ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ: ಆರೋಪಿ ನವೀನ್​ಗೆ ಜಾಮೀನು

ಆರೋಪಿ ನವೀನ್.

ಆರೋಪಿ ನವೀನ್.

ನವೀನ್​ ಹಂಚಿಕೊಂಡಿದ್ದ ವಿವಾದಾತ್ಮಕ ಸಂದೇಶದಿಂದ ನಗರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ಸಿಕ್ಕಿತ್ತು. ಇದರಿಂದ ಎರಡು ಪೊಲೀಸ್​ ಠಾಣೆ, ಶಾಸಕರ ನಿವಾಸಕ್ಕೆ ಬೆಂಕಿ ಹಚ್ಚಲಾಗಿತ್ತು.

  • Share this:

ಬೆಂಗಳೂರು (ಅ.22): ವಿವಾದಾತ್ಮಕ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಡಿಜೆ ಹಳ್ಳಿ ಗಲಭೆಗೆ ಪ್ರೇರಣೆ ನೀಡಿದ್ದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಳಿಯ ನವೀನ್​ಗೆ ರಾಜ್ಯ ಹೈ ಕೋರ್ಟ್​ ಜಾಮೀನು ನೀಡಿದೆ. ಪ್ರವಾದಿ ಮೊಹಮ್ಮದ್​ ವಿರುದ್ಧ ವಿವಾದಾತ್ಮಕ ಪೋಸ್ಟ್​ ಅನ್ನು ಈತ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇದರಿಂದ ಉದ್ರಿಕ್ತರಾದ ಗುಂಪೊಂದು ಪುಲಿಕೇಶಿ ನಗರ ಶಾಸಕರ ಮನೆ ಹಾಗೂ ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್​​ ಠಾಣೆ ಧ್ವಂಸಕ್ಕೆ ಕಾರಣವಾಗಿತ್ತು. ವಾದ-ವಿವಾದ ಆಲಿಸಿದ ನ್ಯಾಯಾಲಯ ಎರಡು ಲಕ್ಷ ಬಾಂಡ್​ ನೊಂದಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಇದೇ ವೇಳೆ ಸಾಕ್ಷ್ಯನಾಶ ಮಾಡದಂತೆ ಹಾಗೂ ವಿವಾದಾತ್ಮಕ ಸಂದೇಶ ಹಂಚಿಕೊಳ್ಳದಂತೆ ಎಚ್ಚರಿಕೆಯನ್ನು ನೀಡಲಾಗಿದೆ.


ನವೀನ್​ ಹಂಚಿಕೊಂಡಿದ್ದ ವಿವಾದಾತ್ಮಕ ಸಂದೇಶದಿಂದ ನಗರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ಸಿಕ್ಕಿತ್ತು. ಇದರಿಂದ ಎರಡು ಪೊಲೀಸ್​ ಠಾಣೆ, ಶಾಸಕರ ನಿವಾಸಕ್ಕೆ ಬೆಂಕಿ ಹಚ್ಚಲಾಗಿತ್ತು. ಅಷ್ಟೇ ಅಲ್ಲದೇ ಪೊಲೀಸರ 57 ವಾಹಗಳನ್ನು ಸುಟ್ಟು ಕರಕಲಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿ ಹಾನಿಯಾಗಿದೆ. ಘಟನೆಯ ಗಂಭೀರ ಅಪರಾಧಕ್ಕೆ ಕಾರಣವಾದ ಈತನಿಗೆ ಜಾಮೀನು ನೀಡಿದರೆ ಸಮಾಜದ ಶಾಂತಿ ಸುವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನಲೆ ಈತನಿಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್​ ವಾದಿಸಿತು.


ಇದಲ್ಲದೇ ನವೀನ್​ ಅವರ ಜೀವನಕ್ಕೆ ಬೆದರಿಕೆ ಇದೆ. ಅಲ್ಲದೇ ಆತನ ವಿರುದ್ಧ ಈಗಾಗಲೇ ಏಳು ಅಪರಾಧ ಪ್ರಕರಣಗಳಿದ್ದು ಆತನ ಜಾಮೀನಿಗೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿತು.


ನವೀನ್​ ವಿರುದ್ಧ ಐಪಿಸಿ ಸೆಕ್ಷನ್​ 153 (ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು), 295ಎ (ಉದ್ದೇಶ ಪೂರ್ವಕವಾಗಿ ಮತ್ತು ದುರುದ್ದೇಶದಿಂದ ಧಾರ್ಮಿಕ ಭಾವನೆ ಕೆರಳಿಸುವುದು) ಅಡಿ ಎಫ್​ಐಆರ್​ ದಾಖಲಾಗಿದೆ.


ಇದನ್ನು ಓದಿ: ಮಂಜಿನ ನಗರಿಯಾದ ಬೆಂಗಳೂರು; ಮೈದುಂಬಿದ ಸ್ಯಾಂಕಿ ಕೆರೆಗೆ ಡಿಸಿಎಂ ಬಾಗಿನ ಅರ್ಪಣೆ


ನವೀನ್​ ವಿರುದ್ಧ ಈ ಹಿಂದೆ ದಾಖಲಾಗಿರುವ ಅಪರಾಧ ಪ್ರಕರಣದಲ್ಲಿ ಆತನನ್ನು ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ಈ ಹಿನ್ನಲೆ ಜಾಮೀನು ನೀಡುತ್ತಿರುವ ಬಗ್ಗೆ ನ್ಯಾಯಾಲಯ ತಿಳಿಸಿದೆ.


ನವೀನ್​ ಪರ ವಾದ ಮಾಡಿದ ವಕೀಲರು, ನವೀನ್​ ಕೇವಲ ಸಂದೇಶವನ್ನು ಪೋಸ್ಟ್​ ಮಾಡಿದ್ದು, ಬಳಿಕ ಅದನ್ನು ತೆಗೆದು ಹಾಕಿದ್ದಾರೆ. ಅವರು ನಿರಾಪರಾಧಿಯಾಗಿದ್ದು, ಅವರ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಇದೊಂದು ರಾಜಕೀಯ ಪ್ರೇರಿತ ಗಲಭೆಯಾಗಿದೆ. ಈ ಪ್ರಕರಣದಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಒಂದೇ ಒಂದು ಕಾರಣಕ್ಕೆ ಜಾಮೀನು ನಿರಾಕರಿಸಬಾರದು ಎಂದರು

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು