ಚಿತ್ರದುರ್ಗ(ಏ.05): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎರಡು ಮೂರು ತಿಂಗಳಿಂದ ಚಿತ್ರದುರ್ಗ ರಾಜಕಾರಣಿ, ಮಾಜಿ ಸಚಿವ ಅಂತ ಹೆಸರು ಬರುತ್ತಿತ್ತು. ಆ ರೀತಿ ಭಯ ಇದ್ದರೆ ನಾನು ಕೋರ್ಟ್ ನಲ್ಲಿ ಇಂಜೆಕ್ಷನ್ ಆರ್ಡರ್ ತರುತ್ತಿದ್ದೆ. ಮಾಜಿ ಸಚಿವ ಆಗಿದ್ದೇನೆ, ನನಗೆ ಸಾವಿರಾರು ಫೋನ್ ಗಳು ಬರುತ್ತವೆ. ಹಾಗೆ ನಾನು ಮಾತನಾಡಿರಬಹುದು, ಇಲ್ಲ ಎಂದು ಹೇಳುವುದಿಲ್ಲ. ಆದರೆ ಯಾರು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ, ಯಾವುದೇ ಹಣದ ವ್ಯವಹಾರ ಇಲ್ಲ, ಇದು ಸತ್ಯಕ್ಕೆ ದೂರವಾಗಿದ್ದು, ಯಾವುದೂ ಅತೀರೇಕಕ್ಕೆ ಹೋಗಬಾರದು ಎಂದು ಚಳ್ಳಕೆರೆಯಲ್ಲಿ ಮಾಜಿ ಸಚಿವ, ಹಿರಿಯೂರು ಮಾಜಿ ಶಾಸಕ, ಡಿ ಸುಧಾಕರ್ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಜೊತೆ ನನಗೆ ಯಾವುದೇ ಹಣದ ವ್ಯವಹಾರ ಇಲ್ಲ, ಯಾವುದೇ ಹಣವನ್ನು ನಾನು ಯಾರಿಗೂ ಕೊಟ್ಟಿಲ್ಲ. ಈ ವಿಚಾರವಾಗಿ ಎಸ್ಐಟಿ ನನಗೆ ಯಾವುದೇ ಕರೆಯನ್ನ ಮಾಡಿಲ್ಲ, ಈ ಕೇಸ್ ಗೂ ನನಗೂ ಸಂಬಂಧವಿಲ್ಲ ಎಂದಿರುವ ಡಿ.ಸುಧಾಕರ್, ಈ ವಿಚಾರದಲ್ಲಿ ತಪ್ಪು ಸಂದೇಶ ಹೋಗಬಾರದು ಎಂದು ಹೇಳಿದ್ದಾರೆ.
Sam Bahadur: ಸ್ಯಾಮ್ ಬಹದ್ದೂರ್ ಟೈಟಲ್ ಫೈನಲ್; ಭಾರತದ ಪ್ರಥಮ ಫೀಲ್ಡ್ ಮಾರ್ಷಲ್ ಬಯೋಪಿಕ್
ಇನ್ನೂ ಈ ಪ್ರಕರಣದಲ್ಲಿ 2-3 ತಿಂಗಳಿಂದ ಚಿತ್ರದುರ್ಗ ರಾಜಕಾರಣಿ ಮಾಜಿ ಸಚಿವ ಅಂತ ಹೆಸರು ಕೇಳಿ ಬರುತ್ತಿತ್ತು. ಆ ರೀತಿ ಭಯ ನನಗೆ ಇದ್ದಿದ್ದರೆ ನಾನು ಕೋರ್ಟ್ ನಲ್ಲಿ ಇಂಜೆಕ್ಷನ್ ಆರ್ಡರ್ ತರುತ್ತಿದ್ದೆ. ಆ ರೀತಿ ಇಲ್ಲ, ಮಾಜಿ ಸಚಿವ ಆಗಿದ್ದೇನೆ. ಸಾವಿರಾರು ಜನರ ಫೋನ್ ಗಳು ಬರುತ್ತವೆ, ಹಾಗೆ ನಾನು ಮಾತನಾಡಿರಬಹುದು ಇಲ್ಲ ಎಂದು ಹೇಳುವುದಿಲ್ಲ.ಯಾರು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ, ಯಾವುದೇ ಹಣದ ವ್ಯವಹಾರ ಇಲ್ಲ, ಇದು ಸತ್ಯಕ್ಕೆ ದೂರವಾಗಿದ್ದು, ಯಾವುದೂ ಅತೀರೇಕಕ್ಕೆ ಹೋಗಬಾರದು ಎಂದು ಹೇಳಿದ್ದಾರೆ.
ಅಲ್ಲದೇ ಈ ವಿಚಾರವಾಗಿ ಎಸ್ಐಟಿ ಬಗ್ಗೆ ಹೇಳುತ್ತಾ ಹೋದರೆ ಕಾನ್ಪೇಟ್ ಆಗುತ್ತದೆ. ಎಸ್ಐಟಿ ವಿಚಾರಣೆಗೆ ಕರೆದರೆ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ. ಆಗಸ್ಟ್ ನಲ್ಲಿ ಯುವತಿಯ ಸಂಪರ್ಕ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಈಗ ಎಂಟು ತಿಂಗಳಾಗಿದೆ. ನೂರಾರು ಫೋನ್ ಬರುತ್ತದೆ. ಇದು ನನಗೆ ಸಂಬಂಧವಿಲ್ಲದ ವಿಚಾರ,ಒಂದು ರೂಪಾಯಿ ಕೂಡಾ ನಾನು ಹಾಕಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ