ಕಾರವಾರ (ಮೇ 12): ಮನುಷ್ಯರಷ್ಟೆ ಅಲ್ಲ ಪ್ರಾಣಿಗಳು (Animals) ಸಹ ಪ್ರಾಣ ಹೋಗುವ ಮಟ್ಟಕ್ಕೆ ಒಡೆದಾಡಿವೆ. ಕಾರವಾರದಲ್ಲಿ ಕಾಡಾನೆಗಳು (Elephants) ಗುದ್ದಾಡಿದ್ದು, ಅವುಗಳಲ್ಲಿ ಒಂದು ಆನೆಯ ಕೊಂಬಿನ ಇರಿತಕ್ಕೆ ಗಂಭೀರ ಗಾಯಗೊಂಡ ಮತ್ತೊಂದು ಆನೆ ಮೃತಪಟ್ಟ (Elephant Death) ಘಟನೆ ದಾಂಡೇಲಿ (Dandeli) ತಾಲೂಕಿನ ಕುಳಗಿ ವಲಯ ಅರಣ್ಯ ವ್ಯಾಪ್ತಿಯ ಕೇಗದಾಳ ಅರಣ್ಯದಲ್ಲಿ ನಡೆದಿದೆ. ಇಲ್ಲಿಯ ಅರಣ್ಯದಲ್ಲಿದ್ದ 2 ಗಂಡಾನೆಗಳು ತಮ್ಮ ತಮ್ಮೊಳಗೆ ಕಾದಾಟ ನಡೆಸಿವೆ.
ಗಂಭೀರವಾಗಿ ಗಾಯಗೊಂಡ ಆನೆ ಸಾವು
ಈ ಸಂದರ್ಭದಲ್ಲಿ ಒಂದು ಆನೆ ತನ್ನ ದಂತದಿಂದ ಎದುರಾಳಿ ಆನೆಯ ಹೊಟ್ಟೆ, ಸೊಂಡಿಲು, ಕೊರಳಿನ ಭಾಗದಲ್ಲಿ ಬಲವಾಗಿ ತಿವಿದಿದೆ. ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಈ ಆನೆ ಅದೇ ಅರಣ್ಯಕ್ಕೆ ಹೊಂದಿಕೊಂಡಿರುವ ಬೊಮ್ಮನಳ್ಳಿ ಹತ್ತಿರದ ಹಳ್ಳದಲ್ಲಿ ಬಿದ್ದಿತ್ತು. ವಿಷಯ ತಿಳಿದ ಅರಣ್ಯ ಇಲಾಖೆಯವರು ತಕ್ಷಣ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮರುದಿನ ಆನೆ ಕೊನೆಯುಸಿರೆಳೆದಿದೆ.
ಮೃತ ಆನೆಯ ಶವ ಸಂಸ್ಕಾರ
ಜೋಯಿಡಾ ತಾಲ್ಲೂಕಿನ ಪಶು ವೈದ್ಯಾಧಿಕಾರಿ ಪ್ರದೀಪ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಮೃತ ಆನೆಯ ಶವ ಸಂಸ್ಕಾರ ನೆರವೇರಿಸಲಾಗಿದೆ. ಈ ಸಂದರ್ಭದಲ್ಲಿ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡಕರ, ನಗೆಯ ವಲಯಾರಣ್ಯಧಿಕಾರಿ ಅಭಿಷೇಕ್ ನಾಯ್ಕ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Viral Story: ಅಬ್ದುಲ್ ಗಫರ್ ಗೋಪ್ರೇಮ, ಗೋವುಗಳ ದಾಹ ತಣಿಸುತ್ತಿರುವ ಗಫರ್!
ಕಾಂಪೌಂಡ್ ಮೇಲೆ ಕುಳಿತಿದ್ದ ನಾಯಿ ಹೊತ್ತೊಯ್ದ ಚಿರತೆ
ಹಾಸನ (ಮೇ 12): ಮನೆಯ ಕಾಂಪೌಂಡ್ನಲ್ಲಿದ್ದ ನಾಯಿಯನ್ನು ಚಿರತೆ ಹೊತ್ತಯ್ದಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿರತೆ ಕಾಂಪೌಂಡ್ ಮೇಲೆ ಕುಳಿತು ಹೊಂಚು ಹಾಕಿ ನಾಯಿ ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವೇಗೌಡ ಎಂಬುವವರ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ, ಹಗಲಿನಲ್ಲಿ ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಳ್ತಿದೆ. ಕುರಿ, ಮೇಕೆ, ನಾಯಿಗಳನ್ನು ಚಿರತೆಗಳು ಹೊತ್ತೊಯುತ್ತಿವೆ. ಚಿರತೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಚಿರತೆ ಕಂಡು ಹೆದರಿದ ಗ್ರಾಮಸ್ಥರು ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಗ್ರಾಮಕ್ಕೆ ನುಗ್ಗಿದ ಕಾಡಾನೆ ಜೊತೆ ಮರಿಯಾನೆ
ಹಾಸನ: ಮರಿಯಾನೆ ಜೊತೆ ಕಾಡಾನೆ ಗ್ರಾಮಕ್ಕೆ ನುಗ್ಗಿರುವಂತಹ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ನಡೆದಿದೆ. ರಾತ್ರಿ 9 ಗಂಟೆ ಸುಮಾರಿಗೆ ಗ್ರಾಮಕ್ಕೆ ಕಾಡಾನೆ ನುಗ್ಗಿದ್ದು, ಸಕಲೇಶಪುರ, ಆಲೂರು ತಾಲೂಕಿನಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಹಗಲು ರಾತ್ರಿ ಎನ್ನದೆ ಗ್ರಾಮಕ್ಕೆ ಗಜಪಡೆ ನುಗ್ಗುತ್ತಿವೆ. ಕಾಡಾನೆ ಹಾವಳಿ ನಿಯಂತ್ರಿಸದ ಅರಣ್ಯ ಸಿಬ್ಬಂದಿ ಶಾಶ್ವತ ಪರಿಹಾರ ಕಲ್ಪಿಸದ ಸರ್ಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Story: ಅಬ್ದುಲ್ ಗಫರ್ ಗೋಪ್ರೇಮ, ಗೋವುಗಳ ದಾಹ ತಣಿಸುತ್ತಿರುವ ಗಫರ್!
ತಾಯಿ ಸಾವಿಗೆ ಕಾರಣರಾದವರ ಮೇಲೆ ಸೇಡಿಗಾಗಿ ಹವಣಿಸುತ್ತಿರುವ ನಾಯಿ!
ಕಳೆದ ಒಂದು ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಸೈರನ್ ಹಾಕಿ ಬಂದ ಆ್ಯಂಬ್ಯುಲೆನ್ಸ್ ಒಂದು ಹಾಲುಣಿಸುತ್ತಿದ್ದ ನಾಯಿಗೆ ಡಿಕ್ಕಿ ಹೊಡೆದು ಸಾಯಿಸಿತ್ತು. ಅಪಘಾತದಲ್ಲಿ ತಾಯಿ ನಾಯಿ ಸಾವು ಕಂಡಿದ್ದ ಮರಿ ನಾಯಿ ಬದುಕುಳಿದಿತ್ತು. ಮರಿನಾಯಿ ದೊಡ್ಡದಾಗುತ್ತ ಬರುತ್ತಿದ್ದಂತೆ ಮರಿ ಶ್ವಾನ ವಿಐಪಿ ಲೇನ್ ಮೂಲಕ ಸೈರನ್ ಹಾಕಿ ಬರುವ ಆಂಬ್ಯುಲೇನ್ಸ್ ಮತ್ತು ಪೋಲಿಸ್ ವಾಹನವನ್ನ ತಡೆಹಿಡಿದು ನಿಲ್ಲಿಸುವದ್ರ ಜತೆಗೆ ಅಟ್ಟಾಡಿಸಿ ಕೊಂಡು ಹೋಗಿ ತನ್ನ ತಾಯಿಯ ಸಾವಿಗೆ ಕಾರಣರಾದವರ ಮೇಲೆ ಸೇಡಿಗಾಗಿ ಹವಣಿಸುತ್ತಿದೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ