• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress Politics: ಇದೆಲ್ಲಾ ಬೇಡ ಅಂತ ಪಾಟೀಲರಿಗೆ ಹೇಳಿ: ಡಿಕೆ ಸುರೇಶ್ ಎಚ್ಚರಿಕೆ ಸಂದೇಶ

Congress Politics: ಇದೆಲ್ಲಾ ಬೇಡ ಅಂತ ಪಾಟೀಲರಿಗೆ ಹೇಳಿ: ಡಿಕೆ ಸುರೇಶ್ ಎಚ್ಚರಿಕೆ ಸಂದೇಶ

ಎಂಬಿ ಪಾಟೀಲ್ ವರ್ಸಸ್ ಡಿಕೆ ಬ್ರದರ್ಸ್

ಎಂಬಿ ಪಾಟೀಲ್ ವರ್ಸಸ್ ಡಿಕೆ ಬ್ರದರ್ಸ್

DK Brothers: ಈ ರೀತಿಯಾಗಿ ಹೇಳಿಕೆ ನೀಡಿದ್ರೆ ನಾನು ಶಾಸಕನಾಗಿ ಮಾತ್ರ ಮುಂದುವರಿಯುತ್ತೇನೆ ಅಷ್ಟೇ. ಈ ಹೇಳಿಕೆ ಕಾರ್ಯಕರ್ತರು, ಮುಖಂಡರ ಮೇಲೂ ಪರಿಣಾಮ ಬೀರುತ್ತೆ.

  • Share this:

ಬೆಂಗಳೂರು: ಸಿದ್ದರಾಮಯ್ಯ (CM Siddaramaia) ಅವರೇ ಪೂರ್ಣಾವಧಿಗೆ ಸಿಎಂ ಆಗಿರ್ತಾರೆ ಎಂಬ ಸಚಿವ ಎಂಬಿ ಪಾಟೀಲ್ (Minister MB Patil) ಹೇಳಿಕೆ ಕಾಂಗ್ರೆಸ್​​ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಗೆ ಡಿಕೆ ಸೋದರರು (DK Brothers) ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ತೀಕ್ಷ್ಣವಾಗಿ ಮಾತನಾಡಬಲ್ಲೆ. ನಾನು ಸಚಿವರ ಹೇಳಿಕೆಗೆ ಉತ್ತರ ಕೊಡಬಲ್ಲೆ ಎಂಬುದನ್ನು ಎಂ.ಬಿ.ಪಾಟೀಲ್ ಅವರಿಗೆ ಹೇಳಿ ಎಂದು ಸಂಸದ ಡಿಕೆ ಸುರೇಶ್ (MP DK Suresh) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಎಂಬಿ ಪಾಟೀಲ್ ಹೇಳಿಕೆ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ನೀವೇ ರಣ್​ದೀಪ್​ ಸುರ್ಜೇವಾಲ ಹತ್ತಿರ ಮಾತನಾಡಿ. ಎಂಬಿ ಪಾಟೀಲ್​​ಗೆ ಹೇಳಿ ಇದೆಲ್ಲ ಬೇಡ ಎಂದು ನೇರವಾಗಿ ಎಚ್ಚರಿಕೆ ಸಂದೇಶವನ್ನು ರವಾನಿಸಿದರು.


ಡಿಕೆ ಶಿವಕುಮಾರ್ ಕೆಂಡಾಮಂಡಲ


ಮಾಧ್ಯಮಗಳ ಮುಂದೆ ಹೀಗೆಲ್ಲಾ ಬಹಿರಂಗ ಹೇಳಿಕೆ ನೀಡೋದಾದ್ರೆ ಸರ್ಕಾರ ನಡೆಸೋದು ಕಷ್ಟ ಆಗುತ್ತದೆ. ಇದು ಹೀಗೆ ಮುಂದುವರಿದ್ರೆ ನನಗೆ ಸರ್ಕಾರದಲ್ಲಿ ಯಾವ ಹುದ್ದೆಯೂ ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ಗುಡುಗಿದರು.


ಈ ರೀತಿಯಾಗಿ ಹೇಳಿಕೆ ನೀಡಿದ್ರೆ ನಾನು ಶಾಸಕನಾಗಿ ಮಾತ್ರ ಮುಂದುವರಿಯುತ್ತೇನೆ ಅಷ್ಟೇ. ಈ ಹೇಳಿಕೆ ಕಾರ್ಯಕರ್ತರು, ಮುಖಂಡರ ಮೇಲೂ ಪರಿಣಾಮ ಬೀರುತ್ತೆ. ಮುಂದಿನ ಚುನಾವಣೆ ಮೇಲೂ ಇದರ ಪರಿಣಾಮ ಇರುತ್ತೆ ಎಂದು ಡಿಕೆ ಶಿವಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.




ಇದನ್ನೂ ಓದಿ: Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಪುತ್ತಿಲ ನಡೆ? RSSಗೇ ಶಾಕ್ ಕೊಟ್ಟ ಹಿಂದೂ ಮುಖಂಡ


ಎಂಬಿ ಪಾಟೀಲ್ ಹೇಳಿದ್ದೇನು?


ರಾಜ್ಯದಲ್ಲಿ ಸಿದ್ದರಾಮಯ್ಯ 5 ವರ್ಷ ಪೂರ್ಣಾವಧಿ ಸಿಎಂ ಆಗಲಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಲೋಕಸಭೆ ಚುನಾವಣೆ ಬಳಿಕ ರಾಜ್ಯದ ಸಿಎಂ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿಎಂ ಬದಲಾವಣೆ  ಬಗ್ಗೆ ಎಐಸಿಸಿ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಎಂಬಿ ಪಾಟೀಲ್ ಹೇಳಿದ್ದರು.

First published: