• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sharan Pumpwell: ಫಾಜಿಲ್‌ ಹತ್ಯೆ ಬಗ್ಗೆ ಶರಣ್‌ ಪಂಪ್‌ವೆಲ್‌ಗೆ ಗೊತ್ತಿದೆ, ಅವರನ್ನು ವಿಚಾರಣೆ ಮಾಡಿ! ಪೊಲೀಸರಿಗೆ ಮೃತನ ತಂದೆ ದೂರು

Sharan Pumpwell: ಫಾಜಿಲ್‌ ಹತ್ಯೆ ಬಗ್ಗೆ ಶರಣ್‌ ಪಂಪ್‌ವೆಲ್‌ಗೆ ಗೊತ್ತಿದೆ, ಅವರನ್ನು ವಿಚಾರಣೆ ಮಾಡಿ! ಪೊಲೀಸರಿಗೆ ಮೃತನ ತಂದೆ ದೂರು

ಶರಣ್ ಪಂಪ್​ವೆಲ್ ವಿರುದ್ಧ ಫಾಜಿಲ್ ತಂದೆ ದೂರು

ಶರಣ್ ಪಂಪ್​ವೆಲ್ ವಿರುದ್ಧ ಫಾಜಿಲ್ ತಂದೆ ದೂರು

"ಪ್ರವೀಣ್​ ನೆಟ್ಟಾರು ಹತ್ಯೆಗೆ ಪ್ರತೀಕವಾಗಿ ಸಾರ್ವಜನಿಕವಾಗಿ ಫಾಜಿಲ್​ನನ್ನು ಹತ್ಯೆ ಮಾಡಲಾಗಿದೆ ಎಂದು ಪಂಪ್​ವೆಲ್​ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ಆಧರಿಸಿ ಪೊಲೀಸರು ಸುಮೋಟೋ ಕೇಸ್​ ದಾಖಲಿಸಬಹುದಿತ್ತು. ಆದರೆ ಪೊಲೀಸರಿಗೂ ಒತ್ತಡ ಇರಬಹುದು. ಹಾಗಾಗಿ ನಾನೇ ದೂರು ನೀಡುತ್ತಿದ್ದೇನೆ. ಶರಣ್‌ ಪಂಪ್‌ವೆಲ್‌ನನ್ನು ಗಡಿಪಾರು ಮಾಡಿ" ಅಂತ ಮೃತ ಫಾಜಿಲ್‌ನ ತಂದೆ ಆಗ್ರಹಿಸಿದ್ದಾರೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Mangalore, India
  • Share this:

ಮಂಗಳೂರು: ಪ್ರವೀಣ್​ ನೆಟ್ಟಾರು (Praveen Nettaru) ಹತ್ಯೆ ಪ್ರತಿಕಾರವಾಗಿ ಸುರತ್ಕಲ್​ನಲ್ಲಿ ಫಾಜಿಲ್ ಹತ್ಯೆ (Fazil) ನಡೆಸಲಾಗಿದೆ ಎಂದು ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್​ನ ( Vishwa Hindu Parishad) ಮುಖಂಡ ಶರಣ್​ ಪಂಪ್​ವೆಲ್ (Sharan Pumpwell)​ ವಿರುದ್ಧ ಫಾಜಿಲ್ ತಂದೆ ಉಮರ್ ಫಾರೂಕ್​ ದೂರು ನೀಡಿದ್ದಾರೆ. ಸೋಮವಾರ ನಗರ ಪೊಲೀಸ್​ ಕಮಿಷನರ್​ ಎನ್​. ಶಶಿಕುಮಾರ್​ ಅವರನ್ನು ಭೇಟಿಯಾಗಿ ಪಂಪ್​ವೆಲ್​ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಪಂಪ್​ವೆಲ್ ತುಮಕೂರಿನಲ್ಲಿ ಭಾನುವಾರ ಫಾಜಿಲ್​ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಂದರೆ ಅವರಿಗೆ ನನ್ನ ಮಗನ ಹತ್ಯೆಯ ವಿಚಾರವಾಗಿ ಹೆಚ್ಚಿನ ಮಾಹಿತಿಯಿದೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಎಂದು ಒತ್ತಾಯಿಸಿದ್ದಾರೆ.


ಪಂಪ್‌ವೆಲ್‌​ಗೆ ತಾಕತ್​ ಇದ್ರೆ ನನ್ನ ಜೊತೆ ಕಾದಾಡಲಿ


ಶರಣ್ ಪಂಪ್​ವೆಲ್ ನನ್ನ ಮಗ ಫಾಜಿಲ್​ ಹತ್ಯೆಯನ್ನು ಸಂಭ್ರಮಿಸಿದ್ದಾನೆ. ಎಂಟು ಮಂದಿ ಸೇರಿ ಒಬ್ಬ ಹುಡುಗನನ್ನು ಹೊಡೆದಿದ್ದಾರೆ. ಅದು ಶೌರ್ಯವಲ್ಲ, ಹೇಡಿತನ. ಶರಣ್ ಪಂಪ್‌ವೆಲ್ ತಾಕತ್ತಿದ್ದರೆ ನನ್ನ ಜೊತೆ ಒಬ್ಬನೇ ಕಾದಾಡಲಿ. ನಾನು ನೋಡಿಕೊಳ್ಳುತ್ತೇನೆ ಎಂದು ಫಾಜಿಲ್ ತಂದೆ ಉಮರ್ ಫಾರೂಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹಿಂದೂ ಬೇರೆ, ಹಿಂದುತ್ವ ಬೇರೆ


ಶರಣ್​ ಹಿಂದೂ, ಹಿಂದುತ್ವದ ಬಗ್ಗೆ ಮಾತನಾಡುತ್ತಾನೆ. ಹಿಂದೂನೆ ಬೇರೆ, ಹಿಂದುತ್ವವೇ ಬೇರೆ. ಹಿಂದುತ್ವದಲ್ಲಿ ಇರುವವರು ಹಣ ತೆಗೆದುಕೊಂಡು ಕೃತ್ಯಗಳನ್ನು ಎಸಗುತ್ತಾರೆ. ಫಾಜಿಲ್​ ಹತ್ಯೆಯ ರೂವಾರಿ ಶರಣ್​ ಪಂಪ್​ವೆಲ್​ ಎನ್ನುವುದು ಅವರು ತುಮಕೂರಿನಲ್ಲಿ ಮಾಡಿರುವ ಭಾಷಣದಿಂದ ತಿಳಿದುಬಂದಿದೆ. ಈ ಬಗ್ಗೆ ಎಡಿಜಿಪಿಗೂ ಮನವಿ ಮಾಡಿದ್ದೇನೆ ಎಂದರು.


ಇದನ್ನೂ ಓದಿ: Sharan Pumpwell: 'ನೀವು ಒಬ್ಬರನ್ನು ಕೊಂದ್ರೆ, ನಾವು ಮೂವರನ್ನು ಕೊಲ್ಲುತ್ತೇವೆ'! ಜಿಹಾದ್ ವಿರೋಧಿಸೋ ಭರದಲ್ಲಿ VHP ನಾಯಕನ ವಿವಾದಾತ್ಮಕ ಹೇಳಿಕೆ

 ಪೊಲೀಸರಿಗೆ ಒತ್ತಡ ಇರಬಹುದು


ಪ್ರವೀಣ್​ ನೆಟ್ಟಾರು ಹತ್ಯೆಗೆ ಪ್ರತೀಕವಾಗಿ ಸಾರ್ವಜನಿಕವಾಗಿ ಫಾಜಿಲ್​ನನ್ನು ಹತ್ಯೆ ಮಾಡಲಾಗಿದೆ ಎಂದು ಪಂಪ್​ವೆಲ್​ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ಆಧರಿಸಿ ಪೊಲೀಸರು ಸುಮೋಟೋ ಕೇಸ್​ ದಾಖಲಿಸಬಹುದಿತ್ತು. ಆದರೆ ಪೊಲೀಸರಿಗೂ ಒತ್ತಡ ಇರಬಹುದು. ಹಾಗಾಗಿ ನಾನೇ ದೂರು ನೀಡುತ್ತಿದ್ದೇನೆ. ಸುರತ್ಕಲ್​ ಠಾಣೆಯಲ್ಲಿ ದೂರು ನೀಡುವಂತೆ ಕಮಿಷನರ್ ಹೇಳಿದ್ದಾರೆ ಎಂದು ಉಮರ್​ ಫಾರೂಕ್ ನ್ಯೂಸ್​ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.




ಖಾದರ್​ ಆಕ್ರೋಶ


ಚುನಾವಣೆಗೋಸ್ಕರ, ಮಾಧ್ಯಮದಲ್ಲಿ ಬಿಲ್ಡಪ್ ಸಿಗುತ್ತದೆ ಅಂತ ಪಂಪ್​ವೆಲ್ ಅಂತಹವರರೂ ಈ ರೀತಿ​ ಹೇಳಿಕೆ ಕೊಡುತ್ತಾರೆ. ಕೊಲೆಗೆ ನಾವೇ ಪ್ರೇರಣೆ ಎಂದು ಹೇಳಿವವರು ಸಮಾಜಕ್ಕೆ ಅಪಾಯಕಾರಿ. ಇಂತಹವರು ನಮ್ಮ ನಡುವೆ ಇರುವಂತಹ ನಿಜವಾದ ದೇಶದ್ರೋಹಿಗಳು.  ಹಿಂದೂ ಆಗಲಿ, ಮುಸ್ಲಿಂ ಆಗಲಿ ಏಕೆ ಕೊಲೆಯಾಗಬೇಕು. ಪ್ರಾಣ ಕಳೆದುಕೊಂಡವರ ಕುಟುಂಬದ ಅಕ್ಕ, ತಂಗಿಯರ ನೋವು ಇವರಿಗೆ ಅರ್ಥ ಆಗುತ್ತದೆಯೇ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಗಡಿಪಾರು ಮಾಡಬೇಕು


ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುವವರು ಸಮಾಜಕ್ಕೂ ಭಾರ, ಜಿಲ್ಲೆಗೂ ಭಾರ, ಇವರನ್ನು ಗಡಿಪಾರು ಮಾಡಬೇಕು. ಇವರ ಹೇಳಿಕೆಯಿಂದ ಜನರಲ್ಲಿ ಭಯ ಶುರುವಾಗಿದೆ. ಫಾಜಿಲ್ ಕೊಲೆ ಪ್ರಕರಣ ಸಂಪೂರ್ಣ ಮರು ತನಿಖೆಯಾಗಬೇಕು. ಉಳ್ಳಾಲದಲ್ಲಿ ಜನ ಸೌಹಾರ್ದ ಇದ್ದಾರೆ, ಕೋಮುವಾದಿ ಶಕ್ತಿಗಳಿಗೆ ಜನ ಅವಕಾಶ ಕೊಡಲ್ಲ . ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಲ್ಲಾ ಕೊಲೆಗಳ ಬಗ್ಗೆಯೂ ತನಿಖೆ ಮಾಡಿಸ್ತೀವಿ ಎಂದು ಯುಟಿ ಖಾದರ್​ ಹೇಳಿದ್ದಾರೆ.


sharan pumpwell controversial statement on surathkal fazil case
ಶರಣ್ ಪಂಪ್​ವೆಲ್


ಪಂಪ್​ವೆಲ್ ಹೇಳಿಕೆಗೆ ಖಂಡನೆ


ಪ್ರತೀಕಾರಕ್ಕಾಗಿ ಫಾಜಿಲ್ ಹತ್ಯೆ ಮಾಡಲಾಗಿದೆ ಎಂದು ಹೇಳಿಕೆ ನೀಡಿರುವ ಶರಣ್​ ಪಂಪ್​ವೆಲ್​ ವಿರುದ್ಧ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಹೇಮನಾಥ್ ಶೆಟ್ಟಿ , ವಿಶ್ವ ಹಿಂದೂ ಪರಿಷತ್ತಿನ ನಾಯಕ ಶರಣ್ ಪಂಪ್ವೆಲ್ ಫಾಜಿಲ್ ಕೊಲೆಯನ್ನು ಪ್ರತೀಕಾರದ ಕೊಲೆ ಎಂದು ಹೇಳಿರುವುದರಿಂದ ಜಿಲ್ಲೆಯ ಜನರ ಮನಸ್ಸಿನಲ್ಲಿ ಆತಂಕ ಮನೆ ಮಾಡಿದೆ. ಹಿಂದೂ ಸಂಘಟನೆ ಎನ್ನುವುದು ಕಾನೂನು ಕೈಗೆತ್ತಿಕೊಂಡು ಅನ್ಯ ಧರ್ಮೀಯರನ್ನು ಕೊಲೆಗೈದು ಪ್ರತೀಕಾರ ತೀರಿಸಿಕೊಳ್ಳಿ ಎಂದು ಸರಕಾರ ನಿರ್ದೇಶಿಸಿದೆಯೇ? ಎಂದು ಪ್ರಶ್ನಿಸಿದ್ದಾರೆ.


ಡಿವೈಎಫ್​ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನೀರ್​ ಕಟ್ಟಿಪಾಳ್ಯ ಅವರು ಪಂಪ್​ವೆಲ್ ಭಾಷಣ ದುಷ್ಟತನದ ಪರಮಾವಧಿ ಎಂದು ಕಿಡಿ ಕಾರಿದ್ದಾರೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಪಂಪ್​ವೆಲ್​ರನ್ನು ಬಂಧಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.

Published by:Rajesha B
First published: