• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸರಳ ದಸರಾದಿಂದ ನಲುಗಿದ ಹೊಟೇಲ್​ ಉದ್ಯಮ; ಕೋಟ್ಯಾಂತರ ರೂ ನಷ್ಟ ಎಂದ ಮಾಲೀಕರು

ಸರಳ ದಸರಾದಿಂದ ನಲುಗಿದ ಹೊಟೇಲ್​ ಉದ್ಯಮ; ಕೋಟ್ಯಾಂತರ ರೂ ನಷ್ಟ ಎಂದ ಮಾಲೀಕರು

ಮೈಸೂರು ಅರಮನೆ

ಮೈಸೂರು ಅರಮನೆ

ದಸರಾ ಸಂಭ್ರಮದಲ್ಲಿ ಜನರಿಂದ ಕಿಕ್ಕಿರಿದು ತುಂಬುತ್ತಿದ್ದ ಹೊಟೇಲ್​ಗಳು ಖಾಲಿ ಹೊಡೆಯುತ್ತಿವೆ. ತಿಂಗಳುಗಳ ಮುಂಚೆ ಕಾದಿರಿಸಲಾಗುತ್ತಿದ್ದ ಬಾಡಿಗೆ ರೂಂಗಳಿಗೆ ಕೇಳುವವರೆ ಇಲ್ಲದಂತೆ ಆಗಿದೆ.

  • Share this:

ಮೈಸೂರು (ಅ.23): ವಿಶ್ವವಿಖ್ಯಾತ ದಸರಾ ಸಂಭ್ರಮ ಸಾಂಸ್ಕೃತಿಕ ನಗರದ ಶ್ರೀಮಂತಿಕೆಯನ್ನು ತೋರಿಸುವ ಜೊತೆಗೆ ಈ ಸಂದರ್ಭದಲ್ಲಿ ನಗರದ ವ್ಯಾಪಾರಿಗಳ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಿತ್ತು. ಆದರೆ, ಈ ಬಾರಿ ಇದಕ್ಕೆಲ್ಲಾ ಬ್ರೇಕ್​ ಬಿದ್ದಿದೆ. ದಸರಾ ಸಂಭ್ರಮದಲ್ಲಿ ಜನರಿಂದ ಕಿಕ್ಕಿರಿದು ತುಂಬುತ್ತಿದ್ದ ಹೊಟೇಲ್​ಗಳು ಖಾಲಿ ಹೊಡೆಯುತ್ತಿವೆ. ತಿಂಗಳುಗಳ ಮುಂಚೆ ಕಾದಿರಿಸಲಾಗುತ್ತಿದ್ದ ಬಾಡಿಗೆ ರೂಂಗಳಿಗೆ ಕೇಳುವವರೆ ಇಲ್ಲದಂತೆ ಆಗಿದೆ. ಇದರ ಪರಿಣಾಮ ನಗರದ ಹೋಟೆಲ್​ ಮಾಲೀಕರು 100 ಕೋಟಿಯಷ್ಟು ನಷ್ಟ ಅನುಭವಿಸಿದ್ದಾರೆ ಎಂದು ನಗರದ ಹೊಟೇಲ್​ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ. ಕೊರೋನಾ ಸಂಕಷ್ಟದಲ್ಲಿದ್ದ ನಮಗೆ ಸರಳ ದಸರಾ ಮತ್ತಷ್ಟು ಪೆಟ್ಟು ನೀಡಿದೆ. ಈ ಹಿನ್ನಲೆ ಸರ್ಕಾರ ಹೊಟೇಲ್​ ಉದ್ಯಮಕ್ಕೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ. 


ದಸರಾ ಎಂಬುದು ಮೈಸೂರಿನ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ವ್ಯಾಪಾರದ ಹಬ್ಬವಿದ್ದಂತೆ. ದಸರಾ ಸಂಭ್ರಮಕ್ಕಾಗಿ ದೇಶ-ವಿದೇಶದಿಂದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ  ಇಲ್ಲಿಗೆ ಪ್ರವಾಸಿಗರು ಆಗಮಿಸುವ ಹಿನ್ನಲೆ ಹೊಟೇಲ್​ಗಳಲ್ಲಿ ಜನಜಂಗುಳಿ ಕಂಡು ಬರುತ್ತಿದ್ದವು. ಆದರೆ, ಈ ಬಾರಿ ಜನರೆ ಇಲ್ಲದೇ ದಸರಾ ಬಣಗುಡುತ್ತಿದೆ. ಪ್ರತಿ ಬಾರಿ ಶೇ 90 ರಷ್ಟು ಆಗುತ್ತಿದ್ದ ಹೋಟೆಲ್​ ಬುಕ್ಕಿಂಗ್​ ಈ ಬಾರಿ ಶೇ 40 ರಷ್ಟು ಆಗಿಲ್ಲ. ಅಲ್ಲದೇ ರೆಸ್ಟೋರೆಂಟ್​ ಉದ್ಯಮ ಕೂಡ ಕುಗ್ಗಿ ಹೋಗಿದೆ ಎಂಬುದು ಹೋಟೆಲ್​ ಮಾಲೀಕರ ಅಳಲಾಗಿದೆ.


ಇದನ್ನು ಓದಿ: ಮೈಸೂರು ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದ ಕೊರೋನಾ ಸೋಂಕು: ಹೇಳಿದಂತೆ ಮಾಡಿಬಿಟ್ಟರಾ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ


ಇಲ್ಲಿನ ಹೊಟೇಲ್​ ಮಾಲೀಕರಿಗೆ ದಸರಾ ಸಂಭ್ರಮವೇ ಸುಗ್ಗಿ ಕಾಲ. ಆದರೆ, ಈ ಬಾರಿ ಕೊರೋನಾ ಹಿನ್ನಲೆ ಸರ್ಕಾರ ಸರಳಾ ದಸರಾ ಆಚರಣೆಗೆ ಮುಂದಾಗಿದೆ. ಇದರಿಂದಾಗಿ ಸಂಪೂರ್ಣವಾಗಿ ಉದ್ಯಮ ಕುಗ್ಗಿದೆ. ಈ ಹಿನ್ನಲೆ ಸರ್ಕಾರವೇ ನಮ್ಮ ಸಹಾಯಕ್ಕೆ ಆಗಮಿಸಬೇಕು ಎಂದು ಮಾಲೀಕರು ಕೋರಿದ್ದಾರೆ.


ಹೋಟೆಲ್​ ಉದ್ಯಮಕ್ಕೆ ತೆರಿಗೆ ರಿಯಾಯಿತಿ ಹಾಗೂ ಪರವಾನಗಿಯ ಹಣದಲ್ಲಿ‌ ರಿಯಾಯಿತಿ ಕೊಡಲಿ. ಇದರಿಂದ ಪ್ರವಾಸೋದ್ಯಮವನ್ನೇ ನಂಬಿ ಬದುಕುವ ನಮಗೆ ಸಹಾಯವಾಗಲಿದೆ. ಇದನ್ನೇ ನಾವು ಸಿಎಂ ಅವರಿಗೆ ಮನವಿ ಮಾಡುತ್ತೇವೆ.

Published by:Seema R
First published: