• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಜ್ವರ ಅಂತ ಆಸ್ಪತ್ರೆ ಸೇರಿದ್ದ 25 ವರ್ಷದ ಯುವಕ ಏಕಾಏಕಿ ಸಾವು; ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ್ನಾ ಅಮಾಯಕ?

Bengaluru: ಜ್ವರ ಅಂತ ಆಸ್ಪತ್ರೆ ಸೇರಿದ್ದ 25 ವರ್ಷದ ಯುವಕ ಏಕಾಏಕಿ ಸಾವು; ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ್ನಾ ಅಮಾಯಕ?

ಮೃತ ಯುವಕ ವಿಜೇತ್

ಮೃತ ಯುವಕ ವಿಜೇತ್

ತಮ್ಮ ಮಗನ ಸಾವಿಗೆ ಆಸ್ಪತ್ರೆಯ ವೈದ್ಯರೇ ಕಾರಣ ಎಂದು ಮೃತ ಯುವಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕ ಇಂಜೆಕ್ಷನ್ ಇಂದ ಈಗ ಎಲ್ಲಾ ಯಡವಟ್ಟು ಆಗಿದೆ. ಇನ್ಮುಂದೆ ಯಾರಿಗೂ ಈ ತರಹ ಪರಿಸ್ಥಿತಿ ಬರಬಾರದು ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಜ್ವರ (Fever) ಬಂದಿತ್ತು ಅಂತ ಆಸ್ಪತ್ರೆಗೆ ಆಡ್ಮಿಟ್ ಆದ ಯುವಕ (Youth) ಮಸಣ ಸೇರಿರುವ ಘಟನೆ ಬೆಂಗಳೂರಿನ (Bengaluru) ರಾಮಮೂರ್ತಿ ನಗರದಲ್ಲಿ (Ramamurthy Nagar ) ನಡೆದಿದೆ. ಮೃತ ಯುವಕನನ್ನು 25 ವರ್ಷದ ವಿಜೇತ್​​ ಎಂದು ಗುರುತಿಸಲಾಗಿದೆ. ಈ ನಡುವೆ ಯುವಕ ಸಾವಿಗೆ ಆಸ್ಪತ್ರೆಯ (Hospital) ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಜ್ವರ ಬಂದಿದ್ದ ಕಾರಣ ವಿಜೇತ್ ಕ್ಲಿನಿಕ್​​ಗೆ ತೆರಳಿ ಇಂಜೆಕ್ಷನ್​ ಪಡೆದುಕೊಂಡಿದ್ದ, ಆದರೆ ಇಂಜೆಕ್ಷನ್​ (Injection) ಪಡೆದ ಬಳಿಕ ವಿಜೇತ್​ಗೆ ಸೆಪ್ಟಿಕ್​ ಆಗಿತ್ತಂತೆ. ಈ ಹಿನ್ನೆಲೆಯಲ್ಲಿ ಆತನ ರಾಮಮೂರ್ತಿ ನಗರದ ಕೋಶಿಸ್​​ ಆಸ್ಪತ್ರೆಗೆ ದಾಖಲಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.


ಈ ವೇಳೆ ವೈದ್ಯರು (Doctor) ಜ್ವರ ಅಂತ ಹೋದ ಯುವಕನಿಗೆ ಸರ್ಜರಿ ಆಗಬೇಕು ಅಂತ ಸಲಹೆ ನೀಡಿದ್ದರಂತೆ. ಸರ್ಜರಿ ವೇಳೆ ತೀವ್ರ ರಕ್ತಸ್ರಾವ (Bleeding) ಹೆಚ್ಚಾಗಿತ್ತಂತೆ. ಈ ವೇಳೆ ರಕ್ತ ತರುವಂತೆ ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದರು. ಆದರೆ ರಕ್ತ ಹಾಕುವ ವೇಳೆ ಯುವಕನಿಗೆ ಕಾರ್ಡಿಯಾ ಅರೆಸ್ಟ್ ಆಗಿ ಯುವಕ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರಂತೆ.


ಇನ್ನು, ತಮ್ಮ ಮಗನ ಸಾವಿಗೆ ಆಸ್ಪತ್ರೆಯ ವೈದ್ಯರೇ ಕಾರಣ ಎಂದು ಮೃತ ಯುವಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕ ಇಂಜೆಕ್ಷನ್ ಇಂದ ಈಗ ಎಲ್ಲಾ ಯಡವಟ್ಟು ಆಗಿದೆ. ಈ ಖಾಸಗಿ ಆಸ್ಪತ್ರೆಯಲ್ಲಿ ಸಾಕಷ್ಟು ಈ ತರಹದ ಕೇಸ್ ನಡೆದಿದೆ. ಇನ್ಮುಂದೆ ಯಾರಿಗೂ ಈ ತರಹ ಪರಿಸ್ಥಿತಿ ಬರಬಾರದು ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.




ಇದನ್ನೂ ಓದಿ: CM Ibrahim: 12 ಜನ ಸಿಡಿಯವರು ಕ್ಯಾಬಿನೆಟ್‌ನಲ್ಲಿದ್ದಾರೆ, ಹೆಚ್‌ಡಿಕೆ ಸಿಎಂ ಆಗ್ತಿದ್ದಂತೆ ವಿಧಾನಸೌಧ ಶುದ್ದಿ ಮಾಡ್ತಾರೆ! ಸಿಎಂ ಇಬ್ರಾಹಿಂ ವ್ಯಂಗ್ಯ


23ರಂದು ಘಟನೆ ನಡೆದಿದ್ದು, ಒಂದು ಕ್ಲಿನಿಕ್ ಅಲ್ಲಿ ಜ್ವರ ಅಂತ ಇಂಜೆಕ್ಷನ್ ತಗೊಂಡಿದ್ದಾನೆ. ಅದಾದ ಮೇಲೆ ಆತನಿಗೆ ಮೈ ತುಂಬಾ ಬೆವರು ಹೆಚ್ಚಾಗಿದೆ. ಆಗ ನೋವು ತಡೆದು ಕೊಳ್ಳಲು ಆಗದೇ ಯುವಕನನ್ನು ಆಸ್ಪತ್ರೆ ದಾಖಲು ಮಾಡಲಾಗಿತ್ತು.


ಮೊದಲು ಮೈನರ್ ಸರ್ಜರಿ ಅಂತ ಆಸ್ಪತ್ರೆಯವರು ದಾಖಲು ಮಾಡಿಕೊಂಡರು. ಆಮೇಲೆ ರಾತ್ರಿ 10:30ರ ಸುಮಾರಿಗೆ ರಕ್ತಸ್ರಾವ ಹೆಚ್ಚಾಗಿದೆ. ಬೆಳಗ್ಗೆ 7:30ರವರೆಗೂ ರಕ್ತಸ್ರಾವ ಆಗಿತ್ತು. ಯೂರಿನ್ ಅಲ್ಲಿಯೂ ಕೂಡ ರಕ್ತಸ್ರಾವ ಆಗಿತ್ತು. ಇದಕ್ಕೆ ಆಸ್ಪತ್ರೆ ವೈದ್ಯರ ನಿರ್ಲಕ್ಷವೇ ಇಷ್ಟಕ್ಕೆಲ್ಲಾ ಕಾರಣ.


ಸದ್ಯ ಯುವಕನ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯಾವ ತಂದೆ ತಾಯಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ಕುಟುಂಬಸ್ಥ ಸುನೀಲ್​ ಹೇಳಿದ್ದಾರೆ.


ಆಸ್ಪತ್ರೆಯಲ್ಲಿ ಯುವಕ ಸಾವು


ಇನ್ನು, ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯುವಕನ ಸಂಬಂಧಿ ರಘು ರಾಮ್, ವಿಜೇತ್ ಇಂಜೆಕ್ಷನ್​ ಪಡೆದುಕೊಂಡ ನಯನಾ ಕ್ಲಿನಿಕ್ ಡಾಕ್ಟರ್ ಫೋನ್ ಸ್ವಿಚ್ ಆಫ್ ಆಗಿದೆ. ಘಟನೆ ನಡೆದ ಎರಡು ದಿನಗಳಿಂದ ಕ್ಲಿನಿಕ್​​ಗೆ ಬೀಗ ಹಾಕಿ ವೈದ್ಯರು ಪರಾರಿಯಾಗಿದ್ದಾರೆ.


ಇದನ್ನೂ ಓದಿ: Zameer Ahmed Khan: ಎಲೆಕ್ಷನ್‌ಗೆ ಕುಕ್ಕರ್, ಸೀರೆ ಆಯ್ತು ಈಗ ವಿದೇಶಿ ಕರೆನ್ಸಿ ಸರದಿ; ಸೌದಿ ರಿಯಾಲ್ಸ್‌ ವಿತರಿಸಿದ ಶಾಸಕ ಜಮೀರ್​ ಅಹ್ಮದ್


ಇತ್ತ‌ ಕೋಶಿಶ್ ಆಸ್ಪತ್ರೆಯಲ್ಲೂ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ. ಈ ಖಾಸಗಿ ಆಸ್ಪತ್ರೆಯಲ್ಲಿ ಇದೇ ಮೊದಲ್ಲ. ಇದೇ ರೀತಿಯಾಗಿ ಅನೇಕ ಬಾರಿ, ಹಲವರ ಪ್ರಾಣ ಹೋಗಿದೆ. ಈ ತರಹದ ಅನೇಕ ಸಲ ಆಗಿ ಹೋಗಿದೆ. ರಕ್ತಸ್ರಾವ ಹೆಚ್ಚಾಗುತ್ತಿದ್ದ ಬಗ್ಗೆ ಕೇಳಿದರೆ ಅದು ವೆಸ್ಟ್ ಬ್ಲೆಡ್​​ ಅಂತ ಹೇಳಿದರು. ಕೊನೆಯ ಕ್ಷಣದಲ್ಲಿ ರಕ್ತ ಬೇಕು ಎಂದು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

Published by:Sumanth SN
First published: