ಬೆಂಗಳೂರು (ಅ.12): ಕೋವಿಡ್ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದರಿಂದ ಬಿಎಸ್ ಯಡಿಯೂರಪ್ಪ ಸರ್ಕಾರ ದಿಢೀರ್ ಎಂದು ಸಚಿವರ ಖಾತೆ ಬದಲಾವಣೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿನ ಈ ಮಹತ್ವ ಬದಲಾವಣೆ ಕುರಿತು ಟ್ವೀಟ್ ಮಾಡಿರುವ ಅವರು, ಆರೋಗ್ಯ ಸಚಿವರ ಖಾತೆ ಬದಲಾಯಿಸಿರುವುದು ಅಸಮರ್ಥತೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯ ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ಸರ್ಕಾರ ಈ ಸೋಂಕು ತಡೆಯುವಲ್ಲಿ ವಿಫಲವಾಗಿರುವುದು ಇದಕ್ಕೆ ಸ್ಪಷ್ಟ ನಿದರ್ಶನ. ಇದೇ ಕಾರಣಕ್ಕೆ ಸಂಪುಟ ಸರ್ಜರಿ ನಡೆಸಲಾಗಿದೆ. ಸರ್ಕಾರದ ಈ ಅಸಮರ್ಥತೆಯಿಂದ ಜನರು ಪ್ರಾಣ ಹಾಗೂ ಜೀವ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
The Cabinet Reshuffle done by CM @BSYBJP is proof of this government's miserable failure in handling the COVID Pandemic.
The fact that the Health Minister has been changed adds credence to our charge that this Govt's incompetency has led to massive loss of life and livelihood.
— DK Shivakumar (@DKShivakumar) October 12, 2020
ತಮ್ಮ ಖಾತೆ ಬದಲಾವಣೆಯಿಂದ ಸಚಿವ ಶ್ರೀರಾಮುಲು ಕೂಡ ಮುಜುಗರಕ್ಕೆ ಒಳಗಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಆರೋಗ್ಯ ಇಲಾಖೆ ಕೈ ತಪ್ಪಿದರ ಬಗ್ಗೆ ಇಂದು ಸಂಜೆ ಸಚಿವ ಶ್ರೀರಾಮುಲು ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ವಿವರಣೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನು ಓದಿ: ಜಾತಿ ರಾಜಕಾರಣ ನಡೆಯುವುದಿದ್ದರೆ ದೇವೇಗೌಡ್ರು, ನಿಖಿಲ್ ಯಾಕೆ ಸೋತರು; ಸಿದ್ದರಾಮಯ್ಯ
ರಾಜ್ಯದಲ್ಲಿ ಕೊರೋನಾ ಹೆಚ್ಚಳದ ಬಗ್ಗೆ ಪ್ರಧಾನಿ ಮೋದಿಯವರು ಆತಂಕ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಕೊರೋನಾ ಹೆಚ್ಚಿರುವ ರಾಜ್ಯಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದ ಅವರು, ಸೋಂಕು ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದರು. ಈ ಹಿನ್ನಲೆ ಸಿಎಂ ದಿಢೀರ್ ಎಂದು ಖಾತೆ ಬದಲಾವಣೇ ಮಾಡಿರುವ ಸಂಭವ ಕೂಡ ಇದೆ. ಈ ಬಗ್ಗೆ ಈಗಾಗಲೇ ಬಿಎಸ್ವೈ ಹೈಕಮಾಂಡ್ಗೆ ಸುದ್ದಿ ತಲುಪಿಸಿದ್ದಾರೆ. ಬೆಂಗಳೂರು ಕೊರೋನಾ ನಿರ್ವಹಣೆಯನ್ನು ಸುಧಾಕರ್ ಹಾಗೂ ರಾಜ್ಯದ ಕೊರೋನಾ ನಿರ್ವಹಣೆಯನ್ನು ಶ್ರೀರಾಮುಲು ನಡೆಸುತ್ತಿದ್ದರು. ಈ ಇಬ್ಬರ ನಡುವೆ ಗೊಂದಲ ಆಗಬಾರದು ಎಂಬ ಕಾರಣಕ್ಕೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ಸಿಎಂ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಕೊರೋನಾ ನಿರ್ವಹಣೆ ಸಂದರ್ಭದಲ್ಲಿ ಸುಧಾಕರ್ ಹಾಗೂ ಶ್ರೀರಾಮಲು ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುವ ಮೂಲಕ ಇಬ್ಬರ ನಡುವೆ ಸಮನ್ವಯತೆ ಇಲ್ಲ ಎಂಬುದು ಬಹಿರಂಗವಾಗಿತ್ತು. ಅಲ್ಲದೇ, ಕೊರೋನಾ ಜವಾಬ್ದಾರಿಯನ್ನು ಸುಧಾಕರ್ಗೆವಹಿಸಿದ್ದ ಬಗ್ಗೆ ಶ್ರೀರಾಮುಲು ಅವರು ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ತೇಪೆ ಹಚ್ಚಿದ ಸಚಿವ ಸುಧಾಕರ್, ನಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ. ರಾಮುಲು ಅಣ್ಣನ ರೀತಿ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ