ಬೆಂಗಳೂರು (ಜ. 20): ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣೆ ಬೆನ್ನಿಗೆ ದಿವಂಗತ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ಜ. 27ಕ್ಕೆ ಬಿಡುಗಡೆಯಾಗಲಿದ್ದಾರೆ ಎಂಬ ಸುದ್ದಿ ಸಹ ತಮಿಳುನಾಡಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿತ್ತು. ಅಲ್ಲದೆ, ಚುನಾವಣಾ ರಂಗು ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇತ್ತು. ಇನ್ನೇನು ಚಿನ್ನಮ್ಮ ಶಶಿಕಲಾ ಬಿಡುಗಡೆಗೆ ದಿನಗಣನೆ ಇರುವ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಎರಡ್ಮೂರು ದಿನದಿಂದ ಶಶಿಕಲಾಗೆ ಸ್ವಲ್ಪ ಉಸಿರಾಟ ಹಾಗೂ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಮಂಗಳವಾರ ಮಧ್ಯಾಹ್ನದಿಂದ ಶಶಿಕಲಾರಿಗೆ ಹೆಚ್ಚಾದ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ. ಕೂಡಲೇ ಬ್ಯಾರಕ್ ನಿಂದ ಜೈಲಿನ ಆಸ್ಪತ್ರೆ ವಾರ್ಡ್ ಗೆ ಅಧಿಕಾರಿಗಳು ಸ್ಥಳಾಂತರಿಸಿ, ಜೈಲಿನ ವೈದ್ಯರಿಂದಲೇ ಚಿಕಿತ್ಸೆ ಕೊಡಿಸಲಾಗಿದೆ. ಉಸಿರಾಟದ ಸಮಸ್ಯೆ ಕಂಟ್ರೋಲ್ ಗೆ ಬರದ ಹಿನ್ನಲೆ ತಡರಾತ್ರಿ ಬೌರಿಂಗ್ ಆಸ್ಪತ್ರೆಯ ಐಸಿಯುಗೆ ಶಿಪ್ಟ್ ಮಾಡಲಾಗಿದೆ. ಅಲ್ಲದೆ, ಉಸಿರಾಟ ಸಮಸ್ಯೆ ಹಿನ್ನಲೆ ವೈದ್ಯರು ಆಕ್ಸಿಜನ್ ಪೂರೈಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೆ, ಶಶಿಕಲಾ ಅವರ ಜ್ವರ ಮತ್ತು ಕಫದ ಸಮಸ್ಯೆ ಅಲ್ಪ ಸುಧಾರಣೆಯಾಗಿದ್ದು, ಬಿಪಿ ಶುಗರ್ ನಾರ್ಮಲ್ ರಿಪೋರ್ಟ್ ಬಂದಿದೆ. ಆಂಟಿಜೆನ್ ಟೆಸ್ಟ್ ನೆಗಿಟಿವ್ ಬಂದಿದ್ದು, ಗಂಟಲು ದ್ರವ ಪರೀಕ್ಷೆ ವರದಿ ಇಂದು ಬರಲಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗುತ್ತಿದ್ದು, ಯಾರೂ ಭಯಕ್ಕೊಳಗಾಗುವ ಅಗತ್ಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ನಡುವೆ ಶಶಿಕಲಾರನ್ನ ಭೇಟಿಯಾಗಲು ನೆನ್ನೆ ತಡರಾತ್ರಿ ತಮಿಳುನಾಡಿನಿಂದ ಕುಟುಂಬಸ್ಥರು ಬಂದಿದ್ದು ಯಾರಿಗೂ ಭೇಟಿಯಾಗುವ ಅವಕಾಶವನ್ನು ಪೊಲೀಸರು ನೀಡಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಬೌರಿಂಗ್ ಆಸ್ಪತ್ರೆ ಬಳಿ ಬಿಗಿ ಪೊಲೀಸ್ ಭದ್ರತೆಯನ್ನೂ ನಿಯೋಜಿಸಲಾಗಿದೆ.
ನೆನ್ನೆ ರಾತ್ರಿಯಿಂದ ಶಶಿಕಲಾರಿಗೆ ಜ್ವರ ಮತ್ತು ಕೆಮ್ಮು ಹೆಚ್ಚಾಗಿದ್ದು ಬೆಳಗ್ಗೆ ಎಕ್ಸ್ ರೇ ಮಾಡಲಾಗಿತ್ತು. ವರದಿಯಲ್ಲಿ ಕಫ ಜಾಸ್ತಿಯಾಗಿರುವ ಬಗ್ಗೆ ತಿಳಿಸಲಾಗಿದೆ. ಮೊದಲೇ ಅರಿಗೆ ಬಿಪಿ, ಶುಗರ್ ಇರುವ ಹಿನ್ನಲೆ ಮುಂಜಾಗ್ರತೆ ವಹಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಶಶಿಕಲಾ ಜೈಲಿನಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ಜೈಲಾಧಿಕಾರಿಗಳ ಮನವಿ ಹಿನ್ನಲೆ ಬೌರಿಂಗ್ ಆಸ್ಪತ್ರೆಗೆ ಹೋಗಲು ಒಪ್ಪಿದರು. ಇನ್ನೆರಡು ದಿನ ಬೌರಿಂಗ್ ಆಸ್ಪತ್ರೆಯಲ್ಲಿಯೇ ಅವರು ಚಿಕಿತ್ಸೆ ಪಡೆಯಲಿದ್ದಾರೆ.
ಇದನ್ನೂ ಓದಿ: Union Budget 2021: ಈ ಬಾರಿಯ ಕೇಂದ್ರ ಬಜೆಟ್ನ ನಿರೀಕ್ಷೆಗಳಿವು
ಜ. 27ರಂದು ಜೈಲಿನಿಂದ ಬಿಡುಗಡೆಯಾಗಲಿರುವ ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರದಿಂದ ತಮಿಳುನಾಡಿವರೆಗೂ ಅದ್ದೂರಿ ಮೆರವಣಿಗೆಗೆ ಸಿದ್ದತೆ ನಡೆಸಲಾಗಿದೆ. ಶಶಿಕಲಾ ಬಿಡುಗಡೆ ದಿನ ಜೈಲಿನ ಬಳಿ ಒಂದು ಲಕ್ಷ ಮಂದಿ ಜಮಾವಣೆ ನಿರೀಕ್ಷೆ ಇದೆ. ಐದು ಸಾವಿರಕ್ಕೂ ಹೆಚ್ಚು ವಾಹನಗಳು ತಮಿಳುನಾಡಿನಿಂದ ಪರಪ್ಪನ ಅಗ್ರಹಾರ ಜೈಲಿನ ಬಳಿ ಬರುವ ಸಾಧ್ಯತೆ ಇದೆ. ಈ ಮೂಲಕ ರಾಜಕೀಯ ಬೆಳವಣಿಗೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈ ಮೂಲಕ ಶಶಿಕಾ ಶಕ್ತಿ ಪ್ರದರ್ಶಿಸುವ ಪ್ರಯತ್ನ ನಡೆಸಲಾಗಿದೆ.
1997 ರಲ್ಲಿ ಬೆಳಕಿಗೆ ಬಂದ ಜಯಲಲಿತಾ ಅಕ್ರಮ ಹಣ ಸಂಪಾದನೆ ಪ್ರಕರಣದಲ್ಲಿ ಎರಡು ಬಾರಿ ಶಶಿಕಲಾ ಬಂಧನಕ್ಕೆ ಒಳಗಾಗಿದ್ದಾರೆ. 1997ರಲ್ಲಿ ಮೊದಲ ಬಾರಿ ಇವರನ್ನು ಬಂಧಿಸಲಾಗಿತ್ತು. ಇದಾದ ನಂತರ ಪುನಃ 2014 ರಲ್ಲಿ ಮತ್ತೆಬಂಧಿಸಿ ಕೊನೆಗೆ ಕೇಸ್ ಟ್ರಯಲ್ ನಡೆದು ಕೋರ್ಟ್ ಶಿಕ್ಷೆಯನ್ನು ಘೋಷಿಸಿತ್ತು. ಬಳಿಕ ಕೋರ್ಟ್ ಶಶಿಕಲಾಗೆ 4 ವರ್ಷ ಜೈಲು 10 ಕೋಟಿ ದಂಡ ವಿಧಿಸಿತ್ತು. ಈಗ ನಾಲ್ಕು ವರ್ಷ ಶಿಕ್ಷೆ ಪೂರೈಸಿರುವ ಅವರು ಜ. 27ರಂದು ಬಿಡುಗಡೆಯಾಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ