HD Devegowda ಜೊತೆಗಿನ ರೇವಣ್ಣ ಸಂಧಾನ ವಿಫಲ? ಹಾಸನ ಟಿಕೆಟ್ ಯಾರಿಗೆ?

ಭವಾನಿ ರೇವಣ್ಣ

ಭವಾನಿ ರೇವಣ್ಣ

Hassan Ticket Fight: ದೇವೇಗೌಡರಿಗೆ ಜಿಲ್ಲೆಯಲ್ಲಿ 40 ವರ್ಷ ಅನುಭವ ಇದೆ. ಹಾಗಾಗಿ ದೇವೇಗೌಡರು ಹೇಳಿದ್ದೇ ಫೈನಲ್ ಅಗಲಿದೆ. ಕುಮಾರಣ್ಣನ ಮುಖ್ಯಮಂತ್ರಿ ಮಾಡೋದಷ್ಟೇ ನಮ್ಮ ಆಶಯ ಎಂದು ಹೇಳಿದರು.

  • News18 Kannada
  • 5-MIN READ
  • Last Updated :
  • Karnataka, India
  • Share this:

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಹಾಸನ ವಿಧಾಸಭಾ ಕ್ಷೇತ್ರದ ಟಿಕೆಟ್ (Hassan Constituency)​​​ ಸಂಬಂಧಿಸಿದಂತೆ ಜೆಡಿಎಸ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (Former Prime Minister HD Deve Gowda) ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ ಎಂದು ತಿಳಿದು ಬಂದಿದೆ. ಭವಾನಿ ರೇವಣ್ಣ (Bhavani Revanna) ಅವರಿಗೆ ಟಿಕೆಟ್​​​ ನೀಡುವುದು ಸಾಧ್ಯವಿಲ್ಲ ಎಂಬ ಮಾತನ್ನು ದೇವೇಗೌಡರು ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ. ಗೌಡರ ಈ ನಿಲುವಿನಿಂದ ಆಕ್ರೋಶಗೊಂಡ ಭವಾನಿ ರೇವಣ್ಣ ಮತ್ತು ಹೆಚ್​.ಡಿ ರೇವಣ್ಣ (Former Minister HD Revanna) ಮುನಿಸಿಕೊಂಡು ಸಭೆಯ ಅರ್ಧದಲ್ಲೇ ಪ್ರತ್ಯೇಕವಾಗಿ ನಿರ್ಗಮಿಸಿದ್ದಾರೆ ಎನ್ನಲಾಗಿದೆ.


ಕುಟುಂಬದವರಿಗೆ ಟಿಕೆಟ್​​ ಬೇಡ ಎಂಬ ಬಲವಾದ ನಿಲುವು ವ್ಯಕ್ತಪಡಿಸಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​.ಡಿ ಕುಮಾರಸ್ವಾಮಿ ಅವರ ಮಾತಿಗೇ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಇಂದೇ ಹಾಸನ ಕುತೂಹಲಕ್ಕೆ ತೆರೆ ಹೆಚ್.​ಡಿ ಕುಮಾರಸ್ವಾಮಿ ತೆರೆ ಎಳೆಯೋ ಸಾಧ್ಯತೆಯಿದೆ.


ದೇವೇಗೌಡರು ಹೇಳಿದ್ದೇ ಅಂತಿಮ


ಭಾನುವಾರ ರಾತ್ರಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ನಾನು ಕುಮಾರಸ್ವಾಮಿ ಹೊಡೆದಾಡಿಕೊಳ್ಳುತ್ತೇವೆ ಅನ್ನೋದು ನಿಮ್ಮ ಭ್ರಮೆ. ಕುಮಾರಸ್ವಾಮಿ ಅವರನ್ನು ಯಾವತ್ತೂ ನಾನು ಬಿಟ್ಟು ಕೊಡಲ್ಲ.




ದೇವೇಗೌಡರಿಗೆ ಜಿಲ್ಲೆಯಲ್ಲಿ 40 ವರ್ಷ ಅನುಭವ ಇದೆ. ಹಾಗಾಗಿ ದೇವೇಗೌಡರು ಹೇಳಿದ್ದೇ ಫೈನಲ್ ಅಗಲಿದೆ. ಕುಮಾರಣ್ಣನ ಮುಖ್ಯಮಂತ್ರಿ ಮಾಡೋದಷ್ಟೇ ನಮ್ಮ ಆಶಯ ಎಂದು ಹೇಳಿದರು.


ಇದನ್ನೂ ಓದಿ: Karnataka Election 2023 updates: ಹೆಚ್ಚಾಗ್ತಿದೆ ಟಿಕೆಟ್ ಆಕಾಂಕ್ಷಿಗಳ ಎದೆ ಬಡಿತ; ಅಭ್ಯರ್ಥಿಗಳ ಆಯ್ಕೆಯ ಕಸರತ್ತು!


ತಾಯಿ ಆಶೀರ್ವಾದ ಪಡೆಯಲು ಬಂದಿದ್ರು!


ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಭವಾನಿ ನಮ್ಮ ತಾಯಿ ಆಶಿರ್ವಾದ ಪಡೆಯಲು ಬಂದಿದ್ರು. ಹಾಸನದ ಟಿಕೆಟ್ ದೇವೇಗೌಡರೇ ತೀರ್ಮಾನ ಮಾಡ್ತಾರೆ ಮತ್ತು ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು.

First published: