ್ ನ ಬೆಂಬಲ ಕೇಳಲು ಡಿಕೆಶಿ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಉಳಿದ ಮತಗಳ ಬೆಂಬಲ ಕೇಳಲು ಡಿಕೆಶಿ ಭೇಟಿ ಮಾಡಿರುವ ಕುಪೇಂದ್ರ ರೆಡ್ಡಿ ರಾಜ್ಯಸಭೆ ಭರ್ಜರಿ ತಯಾರಿ ನಡೆಸಿದ್ದಾರೆ.


ಬಿ.ಕೆ ಹರಿಪ್ರಸಾದ್​ ಭೇಟಿ ಮಾಡಿದ ಕುಪೇಂದ್ರ ರೆಡ್ಡಿ


ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಭೇಟಿ ಬಳಿಕ ಕುಪೇಂದ್ರ ರೆಡ್ಡಿ, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್​ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಶಾಸಕರ ಬೆಂಬಲ ಕೋರಿದ್ದಾರೆ. ರಾಜ್ಯಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಚಟುವಟಿಕೆ ಗರಿಗೆದರಿದೆ.


ಇದನ್ನೂ ಓದಿ:  MLC ಚುನಾವಣೆಗೆ ಸ್ಪರ್ಧಿಸಿದ್ದೇ ದೊಡ್ಡ ಅಪರಾಧ: ED ದಾಳಿ ಬಳಿಕ ಕೆಜಿಎಫ್ ಬಾಬು ಹೇಳಿಕೆ


ಶೀಘ್ರವೇ ಬಿಜೆಪಿ ಅಭ್ಯರ್ಥಿ ಘೋಷಣೆ 


ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ಸಂಜೆಯೊಳಗೆ ತೀರ್ಮಾನ ಮಾಡಲಿದ್ದು, ಮೂರನೇ ಅಭ್ಯರ್ಥಿಯ ಬಗ್ಗೆಯೂ ತೀರ್ಮಾನವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಆರ್.ಟಿ.ನಗರ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದಿದೆ. ನಮಗೆ ಇಬ್ಬರ ಆಯ್ಕೆಗೆ ಅಗತ್ಯ ಮತಗಳಿದ್ದು ಹೆಚ್ಚುವರಿ ಮತಗಳು ಉಳಿಯಲಿವೆ, ಯಾರಿಗೂ ನಾಲ್ಕನೇ ಸ್ಥಾನದ ಅಭ್ಯರ್ಥಿ ಆಯ್ಕೆಗೆ ಬೇಕಾದ ಮತಗಳಿಲ್ಲ, ಹಾಗಾಗಿ ನಾವು ಕೂಡ ಮೂರನೇ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಿದ್ದೇವೆ, ಈ ಬಗ್ಗೆ ಹೈಕಮಾಂಡ್ ಸಂಜೆ ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಿದರು.


ಇನ್ನು ಕುವೆಂಪು ಅವರನ್ನು ಅವಹೇಳನ ಮಾಡಿರುವ ಕುರಿತು ನಿರ್ಮಲಾನಂದ ಶ್ರೀಗಳ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇಂದು ಶಿಕ್ಷಣ ಸಚಿವರ ಸಭೆ ಕರೆದಿದ್ದು, ಅವರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ತಿಳಿಸಿದರು.


ಜೈರಾಮ್​​ ರಮೇಶ್ ಆಯ್ಕೆಗೆ ಕಾಂಗ್ರೆಸ್​ನಲ್ಲೇ ವಿರೋಧ 


ಬೆಂಗಳೂರು (ಮೇ 28): ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್​​ ರಮೇಶ್ ಆಯ್ಕೆಗೆ ಕಾಂಗ್ರೆಸ್​ನಲ್ಲಿ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ವಿ.ಆರ್. ಸುದರ್ಶನ್  ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ನೆಲ ಜಲ ಮತ್ತು ಸಮಸ್ಯೆಗಳ ಬಗ್ಗೆ ಸಮರ್ಥನಾಗಿ ಪ್ರತಿಪಾದಿಸಬೇಕಾದ ಅಭ್ಯರ್ಥಿ ಆಯ್ಕೆಯಾಗಬೇಕಿದೆ. ಸಮಗ್ರವಾಗಿ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡಬಲ್ಲವರನ್ನು ಆಯ್ಕೆ ಮಾಡಬೇಕು ಎಂದು ನಾನು ಶಾಸಕರಲ್ಲಿ ಆಗ್ರಹ ಮಾಡುತ್ತೇನೆ ಎಂದ್ರು.


ಇದನ್ನೂ ಓದಿ:  SDPI ಸಂಘಟನೆ BJPಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ, ತಾಕತ್ತಿದ್ರೆ ನಿಷೇಧಿಸಲಿ: ದಿನೇಶ್ ಗುಂಡೂರಾವ್ ಸವಾಲ್


ರಾಜ್ಯಕ್ಕೆ ಜೈರಾಮ್​ ರಮೇಶ್ ಕೊಡುಗೆ ಏನು?


ಉದಯಪುರದಲ್ಲಿ ಕಾಂಗ್ರೆಸ್ ಶಿಬಿರದಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಉದ್ದೇಶ ಇಟ್ಟುಕೊಳ್ಳಲಾಗಿತ್ತು. ಜನರ ನಿರೀಕ್ಷೆಗೆ ತಕ್ಕನಾಗಿ ಪಕ್ಷ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಸೋಮವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಜೈರಾಮ್​ ರಮೇಶ್ ಅಭ್ಯರ್ಥಿ ಆಗ್ತಾರಂತೆ ಅಂತಾ ಕೆಲವರು ನನ್ನ ಕೇಳಿದರು. ರಾಜ್ಯಕ್ಕೆ ಜೈರಾಮ್​ ರಮೇಶ್ ಕೊಡುಗೆ ಏನು? ರಾಜ್ಯಸಭೆಯಲ್ಲಿ ಅವರ ಪರ್ಫಾರ್ಮೆನ್ಸ್ ಕೂಡಾ ನಾವು ಕೇಳಬೇಕಾಗುತ್ತದೆ.

Published by:Pavana HS
First published: