• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BJP Vs Congress: ಯಡಿಯೂರಪ್ಪ‌ ಹೆಗಲ ಮೇಲೆ ಬಂದೂಕು ಇಟ್ಟು, ನನಗೆ ಗುರಿ ಇಟ್ಟಿದ್ದಾರೆ: ಶೆಟ್ಟರ್

BJP Vs Congress: ಯಡಿಯೂರಪ್ಪ‌ ಹೆಗಲ ಮೇಲೆ ಬಂದೂಕು ಇಟ್ಟು, ನನಗೆ ಗುರಿ ಇಟ್ಟಿದ್ದಾರೆ: ಶೆಟ್ಟರ್

ಜಗದೀಶ್ ಶೆಟ್ಟರ್/ ಬಿಎಸ್ ಯಡಿಯೂರಪ್ಪ

ಜಗದೀಶ್ ಶೆಟ್ಟರ್/ ಬಿಎಸ್ ಯಡಿಯೂರಪ್ಪ

BS Yediyurappa Vs Jagadish Shettar: ಯಡಿಯೂರಪ್ಪ ಅವರ ಬೈಗುಳವನ್ನು ಆಶೀರ್ವಾದ ಅಂತ ತಿಳಿದುಕೊಳ್ತೇನೆ. ಅವರ ಬೈಗುಳ ಆಶೀರ್ವಾದದಿಂದಲೇ ಗೆದ್ದು ತೋರಿಸುತ್ತೇನೆ

  • News18 Kannada
  • 4-MIN READ
  • Last Updated :
  • Hubli-Dharwad (Hubli), India
  • Share this:

ಹುಬ್ಬಳ್ಳಿ: ನಾನು ಕೂಲ್ ಕೂಲ್ ಆಗಿಯೇ ಚುನಾವಣಾ ಪ್ರಚಾರ (Election Campaign) ನಡೆಸುತ್ತಿದ್ದ್ದೇನೆ. ನಾನು ಪ್ರತಿಬಾರಿಯೂ ಇದೇ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸೋದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಹೇಳಿದ್ದಾರೆ.  ನ್ಯೂಸ್ 18 ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ನನ್ನನ್ನು ಮಣಿಸೋಕೆ ಘಟಾನುಘಟಿ ನಾಯಕರು (BJP Leaders) ಬೀಡು ಬಿಟ್ಟಿದ್ದಾರೆ. ಲಿಂಗಾಯತ ಮುಖಂಡರನ್ನೇ (Lingayat Leaders) ನನ್ನ ವಿರುದ್ಧ ದಾಳ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ‌ (Former CM BS Yediyurappa) ಹೆಗಲ ಮೇಲೆ ಬಂದೂಕು ಇಟ್ಟು,‌ ನನಗೆ ಗುರಿ ಇಟ್ಟಿದ್ದಾರೆ. ಲಿಂಗಾಯತ ನಾಯಕನ ಮೂಲಕವೇ ಮತ್ತೊಬ್ಬ ಲಿಂಗಾಯತ ನಾಯಕನ ತೇಜೋವಧೆ ನಡೆದಿದೆ ಎಂದು ಬೇಸರ ಹೊರಹಾಕಿದರು.


ಯಡಿಯೂರಪ್ಪನವರು ವೀರಶೈವ ಲಿಂಗಾಯತರ ಸಭೆ ಮಾಡಿದ್ದು, ಅಲ್ಲಿ ಎಂತಹ ನಾಯಕರು, ಎಷ್ಟು ನಾಯಕರು ಭಾಗಿಯಾಗಿದ್ದರೆಂಬ ಮಾಹಿತಿ ನನ್ನ ಬಳಿ ಇದೆ. ಅವರಷ್ಟೇ ಲಿಂಗಾಯತ ನಾಯಕರಲ್ಲ. ಅದರ ಹೊರತಾಗಿಯೂ ಲಿಂಗಾಯತ ನಾಯಕರ ದೊಡ್ಡ ಪಡೆ ಇದೆ ಎಂದು ಹೇಳುವ ಮೂಲಕ ಯಡಿಯೂಪ್ಪ ಅವರಿಗೆ ಟಾಂಗ್ ನೀಡಿದರು.


ನಾನು ಧೃತಿಗೆಡಲ್ಲ


ಕ್ಷೇತ್ರದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಲ್ಲಿಗೆ ಪ್ರಧಾನಿ‌ ಮೋದಿಯವರನ್ನೂ‌ ಸಹ ಕರೆತರೋಕೆ ಮುಂದಾಗಿದ್ದಾರೆ. ಅವರು ಏನೇ ಮಾಡಲಿ, ಯಡಿಯೂರಪ್ಪ‌ ಏನೇ ಬೈಯಲಿ. ನಾನು ಮಾತ್ರ ಧೃತಿಗೆಡಲ್ಲ ಎಂದರು.




ಇದನ್ನೂ ಓದಿ: Karnataka Election 2023: ರಾಯಬರೇಲಿ, ಅಮೇಥಿಯನ್ನೇ ಬಿಟ್ಟಿಲ್ಲ ಕನಕಪುರವನ್ನು ಬಿಡ್ತೀವಾ? ಡಿಕೆಶಿ ಅಡ್ಡದಲ್ಲಿ ಸಿ ಟಿ ರವಿ ಗುಡುಗು


ಬಿಜೆಪಿಗೆ ಶೆಟ್ಟರ್ ಸವಾಲು

top videos


    ಹಿರಿಯರಾಗಿರುವ ಯಡಿಯೂರಪ್ಪ ಅವರ ಬೈಗುಳವನ್ನು ಆಶೀರ್ವಾದ ಅಂತ ತಿಳಿದುಕೊಳ್ತೇನೆ. ಅವರ ಬೈಗುಳ ಆಶೀರ್ವಾದದಿಂದಲೇ ಗೆದ್ದು ತೋರಿಸುತ್ತೇನೆ ಎಂದು ಬಿಜೆಪಿಗೆ ಸವಾಲು ಹಾಕಿದರು.

    First published: