• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಪೋಸ್ಟ್​ಕಾರ್ಡ್​ ಸಂಪಾದಕ ಮಹೇಶ್​ ವಿಕ್ರಂ ಹೆಗ್ಡೆಗೆ ದೇಶಪ್ರೇಮದ ಪಾಠ: 'ವಂದೇ ಮಾತರಂ' ಹೇಳುವಂತೆ ಯುವತಿಯರ ಸವಾಲು

ಪೋಸ್ಟ್​ಕಾರ್ಡ್​ ಸಂಪಾದಕ ಮಹೇಶ್​ ವಿಕ್ರಂ ಹೆಗ್ಡೆಗೆ ದೇಶಪ್ರೇಮದ ಪಾಠ: 'ವಂದೇ ಮಾತರಂ' ಹೇಳುವಂತೆ ಯುವತಿಯರ ಸವಾಲು

ಪೋಸ್ಟ್​ ಕಾರ್ಡ್​ ಸಂಸ್ಥಾಪಕ ಮಹೇಶ್​ ವಿಕ್ರಮ್ ಹೆಗಡೆ.

ಪೋಸ್ಟ್​ ಕಾರ್ಡ್​ ಸಂಸ್ಥಾಪಕ ಮಹೇಶ್​ ವಿಕ್ರಮ್ ಹೆಗಡೆ.

ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಹಿಂದಿನ ಮೈತ್ರಿ ಸರ್ಕಾರ 2019 ಏಪ್ರಿಲ್ 24 ರಂದು ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ಬಂಧಿಸಿತ್ತು ಎಂಬುದು ಗಮನಾರ್ಹ.

  • Share this:

ಮಂಗಳೂರು (ಜನವರಿ 31): ಪೋಸ್ಟ್ ಕಾರ್ಡ್ ಎಂಬ ಡಿಜಿಟಲ್ ಮಾಧ್ಯಮದ ಮೂಲಕ ದೇಶಪ್ರೇಮವನ್ನು ಹರಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಪೋಸ್ಟ್ ಕಾರ್ಡ್ ಖ್ಯಾತಿಯ ಮಹೇಶ್ ವಿಕ್ರಂ ಹೆಗಡೆ, ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರ ಎದುರು ‘ವಂದೇ ಮಾತರಂ’ ಹೇಳದೆ ಮೌನಕ್ಕೆ ಶರಣಾಗಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.


ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಹಿಂದಿನ ಮೈತ್ರಿ ಸರ್ಕಾರ 2019 ಏಪ್ರಿಲ್ 24 ರಂದು ಮಹೇಶ್ ವಿಕ್ರಮ್ ಹೆಗಡೆ ಅವರನ್ನು ಬಂಧಿಸಿತ್ತು ಎಂಬುದು ಗಮನಾರ್ಹ. ಇಂತಿಪ್ಪ ಮಹೇಶ್ ವಿಕ್ರಮ್ ಇಂದು ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಲು ವಿಮಾನ ನಿಲ್ದಾಣ ತಲುಪಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿನಿಯರು ಅವರನ್ನು ಸುತ್ತುವರೆದಿದ್ದಾರೆ.


ಅಲ್ಲದೆ, ಪೋಸ್ಟ್ ಕಾರ್ಡ್ ಮೂಲಕ ಎಲ್ಲರಿಗೂ ದೇಶಪ್ರೇಮದ ಪಾಠ ಮಾಡುವ ನೀವು ದಯವಿಟ್ಟು ನಮ್ಮ ಜೊತೆ “ವಂದೇ ಮಾತರಂ” ಎಂಬ ಘೋಷವಾಕ್ಯ ಮೊಳಗಿಸಿ ಎಂದು ಕೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ಮಹೇಶ್ ವಿಕ್ರಂ ಕೊನೆಯವರೆಗೂ ಒಂದೇ ಮಾತರಂ ಹೇಳದೆ ಮೌನಕ್ಕೆ ಶರಣಾಗಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿದೆ.



ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳುವ ಮೂಲಕ ಮಹೇಶ್ ವಿಕ್ರಮ್ ವಿರುದ್ಧ ಕಿಡಿಕಾರಿರುವ ಝೈನಾಬ್ ಸಿಖಂದರ್ ಎಂಬುವರು, “ಸಮಾಜದಲ್ಲಿ ದ್ವೇಷವನ್ನು ಹರಡುವ ಕುಖ್ಯಾತ ಮಹೇಶ್ ವಿಕ್ರಮ್ ಹೆಗಡೆ ಬಳಿ ವಂದೇ ಮಾತರಂ ಹಾಡುವಂತೆ ಕೇಳಿಕೊಳ್ಳಲಾಗಿದೆ. ಅವರು ಇತರರಿಗೆ ಮಾಡುವುದನ್ನೇ ಇದೀಗ ಅವರಿಗೂ ಮಾಡಲಾಗಿದೆ. ಇದು ಸಹ ಸತ್ಯಾಗ್ರಹದ ಹೊಸ ಮಾದರಿ” ಎಂದು ಅಭಿಪ್ರಾಯಪಟ್ಟಿದ್ದಾರೆ.


ಸಿಎಎ ವಿರೋಧಿ ಹೋರಾಟಗಾರ್ತಿ ಅಮೂಲ್ಯ ಲಿಯೋನಾ ಸಹ ಈ ವಿಡಿಯೋವನ್ನು ತಮ್ಮ ಖಾಸಗಿ ಖಾತೆಯಲ್ಲಿ ಹಂಚಿಕೊಂಡಿದ್ದು, “ಹಿಂದೂ ಹಾಗೂ ಮುಸಲ್ಮಾನರು ಒಂದಾದರೆ ನಾಜಿ ಕಾರ್ಯಕರ್ತರು ಏನು ಮಾಡುತ್ತಾರೆ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ : ಸಿಎಎ ವಿರೋಧಿ ಹೋರಾಟ ದೇಶದ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುತ್ತಿದೆ; ಮಾಜಿ ಸ್ಪೀಕರ್ ರಮೇಶ್ ಕುಮಾರ್​

Published by:MAshok Kumar
First published: