JDS Manifesto 2023: 12 ಭರವಸೆಗಳ ಜೆಡಿಎಸ್​ ಪ್ರಣಾಳಿಕೆ!

ಹೆಚ್​ಡಿ ಕುಮಾರಸ್ವಾಮಿ/ಹೆಚ್​ಡಿ ದೇವೇಗೌಡ

ಹೆಚ್​ಡಿ ಕುಮಾರಸ್ವಾಮಿ/ಹೆಚ್​ಡಿ ದೇವೇಗೌಡ

Karnataka Polls 2023: ಅಧಿಕಾರಕ್ಕೆ ಬಂದಾಗ ಏನು ಮಾಡಬೇಕೆಂದು ಒಂದು ಕಮಿಟಿ ಮಾಡಿ ಅದರ ಮೂಲಕ ಕಾರ್ಯಕ್ರಮ ಗಳನ್ನು ಜಾರಿ ಮಾಡಲಿದ್ದಾರೆ ಎಂದು ಹೆಚ್ ಡಿ ದೇವೇಗೌಡರು ಹೇಳಿದರು.

  • News18 Kannada
  • 3-MIN READ
  • Last Updated :
  • Karnataka, India
  • Share this:

ಬೆಂಗಳೂರು: ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ (Former PM HD Deve Gowda), ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (Former CM HD Kumaraswamy) ಅವರು ಪ್ರಣಾಳಿಕೆ ರೂಪದ ಭರವಸೆಯ ಪತ್ರ ಬಿಡುಗಡೆ ಮಾಡಿದ್ದಾರೆ. ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ನೀಡುವ ಸವಲತ್ತುಗಳ ಬಗ್ಗೆ ಜೆಡಿಎಸ್ (JDS) ಭರವಸೆ ನೀಡಿದೆ. ಪಂಚರತ್ನ, ಸಾಲಮನ್ನಾ, ಮಹಿಳೆಯರಿಗೆ ನೀಡಲಾಗುವ ಸವಲತ್ತು, ಆಟೋ ಡ್ರೈವರ್ ಗಳಿಗೆ ನೀಡಲಾಗುವ ಮಾಸಿಕ ಧನ ಸಹಾಯ ಸೇರಿದಂತೆ ಹಲವು ಭರವಸೆಗಳನ್ನು ಅನಾವರಣಗೊಳಿಸಲಾಗಿದೆ. ಕುಮಾರಸ್ವಾಮಿ ಪ್ರಣಾಳಿಕೆ ಬಿಡುಗಡೆ  ಮಾಡುತ್ತಾರೆ.


ಈಗ ನಾನು ಹನ್ನೆರಡು ಭರವಸೆಗಳನ್ನು ಬಿಡುಗಡೆ ಮಾಡ್ತೀನಿ. ಅಧಿಕಾರಕ್ಕೆ ಬಂದಾಗ ಏನು ಮಾಡಬೇಕೆಂದು ಒಂದು ಕಮಿಟಿ ಮಾಡಿ ಅದರ ಮೂಲಕ ಕಾರ್ಯಕ್ರಮ ಗಳನ್ನು ಜಾರಿ ಮಾಡಲಿದ್ದಾರೆ ಎಂದು ಹೆಚ್ ಡಿ ದೇವೇಗೌಡರು ಹೇಳಿದರು.


ಜೆಡಿಎಸ್ 12 ಭರವಸೆಗಳು


* ಕನ್ನಡವೇ ಮೊದಲು


* ಶಿಕ್ಷಣವೇ ಅಧುನಿಕ ಶಕ್ತಿ


* ಧಾರ್ಮಿಕ ಅಲ್ಪ ಸಂಖ್ಯಾತರ ಪ್ರಗತಿ


* ಹಿರಿಯ ನಾಗರೀಕರ ಸನ್ಮಾನ


* ರೈತ ಚೈತನ್ಯ


* ವಿಕಲ ಚೇತನರಿಗೆ ಆಸರೆ


* ಆರಕ್ಷಕರಿಗೆ ಅಭಯ


* ಮಹಿಳಾ ಸಬಲೀಕರಣ


* ಪರಿಶಿಷ್ಟ ಜಾತಿ, ಪಂಗಡಗಳ ಏಳಿಗೆ


* ಆರೋಗ್ಯ ಸಂಪತ್ತು


* ಯುವಜನ ಸಬಲೀಕರಣ


* ವೃತ್ತಿ ನಿರತ ವಕೀಲರ ಅಭ್ಯುದಯ




ನಾನು ಆಕ್ಸಿಡೆಂಟಲ್ ಪಿಎಂ ಅಲ್ಲ


ನಮ್ಮ ಶಾಸಕರನ್ನು,ರಾಜ್ಯಧ್ಯಕ್ಷ ಇಬ್ರಾಹಿಂ ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕುಮಾರಸ್ವಾಮಿ ಹೋಗ್ತಾರೆ. ಬಾಕಿ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡ್ತಾರೆ ಇದು ಭರವಸೆಯಷ್ಟೆ,ಪ್ರಣಾಳಿಕೆಯಲ್ಲ. ಹೆಣ್ಣು ಮಕ್ಕಳಿಗೆ ನಾನು ಮೀಸಲಾತಿ ನೀಡಿದ್ದೆ, ಮೋದಿಯವರಿಗೆ ಪತ್ರ ಕೂಡ ಬರೆದಿದ್ದೇನೆ. ಹೆಣ್ಣು ಮಕ್ಕಳ ಮೊದಲ ಬಾರಿಗೆ ಮೀಸಲಾತಿ ನೀಡಿದ್ದು ನಾನು ಎಂದು ದೇವೇಗೌಡರು ಹೇಳಿದರು.


ಇದನ್ನೂ ಓದಿ:  Leaders Profile: ಬಂಟ್ವಾಳದ ಹುಲಿ, ಕಾಂಗ್ರೆಸ್‌ನ ಹಿರಿಯ ನಾಯಕ ಬೆಳ್ಳಿಪ್ಪಾಡಿ ರಮಾನಾಥ ರೈ ರಾಜಕೀಯ ಏಳುಬೀಳುಗಳ ಪರಿಚಯ ಹೀಗಿದೆ


ನಾನು ಆಕ್ಸಿಡೆಂಟಲ್ ಪಿಎಂ ಅಲ್ಲ. 13 ಕ್ಕೂ ಹೆಚ್ಚು ಪಕ್ಷಗಳು ಬೆಂಬಲ ಕೊಟ್ಟು ನಾನು ಪ್ರಧಾನಿಯಾಗಿದ್ದೆ. ಮನಮೋಹನ್ ಸಿಂಗ್ ಆಕ್ಸಿಡೆಂಟಲ್ ಪಿಎಂ ಅಂತ ಪುಸ್ತಕ ಬರೆದಿದ್ದಾರೆ. ನಾನು ಆ ರೀತಿ ಅಲ್ಲ. ನಾನು ಜನರಿಂದಲೇ ಆಯ್ಕೆಯಾದವನು ಎಂದರು.

top videos
    First published: