• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Suresh ಕಾಂಗ್ರೆಸ್ ಹಾಳು ಮಾಡ್ತಿದ್ದಾರೆ; ತಮ್ಮನ ಮುಂದೆ ಡಿಕೆಶಿ ಅಸಹಾಯಕ ಎಂದ ಟಿಕೆಟ್ ವಂಚಿತ

DK Suresh ಕಾಂಗ್ರೆಸ್ ಹಾಳು ಮಾಡ್ತಿದ್ದಾರೆ; ತಮ್ಮನ ಮುಂದೆ ಡಿಕೆಶಿ ಅಸಹಾಯಕ ಎಂದ ಟಿಕೆಟ್ ವಂಚಿತ

ಡಿಕೆ ಸುರೇಶ್​/ ಡಿಕೆ ಶಿವಕುಮಾರ್​

ಡಿಕೆ ಸುರೇಶ್​/ ಡಿಕೆ ಶಿವಕುಮಾರ್​

Mandya Politics: ಇನ್ನೆಷ್ಟು ವರ್ಷ ದುಡಿಯಲು ಸಾಧ್ಯ. ನನ್ನ ಕಾರ್ಯಕರ್ತರು, ಹಿತೈಷಿಗಳ ಜೊತೆ ಮಾತನಾಡಿ ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.

  • Share this:

ಮಂಡ್ಯ: ಸಂಸದ ಡಿಕೆ ಸುರೇಶ್  (MP DK Suresh) ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ತಮ್ಮನ ಮುಂದೆ ಅಸಹಾಯಕರಾಗಿದ್ದಾರೆ ಎಂದು ಮದ್ದೂರು (Maddur) ಟಿಕೆಟ್ ವಂಚಿತ ಗುರುಚರಣ್ (Gurucharan) ಆರೋಪಿಸಿದ್ದಾರೆ. ಮದ್ದೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಗುರುಚರಣ್ ಇಂದು ಜೆಡಿಎಸ್​ನಿಂದ (JDS) ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇಂದು ಬೆಳಗ್ಗೆ ಗುರುಚರಣ್ ನಿವಾಸಕ್ಕೆ ಆಗಮಿಸಿದ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ (Former CM HD Kumaraswamy) ತಿಂಡಿ ಸೇವನೆ ಮಾಡಿದರು.


ಟಿಕೆಟ್ ಸಿಗದ ಹಿನ್ನೆಲೆ ಡಿ.ಕೆ.ಶಿವಕುಮಾರ್ - ಡಿ.ಕೆ.ಸುರೇಶ್ ವಿರುದ್ಧ ಗುರುಚರಣ್ ವಾಗ್ದಾಳಿ ನಡೆಸಿದರು. ಮದ್ದೂರಿನ ಸೋಮನಹಳ್ಳಿ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಗುರುಚರಣ್, ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಟೆರರಿಸ್ಟ್ ಗಳು ಹಣ ತಂದರೆ ಅವರಿಗೂ ಟಿಕೆಟ್ ಸಿಗಲಿದೆ ಎಂದು ಆರೋಪಿಸಿದರು.


ಡಿಕೆ ಶಿವಕುಮಾರ್ ಅಸಹಾಯಕರಾದ್ರಾ?


ಡಿ.ಕೆ.ಸುರೇಶ್ ಕಾಂಗ್ರೆಸ್ ಪಕ್ಷವನ್ನ ಹಾಳು ಮಾಡ್ತಿದ್ದಾರೆ. ಅವರ ಸ್ವಂತ ಮನೆಯ ಆಸ್ತಿ ಮಾಡಿಕೊಂಡಿದ್ದಾರೆ. ತಮ್ಮನ ಮುಂದೆ ಡಿ.ಕೆ.ಶಿವಕುಮಾರ್ ಸಹ ಅಸಹಾಯಕರಾಗಿದ್ದಾರೆ. ಎಸ್.ಎಂ.ಕೃಷ್ಣರಿಗೂ (Former CM SM Krishna) ನಾನು ಸಂಪರ್ಕ ಮಾಡಿದ್ದೇನೆ. ಅವರು ಸಹ ನನ್ನ ಪರವಾಗಿ ಮಾತನಾಡಿದ್ದರು ಎಂದು ತಿಳಿಸಿದರು.




ಇದನ್ನೂ ಓದಿ:  Mangaluru North: ತಪ್ಪಿದ ಕಾಂಗ್ರೆಸ್ ಟಿಕೆಟ್ ಮಿಸ್; ಜೆಡಿಎಸ್​ನತ್ತ ಹೊರಟ ಮೊಯಿದ್ದಿನ್ ಬಾವಾ


ಜೆಡಿಎಸ್​ನಿಂದ ಸ್ಪರ್ಧೆ

top videos


    ಆದರೆ ಎಸ್​​​ಎಂ ಕೃಷ್ಣ ಅವರ ಮಾತಿಗೂ ಕಿವಿಗೊಡಲಿಲ್ಲ, ಇಲ್ಲಿ ಡಿ.ಕೆ.ಶಿವಕುಮಾರ್ ಅಸಹಾಯಕರಾಗಿದ್ದಾರೆ. ನಾನು ಈಗ ಜೆಡಿಎಸ್ ಸೇರಲು ಬಯಸಿದ್ದೇನೆ. ಇನ್ನೆಷ್ಟು ವರ್ಷ ದುಡಿಯಲು ಸಾಧ್ಯ. ನನ್ನ ಕಾರ್ಯಕರ್ತರು, ಹಿತೈಷಿಗಳ ಜೊತೆ ಮಾತನಾಡಿ ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು