• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಂಕಷ್ಟದಲ್ಲಿ ಕರ್ನಾಟಕದ ಡೆಕನ್ ಅರ್ಬನ್ ಬ್ಯಾಂಕ್: ಗ್ರಾಹಕರಿಗೆ ಹಣ ಹಿಂಪಡೆಯಲು ಮಿತಿ ಹಾಕಿದ ಆರ್​ಬಿಐ

ಸಂಕಷ್ಟದಲ್ಲಿ ಕರ್ನಾಟಕದ ಡೆಕನ್ ಅರ್ಬನ್ ಬ್ಯಾಂಕ್: ಗ್ರಾಹಕರಿಗೆ ಹಣ ಹಿಂಪಡೆಯಲು ಮಿತಿ ಹಾಕಿದ ಆರ್​ಬಿಐ

ಭಾರತೀಯ ರಿಸರ್ವ್ ಬ್ಯಾಂಕ್

ಭಾರತೀಯ ರಿಸರ್ವ್ ಬ್ಯಾಂಕ್

ಡೆಕನ್ ಅರ್ಬನ್ ಸಹಕಾರ ಬ್ಯಾಂಕ್​ಗೆ ಆರ್​ಬಿಐ ಆರು ತಿಂಗಳ ಕಾಲ ನಿರ್ಬಂಧ ವಿಧಿಸಿದೆ. ಪೂರ್ವಾನುಮತಿ ಇಲ್ಲದೆ ಹಣಕಾಸು ವಹಿವಾಟು ನಡೆಸದಂತೆ ಸೂಚಿಸಿದೆ. ಆಸ್ತಿ ಮಾರಾಟ, ಹೊಸ ಠೇವಣಿ ಸ್ವೀಕೃತಿ ಇತ್ಯಾದಿ ಮಾಡುವಂತಿಲ್ಲ. ಗ್ರಾಹಕರು ಕೂಡ 1 ಸಾವಿರ ರೂಗಿಂತ ಹೆಚ್ಚು ಹಣ ವಿತ್​ಡ್ರಾ ಮಾಡುವಂತಿಲ್ಲ.

ಮುಂದೆ ಓದಿ ...
  • Share this:

ನವದೆಹಲಿ(ಫೆ. 20): ಕರ್ನಾಟಕ ಮೂಲದ ಡೆಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿ ಸ್ಥಿತಿ ತಲುಪಿರುವ ಹಿನ್ನೆಲೆಯಲ್ಲಿ ಆರ್​ಬಿಐ ಈ ಬ್ಯಾಂಕ್​ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಹಣ ಹಿಂಪಡೆಯಲು ಒಂದು ಸಾವಿರ ರೂ ಮಿತಿ ಹೇರಿದೆ. ನಿನ್ನೆಯೇ ಈ ಆದೇಶ ಜಾರಿಗೆ ಬಂದಿದೆ. ನಿನ್ನೆಯಿಂದ ಪ್ರಾರಂಭವಾಗಿ ಆರು ತಿಂಗಳವರೆಗೆ ಆರ್​ಬಿಐನ ನಿರ್ದೇಶನಗಳು ಚಾಲನೆಯಲ್ಲಿರಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೋಟೀಸ್​ನಲ್ಲಿ ತಿಳಿಸಿದೆ.


ಬ್ಯಾಂಕ್​ನಲ್ಲಿ ಠೇವಣಿ ಹೊಂದಿರುವ ಗ್ರಾಹಕರು ಈ ಆರು ತಿಂಗಳ ಅವಧಿಯಲ್ಲಿ ತಮ್ಮ ಠೇವಣಿ ಮೇಲೆ ಸಾಲಗಳನ್ನ ಪಡೆಯಲು ಅವಕಾಶ ನೀಡಲಾಗಿದೆ. ಅದೂ ಆರ್​ಬಿಐನಿಂದ ಪೂರ್ವಾನುಮತಿ ಪಡೆದುಕೊಂಡು ಈ ಸಾಲ ಪಡೆಯಬಹುದು. ಹಾಗೆಯೇ, ಈ ಆರು ತಿಂಗಳ ನಿರ್ಬಂಧ ಅವಧಿಯಲ್ಲಿ ಡೆಕನ್ ಅರ್ಬನ್ ಸಹಕಾರ ಬ್ಯಾಂಕ್ ಹೊಸ ಠೇವಣಿಗಳನ್ನ ಪಡೆಯುವುದಾಗಲೀ, ಆಸ್ತಿ ಮಾರುವುದಾಗಲೀ ಮಾಡುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ನೀಡಿದ ನಿರ್ದೇಶನಗಳಲ್ಲಿ ಇದೆ.


ಇದನ್ನೂ ಓದಿ: ಚಾಮರಾಜನಗರದಲ್ಲಿ ಹೊರಗುತ್ತಿಗೆ ವಂಚನೆ ಹಗರಣ ಬೆಳಕಿಗೆ


ಆರ್​ಬಿಐನ ಈ ನಿರ್ದೇಶನಗಳನ್ನ ಡೆಕನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್​ನ ಪರವಾನಿಗೆಯ ರದ್ದು ಎಂದು ಪರಿಭಾವಿಸುವ ಅಗತ್ಯ ಇಲ್ಲ ಎಂದು ತಿಳಿಸಲಾಗಿದ್ದು, ಈ ಆರು ತಿಂಗಳಲ್ಲಿ ಅಗತ್ಯ ಬಿದ್ದ ಸಂದರ್ಭದಲ್ಲಿ ನಿರ್ದೇಶನಗಳನ್ನ ಬದಲಾಯಿಸುವ ಸಾಧ್ಯತೆ ಇದೆ ಎಂದೂ ನೋಟೀಸ್​ನಲ್ಲಿ ಹೇಳಲಾಗಿದೆ.

First published: