• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bhavani Revanna: ಭವಾನಿಗೆ ಟಿಕೆಟ್ ಘೋಷಿಸದ ಎಚ್‌ಡಿಕೆ! ಅತ್ತಿಗೆ-ಮೈದುನನ ಕದನದಲ್ಲಿ ಗೆದ್ದಿದ್ದು ಯಾರು?

Bhavani Revanna: ಭವಾನಿಗೆ ಟಿಕೆಟ್ ಘೋಷಿಸದ ಎಚ್‌ಡಿಕೆ! ಅತ್ತಿಗೆ-ಮೈದುನನ ಕದನದಲ್ಲಿ ಗೆದ್ದಿದ್ದು ಯಾರು?

ಹಾಸನ ಸಿಂಹಾಸನ ಕದನಕ್ಕೆ ಫುಲ್​​ಸ್ಟಾಪ್​​ (ಸಾಂದರ್ಭಿಕ ಚಿತ್ರ)

ಹಾಸನ ಸಿಂಹಾಸನ ಕದನಕ್ಕೆ ಫುಲ್​​ಸ್ಟಾಪ್​​ (ಸಾಂದರ್ಭಿಕ ಚಿತ್ರ)

ಕುಮಾರಸ್ವಾಮಿ ಅವರು ಪಟ್ಟು ಹಿಡಿದ ಕಾರಣ ರೇವಣ್ಣ ಕುಟುಂಬ ಹಾಸನ ಟಿಕೆಟ್​ನಿಂದ ಹಿಂದೆ ಸರಿದಿದ್ದು, ಭವಾನಿ ಅವರ ಮನವೊಲಿಕೆ ಮಾಡಲು ಹಾಸನ ಕ್ಷೇತ್ರದ ಬದಲು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

 ಬೆಂಗಳೂರು: ಹಾಸನ (Hassan) ಜೆಡಿಎಸ್ (JDS)  ಸಿಂಹಾಸನ ಕದನಕ್ಕೆ ಕೊನೆಗೂ ಬ್ರೇಕ್​ ಬಿದ್ದಿದ್ದು, ಹಾಸನದ ಕಾರ್ಯಕರ್ತ ಟಿಕೆಟ್​ ಆಕಾಂಕ್ಷಿಯಾಗಿದ್ದ ಸ್ವರೂಪ್​ (Swaroop) ಅವರಿಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಟಿಕೆಟ್ ಘೋಷಣೆ ಮಾಡಿದ್ದಾರೆ. ಇದರ ನಡುವೆಯೇ ದೇವೇಗೌಡರ (HD Devegowda) ಕುಟುಂಬವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ರೇವಣ್ಣ ಅವರ ನೇತೃತ್ವದಲ್ಲೇ ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆಯುತ್ತದೆ ಎಂದು ಟಿಕೆಟ್ ಪಡೆದ ಸ್ವರೂಪ್​​ ಪ್ರತಿಕ್ರಿಯೆ ನೀಡಿದ್ದಾರೆ. ಇದರ ನಡುವೆ ಹಾಸನದಲ್ಲಿ ಜೆಡಿಎಸ್​ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.


ಹಾಸನ ಸಿಂಹಾಸನ ಗುದ್ದಾಟದಲ್ಲಿ ಎಚ್​ಡಿಕೆಗೆ ಗೆಲುವು


ಹಾಸನ ಟಿಕೆಟ್​ ಕದನ ಆರಂಭದಿಂದಲೂ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ಟಿಕೆಟ್​ ಜೆಡಿಎಸ್​ ಕಾರ್ಯಕರ್ತನಿಗೆ ನೀಡಲಾಗುತ್ತದೆ ಎಂದು ಹೇಳುತ್ತಾ ಬಂದಿದ್ದರು. ಆದರೆ ರೇವಣ್ಣ ಕುಟುಂಬ ಎಷ್ಟೇ ಕಾರ್ಯತಂತ್ರ ನಡೆಸಿದರೂ ಕೂಡ ಎಚ್​ಡಿಕೆ ನಿರ್ಧಾರದಲ್ಲಿ ಬದಲಾವಣೆ ಆಗಿರಲಿಲ್ಲ. ಸದ್ಯ ಸ್ವರೂಪ್​ಗೆ ಟಿಕೆಟ್​ ಘೋಷಣೆಯಾಗಿದ್ದು, ಕುಮಾರಸ್ವಾಮಿ ಅವರು ಹಾಸನ ಸಿಂಹಾಸನ ಗುದ್ದಾಟದಲ್ಲಿ ಗೆಲುವು ಪಡೆದಿದ್ದಾರೆ ಎಂಬ ಮಾತು ಕೇಳಿ ಬಂದಿದೆ.


ಇದನ್ನೂ ಓದಿ: JDS Candidates List 2023: ಹಾಸನದಲ್ಲಿ ಭವಾನಿ ರೇವಣ್ಣ ಕೈತಪ್ಪಿದ ಟಿಕೆಟ್! ಜೆಡಿಎಸ್‌ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್


ನನ್ನನ್ನು ಕುಮಾರಣ್ಣರನ್ನು ಬೇರೆ ಮಾಡಲು ಆಗೋದಿಲ್ಲ


ಹಾಸನ ಜಿಲ್ಲೆಯ ಚಿತ್ರೀಕರಣ 60 ವರ್ಷಗಳ ಕಾಲ ದೇವೇಗೌಡರಿಗೆ ತಿಳಿದಿದೆ. ನಾನು 6 ತಿಂಗಳಿನಿಂದ ಹಾಸನ ಟಿಕೆಟ್​ ದೇವೇಗೌಡರು, ಕುಮಾರಣ್ಣ, ಸಿಎಂ ಇಬ್ರಾಹಿಂ ಅವರು ಫೈನಲ್​ ಮಾಡುತ್ತಾರೆ ಅಂತ ಹೇಳಿದ್ದೆ. ಆದ್ದರಂತೆ ಸ್ವರೂಪ್​ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ನನ್ನನ್ನು ಕುಮಾರಣ್ಣ ಅವರನ್ನು ಬೇರೆ ಮಾಡಲು ಆಗೋದಿಲ್ಲ ಎಂದು ಎಚ್​​ಡಿ ರೇವಣ್ಣ ಟಿಕೆಟ್​ ಘೋಷಣೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.




ಇನ್ನು, ಚಾಮರಾಜ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರನ್ನು ಕಣಕ್ಕೆ ಇಳಿಸಿಲಾಗುತ್ತದೆ ಎನ್ನಲಾಗಿದೆ. ಕುಮಾರಸ್ವಾಮಿ ಅವರು ಪಟ್ಟು ಹಿಡಿದ ಕಾರಣ ರೇವಣ್ಣ ಕುಟುಂಬ ಹಾಸನ ಟಿಕೆಟ್​ನಿಂದ ಹಿಂದೆ ಸರಿದಿದ್ದು, ಭವಾನಿ ಅವರ ಮನವೊಲಿಕೆ ಮಾಡಲು ಹಾಸನ ಕ್ಷೇತ್ರದ ಬದಲು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಚಾಮರಾಜ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಳ ಹಿನ್ನೆಲೆ ಗೆಲ್ಲುವ ನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ಚಾಮರಾಜ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಕಣಕ್ಕಿಳಿಸುವ ಸಾಧ್ಯತೆ ಇದೇ ಎನ್ನಲಾಗಿದೆ.

First published: