• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Shivakumar: ವೇದಿಕೆ ಮೇಲೆ ಕಿಚಾಯಿಸಿದರೂ ಡಿಕೆ ಬ್ರದರ್ಸ್​​ನ ಹಾಡಿಹೊಗಳಿದ ಸಚಿವ ಸುಧಾಕರ್!

DK Shivakumar: ವೇದಿಕೆ ಮೇಲೆ ಕಿಚಾಯಿಸಿದರೂ ಡಿಕೆ ಬ್ರದರ್ಸ್​​ನ ಹಾಡಿಹೊಗಳಿದ ಸಚಿವ ಸುಧಾಕರ್!

ಡಿಕೆ ಶಿವಕುಮಾರ್, ಸಚಿವ ಸುಧಾಕರ್

ಡಿಕೆ ಶಿವಕುಮಾರ್, ಸಚಿವ ಸುಧಾಕರ್

ನಮ್ಮ ಜಿಲ್ಲೆಗೆ ಬಂದಿದ್ದ ಮೆಡಿಕಲ್ ಕಾಲೇಜನ್ನು ಸಚಿವ ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಕಿತ್ತುಕೊಂಡು ಹೋದರು. ನನಗೊಂದು ಆಸೆ ಇದೆ. ಮುಂದೆ ಅವರನ್ನೇ ಕರೆದು ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಬೇಕು ಅಂದುಕೊಂಡಿದ್ದೇನೆ ಎಂದು ಡಿಕೆ ಸುರೇಶ್​ ಹೇಳಿದ್ದಾರೆ.

  • News18 Kannada
  • 4-MIN READ
  • Last Updated :
  • Ramanagara, India
  • Share this:

ರಾಮನಗರ: ಕನಕಪುರದಲ್ಲಿ (Kanakapura) ಇಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಸುಧಾ ಮೂರ್ತಿ (Sudha Murty) ಅವರ ಸಹಕಾರದೊಂದಿಗೆ ನಿರ್ಮಿಸಲಾಗಿರುವ ಸುಸಜ್ಜಿತ ಹೆರಿಗೆ ಆಸ್ಪತ್ರೆಯನ್ನು ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Dr. K Sudhakar) ಲೋಕಾರ್ಪಣೆ ಮಾಡಿದರು. ಈ ವೇಳೆ ಮಾಜಿ ಸಚಿವ ಡಿಕೆ ಶಿವಕುಮಾರ್ (DK Shivakumar), ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್​ (DK Suresh) ಹಾಜರಿದ್ದರು. ಈ ವೇಳೆ ಕಾರ್ಯಕ್ರಮ ವೇದಿಕೆಯಲ್ಲಿ ಮಾತನಾಡಿದ ಡಿಕೆ ಸಹೋದರರು ಆರೋಗ್ಯ ಸಚಿವ ಸುಧಾಕರ್ ಅವರನ್ನು ಕಿಚಾಯಿಸಿ ಕಾಲೆಳೆದರು. ಆ ಬಳಿಕ ಮಾತನಾಡಿದ ಸುಧಾಕರ್ ಅವರು, ಡಿಕೆ ಸುರೇಶ್​​ ಅವರನ್ನು ಹಾಡಿಹೊಗಳಿದರು.


ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಕಿತ್ತುಕೊಂಡು ಹೋದರು


ಆಸ್ಪತ್ರೆಯ ಉದ್ಘಾಟನೆ ಬಳಿಕ ಮಾತನಾಡಿದ ಸಂಸದ ಡಿಕೆ ಸುರೇಶ್​ ಅವರು, ಸಚಿವ ಸುಧಾಕರ್ ಅವರು ಮೊದಲು ನಮ್ಮ ಜೊತೆಯಲ್ಲೇ ಇದ್ದರು. ಆ ಬಳಿಕ ಕಿತ್ತಾಡಿಕೊಂಡು ಹೋದರು. ನಮ್ಮ ಜಿಲ್ಲೆಗೆ ಬಂದಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಕಿತ್ತುಕೊಂಡು ಹೋದರು. ನನಗೊಂದು ಆಸೆ ಇದೆ. ಮುಂದೆ ಅವರನ್ನೇ ಕರೆದು ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಬೇಕು ಅಂದುಕೊಂಡಿದ್ದೇನೆ.


ಅವರು ಕಿತ್ತುಕೊಂಡು ಹೋಗಿರುವುದನ್ನು ಅವರ ಕೈಯಿಂದಲೇ ಶಂಕುಸ್ಥಾಪನೆ ಮಾಡಿಸಬೇಕು. ಮುಂದುವರೆದು ಅವರದ್ದು ಇದರಲ್ಲಿ ತಪ್ಪಿಲ್ಲ, ಅವರು ಕೂಡ ಜನಪ್ರತಿನಿಧಿ. ಆದರೆ ನಮ್ಮದನ್ನು ಕಿತ್ತುಕೊಂಡು ಹೋದರು ಎನ್ನುವ ಬೇಸರ ಇದೆ ಅಷ್ಟೇ. ಅದಕ್ಕೆ ಮುಂದೆ ಅವರ ಕೈಯಿಂದಲೇ ಶಂಕುಸ್ಥಾಪನೆ ಮಾಡಿಸಬೇಕು ಎಂದು ಕಿಚಾಯಿಸಿದರು.




ಜಿಲ್ಲಾಡಳಿತದ ವಿರುದ್ಧ ಡಿಕೆ ಸುರೇಶ್ ಗರಂ


ಇನ್ನು, ಸುಧಾಮೂರ್ತಿ ಅವರ ಸಹಕಾರದಿಂದ ನಿರ್ಮಾಣ ಮಾಡಿರುವ ಆಸ್ಪತ್ರೆಯ ಉದ್ಘಾಟನೆಗೆ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರನ್ನೇ ಹಾಕಿರಲಿಲ್ಲ. ಇದರಿಂದ ಜಿಲ್ಲಾಡಳಿತ ವಿರುದ್ಧ ಗರಂ ಆದ ಸಂಸದರು, ಸರ್ಕಾರಕ್ಕೆ ಜಿಲ್ಲಾಡಳಿತಕ್ಕೆ ಮಾನ-ಮರ್ಯಾದೆ ಇದೆಯಾ ಎಂದು ಪ್ರಶ್ನೆ ಮಾಡಿದರು. ಆಸ್ಪತ್ರೆ ಕೊಡುಗೆ ನೀಡಿದ ಸುಧಾಮೂರ್ತಿಯವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಲ್ಲ ಯಾಕೆ ಎಂದು ಪ್ರಶ್ನೆ‌ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಕ್ಷಣ ಕಾಲ ತಬ್ಬಿಬ್ಬಾದರು.


ಇಲ್ಲಿ ಯಾರೂ ಕೂಡ ಶಾಶ್ವತ ಅಲ್ಲ


ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಮೆಡಿಕಲ್ ಕಾಲೇಜು ಬಗ್ಗೆ ಮಾತನಾಡಿದರು. ಪಾಪಾ ಸುಧಾಕರ್ ಅವರು ಅವರ ಕ್ಷೇತ್ರದ ಕೆಲಸ ಮಾಡಿದ್ದಾರೆ. ಹಿಂದೆ ರಾಮನಗರಕ್ಕೆ ಮೆಡಿಕಲ್ ಕಾಲೇಜು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿತ್ತು. ಬಳಿಕ ಅವರು ಮಾತು ತಪ್ಪಿದ್ದರು. ಇಲ್ಲಿ ಯಾರೂ ಕೂಡ ಶಾಶ್ವತ ಅಲ್ಲ. ಬಿಎಸ್​​ವೈ, ಬೊಮ್ಮಾಯಿ ಕೂಡ ಶಾಶ್ವತ ಅಲ್ಲ. ನಿಮ್ಮ ಕೈಯಲ್ಲಿ ಪೆನ್ ಆಗಲಿ, ಅಧಿಕಾರಿ ಆಗಲಿ ಹೆಚ್ಚು ದಿನ ಇರಲ್ಲ. ಇನ್ನು 50 ದಿನ ಅಥವಾ 90 ದಿನ ಇರುತ್ತಿರೋ ಗೊತ್ತಿಲ್ಲ ಎಂದು ಕಿಡಿಕಾರಿದರು.


ಸುಧಾಕರ್​ಗೆ ಡಿಕೆ ಶಿವಕುಮಾರ್ ಮನವಿ


ಇವತ್ತು ನಾನು ಆರೋಗ್ಯ ಸಚಿವ ಸುಧಾಕರ್ ಜೊತೆ ವೇದಿಕೆ ಶೇರ್ ಮಾಡಿದ್ದೇನೆ. ಹಿಂದೆ ಬಿಎಸ್​​ವೈ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದೆ. ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡಾಗ 5 ಸಾವಿರ ಜನ ಪೊಲೀಸರು ಇದ್ದರು. ನನ್ನ ಕ್ಷೇತ್ರದಲ್ಲಿ ರಾಜಕಾರಣಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ಅಪರೂಪ. ಇಂದು ಅರೋಗ್ಯ ಸಚಿವರ ಜೊತೆ ವೇದಿಕೆ ಹಂಚಿಕೊಂಡಿದ್ದೇನೆ ಅಂದರೆ ಅದು ನಿಮ್ಮ ಮೇಲಿನ ವಿಶ್ವಾಸ. ದಯವಿಟ್ಟು ಆಸ್ಪತ್ರೆಗೆ ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡಿ ಎಂದು ಮನವಿ ಮಾಡಿದರು.

Published by:Sumanth SN
First published: