HD Devegowda: ಮಗನನ್ನ ಸಿಎಂ ಮಾಡಲು ದೈವದ ಮೊರೆ ಹೋದ ಮಾಜಿ ಪ್ರಧಾನಿ

ಎಚ್‌.ಡಿ. ದೇವೇಗೌಡ (ಸಂಗ್ರಹ ಚಿತ್ರ)

ಎಚ್‌.ಡಿ. ದೇವೇಗೌಡ (ಸಂಗ್ರಹ ಚಿತ್ರ)

HD Kumaraswamy: 2018ರ ಚುನಾವಣೆಯಲ್ಲಿ ಹೆಚ್​ಡಿಡಿ ಕುಟುಂಬ 9 ಅಮವಾಸ್ಯೆ ಪೂಜೆ ನೆರವೇರಿಸಿತ್ತು.

  • News18 Kannada
  • 5-MIN READ
  • Last Updated :
  • Karnataka, India
  • Share this:

ಮಂಡ್ಯ: ಪುತ್ರ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy) ಅವರನ್ನು ಸಿಎಂ ಮಾಡಲು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು (Former PM HD Devegowda) ದೈವದ ಮೊರೆ ಹೋಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಬಳಿಕ ಇಂದು ದೇವೇಗೌಡರು ಕಾಲಭೈರವನಿಗೆ ಅಮವಾಸ್ಯೆಯ ಪೂಜೆ ಸಲ್ಲಿಸಲಿದ್ದಾರೆ. ಕಳೆದ ತಿಂಗಳ ಅಮವಾಸ್ಯೆಯಿಂದ ಡಿಕೆ ಶಿವಕುಮಾರ್ ಮಂಡ್ಯದ ನಾಗಮಂಗಲದ (Nagamangala) ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ (Adichunchanagiri) ಅಮವಾಸ್ಯೆ ಪೂಜೆ ನಡೆದಿತ್ತು. ಮೂರು ಎಳ್ಳು ಅಮವಾಸ್ಯೆ ಕಾಲಭೈರವನಿಗೆ ಪೂಜೆಸಿದ್ರೆ ಇಷ್ಟಾರ್ಥ ನೆರವೇರುವ ಪ್ರತೀತಿ ಇದೆ.


ಕಳೆದ ಬಾರಿ ಅಂದ್ರೆ 2018ರ ಚುನಾವಣೆಯಲ್ಲಿ ಹೆಚ್​ಡಿಡಿ ಕುಟುಂಬ 9 ಅಮವಾಸ್ಯೆ ಪೂಜೆ ನೆರವೇರಿಸಿತ್ತು. ಇಂದು ಬೆಳಗ್ಗೆ 7 ಗಂಟೆಯಿಂದ ಶ್ರೀ ಮಠದ ನಿರ್ಮಲಾನಂದನಾಥ ಸ್ವಾಮಿ ನೇತೃತ್ವದಲ್ಲಿ ವಿಶೇಷ ಪೂಜೆ ಆರಂಭಗೊಂಡಿದೆ.


ಹಾಸನ ಜಿಲ್ಲೆಯಲ್ಲಿಂದು ಜೆಡಿಎಸ್‌ ಶಕ್ತಿ ಪ್ರದರ್ಶನ


ಇಂದು ಹಾಸನ (Hassan) ಜಿಲ್ಲೆಗೆ ದೇವೇಗೌಡರು, ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಹಾಸನದಲ್ಲಿ ಎರಡನೇ ಬಾರಿ ನಾಮಪತ್ರ ಸಲ್ಲಿಸಲಿರುವ ಹೆಚ್.ಪಿ.ಸ್ವರೂಪ್ ಗೆ (HP Swaroop) ಹೆಚ್​​ಡಿಡಿ ಕುಟುಂಬ ಸಾಥ್ ನೀಡಲಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಜಿಲ್ಲಾ ಕ್ರೀಡಾಂಗಣದಿಂದ ಎನ್.ಆರ್.ವೃತ್ತದವರೆಗೂ ಸ್ವರೂಪ್ ಬೃಹತ್ ರೋಡ್​ ಶೋ ನಡೆಸಲಿದ್ದಾರೆ.




ಇದನ್ನೂ ಓದಿ:  Belur Gopalkrishna: ಮಂತ್ರಿ ಕನಸು ಕಾಣುತ್ತಿರುವ ಅಭ್ಯರ್ಥಿಯ 'ಕೈ' ಹಿಡಿತಾರಾ ಸಾಗರದ ಜನತೆ?

top videos


    ನಂತರ ಅರಸೀಕೆರೆ ತೆರಳಲಿರುವ ದಳಪತಿಗಳು ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ್ (NR Santosh) ನಾಮಪತ್ರ ಸಲ್ಲಿಕೆ ಹಾಗೂ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ಹಾಸನದಲ್ಲಿ ಪ್ರೀತಂಗೌಡ (Preetham Gowda) ಹಾಗೂ ಅರಸೀಕೆರೆಯಲ್ಲಿ ಕೆ.ಎಂ.ಶಿವಲಿಂಗೇಗೌಡ (KM Shivalinge gowda) ವಿರುದ್ಧ ರಣಕಹಳೆ ಮೊಳಗಿಸಲಿದ್ದಾರೆ.

    First published: