• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಆಗ್ರಹ; ಮತ್ತೆ ವಿವಾದ ಮುನ್ನೆಲೆಗೆ ಸಾಧ್ಯತೆ!

Hubballi: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಆಗ್ರಹ; ಮತ್ತೆ ವಿವಾದ ಮುನ್ನೆಲೆಗೆ ಸಾಧ್ಯತೆ!

ಈದ್ಗಾ ಮೈದಾನ

ಈದ್ಗಾ ಮೈದಾನ

ಹುಬ್ಬಳ್ಳಿ ಈದ್ಗಾ ಮೈದಾನ ದೇಶದ ಗಮನ ಸೆಳೆದಿತ್ತು. ಅದು ತಣ್ಣಗಾಗಿ ಹಲವು ವರ್ಷ ಕಳೆದಿವೆ. ಇದೀಗ ಗಣೇಶೋತ್ಸವದ ಹಿನ್ನೆಲೆಯಲ್ಲಿ ಈದ್ಗಾ ವಿವಾದ ಮತ್ತೆ ಮುನ್ನಲೆಗೆ ಬರೋ ಲಕ್ಷಣಗಳು ಕಾಣಿಸುತ್ತಿವೆ.

  • Share this:

ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ (Hubballi Idgah Maidana) ಒಂದೊಮ್ಮೆ ದೇಶದ ಗಮನ ಸೆಳೆದಿತ್ತು. ಪ್ರಕರಣ ಸುಖಾಂತ್ಯಗೊಂಡು ಇಷ್ಟು ದಿನ ತಣ್ಣಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಮತ್ತೆ ಮುನ್ನಲೆಗೆ ಬರುವ ಲಕ್ಷಣಗಳು ಗೋಚರಿಸುತ್ತಿವೆ.‌ ಬೆಂಗಳೂರಿನ (Bengaluru) ಚಾಮರಾಜಪೇಟೆಯ ಈದ್ಗಾ ಮೈದಾನದ (Chamarajpet Idgah Maidana) ವಿವಾದದ‌ ಬಳಿಕ  ಹುಬ್ಬಳ್ಳಿಯಲ್ಲೂ ವಿವಾದ (Hubballi Row) ಹುಟ್ಟಿಕೊಂಡಿದ್ದು, ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು (Ganeshotsava Celebration) ಅವಕಾಶ ಕೊರಿ ಗಜಾನನ ಮಂಡಳಿಯೊಂದು (Gajanana Committee) ಮನವಿ ಮಾಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ‌.


ಹೌದು, ಹುಬ್ಬಳ್ಳಿಯ ಈದ್ಗಾ ವಿವಾದ ದಶಕಗಳ‌ ಕಾಲ‌ ಹುಬ್ಬಳ್ಳಿಯನ್ನು ಹೊತ್ತಿ ಉರಿಯುವಂತೆ ಮಾಡಿತ್ತು. ಹುಬ್ಬಳ್ಳಿಯ ಈದ್ಗಾ ಮೈದಾನದಕ್ಕಾಗಿ 90ರ ದಶಕದಲ್ಲಿ ನಡೆದ ಹೋರಾಟದಿಂದ ಘಟಾನುಘಟಿ ನಾಯಕರಗಳು ಅಧಿಕಾರದ ಗದ್ದುಗೆ ಏರಿದ್ರೆ, ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಉಮಾ ಭಾರತಿ, ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಂಡ್ರು.


ಹುಬ್ಬಳ್ಳಿಯ ಈದ್ಗಾ ಮೈದಾನದ‌ ಹೋರಾಟ ಅಷ್ಟೊಂದು ರಣ ರೋಚಕ ಇತಿಹಾಸವನ್ನು ಹೊಂದಿದೆ. ತಿಂಗಳಾನುಗಟ್ಟಲೆ ಗದ್ದಲಗಳು ನಡೆದು, ಹಲವು ಬಾರಿ ಕರ್ಫ್ಯೂ ವಿಧಿಸಲೂ ಕಾರಣವಾಗಿತ್ತು.


Hindu group in hubballi demands permission to celebrate ganesha festival in hubballi saklb mrq
ಈದ್ಗಾ ಮೈದಾನ


ಇದನ್ನೂ ಓದಿ:  Idgah: ಈದ್ಗಾ ಮೈದಾನಕ್ಕೆ ಜಮೀರ್​ಗೂ ನೋ ಪರ್ಮಿಷನ್! ಸರ್ಕಾರದಿಂದಲೇ ಧ್ವಜಾರೋಹಣ


ಮತ್ತೆ ಮುನ್ನಲೆಗೆ ಬರುತ್ತಾ ವಿವಾದ?


ಆದರೆ ದಶಕದ ಹಿಂದೆಯೇ ಹುಬ್ಬಳ್ಳಿಯ ಈದ್ಗಾ ವಿವಾದಕ್ಕೆ ಅಂತ್ಯ ಹಾಡಲಾಗಿದೆ. ಈಗ ಎಲ್ಲರೂ ಶಾಂತಿ‌‌ ಸಹಬಾಳ್ವೆಯಿಂದ ದಿನ ದೂಡುತ್ತಿದ್ದಾರೆ. ಆದರೆ ಇತ್ತೀಚೆಗೆ ನಡೆದ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದದ ಬಳಿಕ, ಮತ್ತೆ ಹುಬ್ಬಳ್ಳಿಯ ಈದ್ಗಾ ವಿವಾದ ಮತ್ತೆ ಮುನ್ನೆಲೆಗೆ ಬರುವ ಲಕ್ಷಣಗಳು ಸ್ಪಷ್ಟವಾಗಿವೆ.


ಗಣೇಶೋತ್ಸವ ಆಚರಣೆಗೆ ಮನವಿ ಸಲ್ಲಿಕೆ


ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ವೇಳೆ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ರಾಣಿ ಚೆನ್ನಮ್ಮ ಈದ್ಗಾ ಮೈದಾನ ಗಜಾನನ ಉತ್ಸವ ಸಮಿತಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಇದು ಹೊಸದೊಂದು ವಿವಾದ ಹುಟ್ಟು ಹಾಕುವ ಸಾಧ್ಯತೆ ದಟ್ಟವಾಗಿದೆ.


Hindu group in hubballi demands permission to celebrate ganesha festival in hubballi saklb mrq
ಈದ್ಗಾ ಮೈದಾನ


ಐತಿಹಾಸಿಕ ಮೂರು ಸಾವಿರ ಮಠದಲ್ಲಿ ಸಮಿತಿ ಸಭೆ


ಇನ್ನು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿಯೇ ಗಣೇಶ ಉತ್ಸವಕ್ಕೆ ಅನುಮತಿ ನೀಡುವಂತೆ ಹೋರಾಟ ನಡೆಸಿರುವ ಹಿಂದೂಗಳು, ಹೊಸದಾಗಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಸಾಲದ್ದಕ್ಕೆ ಇದೇ ಆಗಸ್ಟ್ 15 ರಂದು ಹುಬ್ಬಳ್ಳಿಯ ಐತಿಹಾಸಿಕ ಮೂರು ಸಾವಿರ ಮಠದಲ್ಲಿ ಸಮಿತಿ ಸಭೆ ಸಹ ಕರೆಯಲಾಗಿದೆ.


ನಗರದ ಹಿಂದೂ ಸಮಾಜದ ಗಣ್ಯರನ್ನು ಸಭೆಗೆ ಆಹ್ವಾನಿಸಲಾಗಿದೆ‌. ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ಅದರ ಪೂರ್ವ ಸಿದ್ಧತೆ, ರೂಪರೇಷೆಗಳನ್ನು ಚೆರ್ಚಿಸಲು ಸಭೆ ಕರೆಯಲಾಗಿದೆ ಅಂತ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ‌ಯ ಸಂಚಾಲಕ ಹನುಮಂತ ಸಾ ನಿರಂಜನ ಹೇಳಿದ್ದಾರೆ.


Hindu group in hubballi demands permission to celebrate ganesha festival in hubballi saklb mrq
ಗಜಾನನ ಸಮಿತಿ


ಪಾಲಿಕೆ ನಿರ್ಧಾರದತ್ತ ಎಲ್ಲರ ಚಿತ್ತ


ಇದು ಸಾಕಷ್ಟು ಪರ ವಿರೋಧ ಚರ್ಚೆಗಳಿಗೆ ಕಾಣರವಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಇಂತಹದೊಂದು ಚರ್ಚೆ ಮುನ್ನೆಲೆಗೆ ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪಾಲಿಕೆ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ:  Praveen Nettar Murder: ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ; ಹೇಗಿತ್ತು ಕೊಲೆ ಸ್ಕೆಚ್​?


ಸರ್ಕಾರದಿಂದ ಧ್ವಜಾರೋಹಣ


ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದ ಹೊತ್ತಲ್ಲೇ ಎದ್ದಿದ್ದ ಈದ್ಗಾ ಮೈದಾನ (Idgah) ವಿವಾದವನ್ನು ಸರ್ಕಾರ ಗುರುವಾರ ಇತ್ಯರ್ಥ (Solve) ಪಡಿಸಿದೆ. ವಿವಾದದ ಕೇಂದ್ರಬಿಂದುವಾಗಿದ್ದ ಚಾಮರಾಜಪೇಟೆಯ ಈದ್ಗಾ ಮೈದಾನವನ್ನು (Ground) ಸರ್ಕಾರ ತನ್ನ ವಶಕ್ಕೆ ಪಡೆದಿದೆ.


ಮಾತ್ರವಲ್ಲ ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ (Flag Hoisting) ನಡೆಯುತ್ತೆ. ಬೇರೆ ಯಾರಿಗೂ ಇಲ್ಲಿ ಅವಕಾಶ ಇಲ್ಲ ಅಂತಾ ಕಂದಾಯ ಸಚಿವ (Revenue Minister) ಆರ್​.ಅಶೋಕ್ ಹೇಳಿದ್ದಾರೆ

top videos
    First published: