• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • CT Ravi: ಮಾಂಸ ತಿಂದು ಹನುಮ ದೇಗುಲಕ್ಕೆ ಸಿ ಟಿ ರವಿ ಭೇಟಿ? ತಿರುಗಿ ಬಿದ್ದ ಸಿದ್ದರಾಮಯ್ಯ ಬೆಂಬಲಿಗರು

CT Ravi: ಮಾಂಸ ತಿಂದು ಹನುಮ ದೇಗುಲಕ್ಕೆ ಸಿ ಟಿ ರವಿ ಭೇಟಿ? ತಿರುಗಿ ಬಿದ್ದ ಸಿದ್ದರಾಮಯ್ಯ ಬೆಂಬಲಿಗರು

ವೈರಲ್ ಆಗಿರುವ ಫೋಟೋ

ವೈರಲ್ ಆಗಿರುವ ಫೋಟೋ

ಶಾಸಕರ ಜೊತೆ ಸಿ.ಟಿ.ರವಿ ಬಾಡೂಟ ಸವಿಯುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ಫೋಟೋಗಳು ಕೊಲ್ಯಾಜ್ ಆಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸದೂಟ ಸೇವಿಸಿ ಹೋದ್ರೆ ತಪ್ಪು, ಸಿ.ಟಿ ರವಿ ಮಾಡಿದ್ದು ಸರಿನಾ ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Karwar, India
  • Share this:

ಕಾರವಾರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿ (BJP National General Secretary CT Ravi) ಮಾಂಸ ತಿಂದು ನಾಗಬನ (Nagabana) ಮತ್ತು ಹನುಮ ದೇಗುಲಕ್ಕೆ (Hanuma Temple) ಭೇಟಿ ನೀಡಿದ್ರಾ ಅನ್ನೋ ಪ್ರಶ್ನೆ ಉತ್ತರಕ್ಕೆ ಹರಿದಾಡುತ್ತಿದೆ. ಫೆಬ್ರವರಿ 19 ರಂದು ಭಾನುವಾರ ಉತ್ತರ ಕನ್ನಡ (Uttara Kannada) ಜಿಲ್ಲೆಗೆ ಸಿ.ಟಿ.ರವಿ ಆಗಮಿಸಿದ್ದರು. ಕಾರವಾರದ ಶಿವಾಜಿ ಜಯಂತಿಯಲ್ಲಿ (Shivaji Jayanti) ಭಾಗವಹಿಸಿ ಭಟ್ಕಳಕ್ಕೆ ಸಿ.ಟಿ.ರವಿ ಆಗಮಿಸಿದ್ದರು. ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ್ (MLA Sunil Naik) ಮನೆಯಲ್ಲಿ ಸಿ.ಟಿ.ರವಿ ಬಾಡೂಟ ಸವಿದಿದ್ದರು. ಬಾಡೂಟ ಸವಿದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ (CT Ravi Photo Viral) ವೈರಲ್ ಆಗಿದೆ.


ಬಾಡೂಟ ಸವಿದು ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಸಿ.ಟಿ.ರವಿ ಭೇಟಿ ನೀಡಿದ್ದರು. ಭಟ್ಕಳ ಶಾಸಕ ಸುನಿಲ್ ನಾಯ್ಕ್ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಸಿ.ಟಿ.ರವಿ ದೇವಸ್ಥಾನಕ್ಕೆ ತೆರಳಿದ್ದರು.


ನಾಗಬನದ ಬಾಗಿಲು ಹಾಕಿದ್ದರಿಂದ ಗೇಟ್ ಮುಂಭಾಗದಲ್ಲಿ ದೇವರಿಗೆ ಸಿ.ಟಿ.ರವಿ ನಮಸ್ಕಾರ ಸಲ್ಲಿಸಿದ್ದರು. ನಂತರ ಗೇಟ್ ಮುಂಭಾಗದಲ್ಲಿಯೇ ಶಾಸಕ ಸುನಿಲ್ ನಾಯ್ಕ ಹಾಗೂ ಕಮಿಟಿ ಸದಸ್ಯರು ಸಿ.ಟಿ.ರವಿ ಅವರನ್ನು ಸನ್ಮಾನಿಸಿದ್ದರು.


CT Ravi fish meal, CT Ravi karibanta hanuma temple, siddaramaiah non veg meal, kannada news, karnataka news, ಸಿ ಟಿ ರವಿ ಮೀನೂಟ, ಸಿ ಟಿ ರವಿ ಮಾಂಸ ಸೇವನೆ
ನಾಗಬನಕ್ಕೆ ಸಿ.ಟಿ.ರವಿ ಭೇಟಿ


ವೈರಲ್ ಫೋಟೋದಲ್ಲಿ ಏನಿದೆ?


ವೈರಲ್ ಆಗಿರುವ ಫೋಟೋದಲ್ಲಿ ಸಿ.ಟಿ.ರವಿ ಅವರ ಊಟದ ತಟ್ಟೆಯಲ್ಲಿ ಮೀನು ಫ್ರೈ, ಚಪಾತಿ ಮತ್ತು ಚಿಪ್ಪೆಕಲ್ಲಿನ ಸುಕ್ಕ ಇರೋದನ್ನು ಗಮನಿಸಬಹುದು. ಸಿ.ಟಿ.ರವಿ ಜೊತೆ ಶಾಸಕ ಸುನಿಲ್ ನಾಯ್ಕ ಮತ್ತು  ಬಿಜೆಪಿಯ ಮಾಜಿ ತಾಲೂಕು ಮಂಡಳಾಧ್ಯಕ್ಷ ರಾಜೇಶ್ ನಾಯ್ಕ್ ಸಹ ಬಾಡೂಟ ಸವಿದಿದ್ದಾರೆ.




ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್


ನಂತರ ಅಲ್ಲಿಂದ ಸಿ.ಟಿ.ರವಿ ಅವರು ಸಮೀಪ ಕರಿಬಂಟ ಹನುಮ ದೇಗುಲಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದೊಳಗೆ ಪ್ರವೇಶಿಸಿ ಪ್ರದಕ್ಷಿಣೆ ಸಹ ಹಾಕಿರುವ ವಿಡಿಯೋ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.


CT Ravi fish meal, CT Ravi karibanta hanuma temple, siddaramaiah non veg meal, kannada news, karnataka news, ಸಿ ಟಿ ರವಿ ಮೀನೂಟ, ಸಿ ಟಿ ರವಿ ಮಾಂಸ ಸೇವನೆ
ಹನುಮ ದೇಗುಲಕ್ಕೆ ಸಿ.ಟಿ.ರವಿ ಭೇಟಿ


ಶಾಸಕರ ಜೊತೆ ಸಿ.ಟಿ.ರವಿ ಬಾಡೂಟ ಸವಿಯುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ಫೋಟೋಗಳು ಕೊಲ್ಯಾಜ್ ಆಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸದೂಟ ಸೇವಿಸಿ ಹೋದ್ರೆ ತಪ್ಪು, ಸಿ.ಟಿ ರವಿ ಮಾಡಿದ್ದು ಸರಿನಾ ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ.




ಊಟದ ಬಳಿಕ ಶಿರಾಲಿಯಲ್ಲಿರುವ ಬಿಜೆಪಿ ಕಚೇರಿಗೆ ತೆರಳಿದ್ದ ಸಿ.ಟಿ.ರವಿ ಸ್ಥಳೀಯ ನಾಯಕರ ಜೊತೆ ಚುನಾವಣೆ ಕುರಿತು ಸಭೆ ನಡೆಸಿದ್ದರು.


ಸಿದ್ದರಾಮಯ್ಯ ವಿರುದ್ಧವೂ ಕೇಳಿ ಬಂದಿತ್ತು ಆರೋಪ?


2018ರ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ (Siddaramaiah Dharmasthala Visit) ತೆರಳಿದ್ದರು. ಈ ವೇಳೆ ಮೀನೂಟ ಸವಿದು ಮಂಜುನಾಥನ ದರ್ಶನ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಿತ್ತು. ಇತ್ತೀಚೆಗೆ ಕೊಡಗಿಗೆ ಭೇಟಿ ನೀಡಿದ್ದಾಗಲೂ ಮಾಂಸ ತಿಂದು ಬಸವ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿತ್ತು.


CT Ravi fish meal, CT Ravi karibanta hanuma temple, siddaramaiah non veg meal, kannada news, karnataka news, ಸಿ ಟಿ ರವಿ ಮೀನೂಟ, ಸಿ ಟಿ ರವಿ ಮಾಂಸ ಸೇವನೆ
ಹನುಮ ದೇಗುಲಕ್ಕೆ ಸಿ.ಟಿ.ರವಿ ಭೇಟಿ


ಇದನ್ನೂ ಓದಿ:  Kodagu Temple: ಸಿದ್ದರಾಮಯ್ಯ ಭೇಟಿ ಬಳಿಕ ದೇವಸ್ಥಾನದ ಶುದ್ಧೀಕರಣ, ವಿಶೇಷ ಪೂಜೆ


ಸಿದ್ದರಾಮಯ್ಯ ಭೇಟಿ ಬಳಿಕ ದೇಗುಲ ಶುದ್ಧೀಕರಣ


ಬಸವ ದೇಗುಲಕ್ಕೆ ತೆರಳಿದ್ದಾಗ ನಾನು ಮಾಂಸಾಹಾರ ಸೇವನೆ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು. ಕೊನೆಗೆ ಬಸವ ದೇವಾಲಯದ ಆಡಳಿತ ಮಂಡಳಿ ದೇಗುಲವನ್ನು ಶುದ್ಧೀಕರಣ ಮಾಡಿತ್ತು.

Published by:Mahmadrafik K
First published: