CoronaVirus: ಕೊರೋನಾ ಎರಡನೇ ಅಲೆ: ಬೆಂಗಳೂರು ಮಂದಿಗೆ ಖಡಕ್ ಎಚ್ಚರಿಕೆ ಕೊಟ್ಟ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಸದ್ಯ ಬೆಂಗಳೂರಿನಲ್ಲಿ ಪ್ರತಿ ದಿನ ಹತ್ರತ್ರ ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದು, ಇದರ ಪ್ರಮಾಣ ಹೀಗೆ ಮುಂದುವರೆಯೋ ಲಕ್ಷಣ ಕಾಣ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೋರಮಂಗಲ, ಹಜ್ ಭವನ ಹಾಗೂ ಆರ್ಟ್ ಆಫ್ ಲೀವಿಂಗ್ ನಲ್ಲಿ ಬೆಡ್ ಗಳನ್ನ ಸಿದ್ಧಪಡಿಸಲಾಗ್ತಿದೆ.
ಬೆಂಗಳೂರು: ಕೊರೋನಾದಿಂದ ಬೆಂಗಳೂರು ಸೇಫಾಯ್ತು ಅಂತ ಅನ್ಕೊಳ್ತಿರ್ಬೇಕಾದ್ರೆ ಮತ್ತೆ ಆತಂಕ ಶುರುವಾಗಿದೆ. ಕರೋನಾ ಎರಡನೇ ಅಲೆಗೆ ಅಪಾರ್ಟ್ ಮೆಂಟ್ ಗಳೇ ಟಾರ್ಗೇಟ್ ಆಗ್ತಿರೋದು ಪಾಲಿಕೆಯ ನಿದ್ದೆಗಡಿಸಿದೆ. ಹೀಗಾಗಿ ಸಿಟಿ ಮಂದಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆಯೊಂದನ್ನು ನೀ ಡಿದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಸೋಂಕು ಕಾಣಿಸುತ್ತಿದ್ದ ಬೆಂಗಳೂರು ಇದೀಗ ಮತ್ತೊಮ್ಮೆ ಅಂಥದ್ದೇ ಸ್ಥಿತಿಗೆ ತಲುಪಿದೆ. ಕಳೆದೊಂದು ವಾರದಿಂದ ದಾಖಲಾಗ್ತಿರೋ ಸೋಂಕಿನ ಪ್ರಮಾಣ ಗಮನಿಸಿದ್ರೆ ಕರೋನಾ ಎರಡನೇ ಅಲೆ ಸೃಷ್ಟಿಯಾಗಿದ್ಯಾ ಅನ್ನೋ ಪ್ರಶ್ನೆ ಮೂಡ್ತಿದೆ. ಅಷ್ಟಕ್ಕೂ ಇಂಥ ಪ್ರಶ್ನೆ ಮೂಡುವಂತೆ ಮಾಡಿರೋ ಅಪಾರ್ಟ್ ಮೆಂಟ್ ಗಳೇ ಈ ಬಾರಿ ಕರೋನಾ ಹಾಟ್ ಸ್ಪಾಟ್ ಆಗ್ತಿವೆಯಂತೆ. ಸ್ವತಃ ಬಿಬಿಎಂಪಿ ಈ ವಿಚಾರವನ್ನ ಒಪ್ಪಿಕೊಂಡಿದೆ.
ಅಪಾರ್ಟ್ಮೆಂಟ್ ಏಕೆ ಹಾಟ್ ಸ್ಪಾಟ್..?
ಒಂದೇ ಕಡೆ ಹೆಚ್ಚಿನ ಜನರು ವಾಸವಿರುವ ಸ್ಥಳ
ಸಮಾರಂಭಗಳನ್ನ ಆಯೋಜಿಸಿದ್ರೆ ಒಂದೆಡೆ ಜನ ಸೇರುವಿಕೆ
ಜಿಮ್, ಪಾರ್ಟಿ ಹಾಲ್ ಗಳ ಪದೇ.. ಪದೇ ಬಳಕೆ
ಇನ್ನು ಅಪಾರ್ಟ್ ಮೆಂಟ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳೋದಕ್ಕೆ ಕೆಲವು ಕಾರಣಗಳಿವೆ. ಒಂದೇ ಕಡೆ ಹೆಚ್ಚಿನ ಜನ್ರು ವಾಸವಿರೋ ಸ್ಥಳ ಅಂದ್ರೆ ಅದು ಅಪಾರ್ಟ್ ಮೆಂಟ್. ಹಾಗೆನೇ ಅಂಥ ಕಡೆಗಳಲ್ಲಿ ಯಾವುದೇ ಒಂದು ಸಭೆ, ಸಮಾರಂಭ ಆಯೋಜನೆ ಮಾಡಿದ್ರೆ ಹೆಚ್ಚೆಚ್ಚು ಜನ್ರು ಒಂದೆಡೆ ಸೇರುವುದು ಸರ್ವೇ ಸಾಮಾನ್ಯ. ಇದರ ಜತೆಗೆ ಅಪಾರ್ಟ್ ಮೆಂಟ್ ಗಳಲ್ಲಿರೋ ಜಿಮ್ ಹಾಗೂ ಪಾರ್ಟಿ ಹಾಲ್ ಗಳನ್ನ ಹೆಚ್ಚೆಚ್ಚು ಬಳಕೆ ಮಾಡ್ತಿರೋದ್ರಿಂದ ಸೋಂಕು ಹೆಚ್ಚಳವಾಗೋಕೆ ಪ್ರಮುಖ ಕಾರಣ.
ಹೀಗಾಗಿ ಅಪಾರ್ಟ್ ಮೆಂಟ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡೋದಕ್ಕೆ ಬ್ರೇಕ್ ಹಾಕೋ ಜತೆಗೆ. ಪಾರ್ಕ್ ಗಳಲ್ಲಿ ಜಿಮ್ ಉಪಕರಣಗಳನ್ನ ಬಳಕೆ ಮಾಡೋದಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಮುಂದಾಗಿದೆ.
ಸದ್ಯ ಬೆಂಗಳೂರಿನಲ್ಲಿ ಪ್ರತಿ ದಿನ ಹತ್ರತ್ರ ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದು, ಇದರ ಪ್ರಮಾಣ ಹೀಗೆ ಮುಂದುವರೆಯೋ ಲಕ್ಷಣ ಕಾಣ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೋರಮಂಗಲ, ಹಜ್ ಭವನ ಹಾಗೂ ಆರ್ಟ್ ಆಫ್ ಲೀವಿಂಗ್ ನಲ್ಲಿ ಬೆಡ್ ಗಳನ್ನ ಸಿದ್ಧಪಡಿಸಲಾಗ್ತಿದೆ. ಸೋಮವಾರದಿಂದ ಕೋವಿಡ್ ಕೇರ್ ಸೆಂಟರ್ ಗಳನ್ನ ಪುನರಾರಂಭ ಮಾಡಲು ಬಿಬಿಎಂಪಿ ಮುಂದಾಗಿದೆ. ಹಾಗೆನೇ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಆಗದಂತೆ ಅಗತ್ಯ ಕ್ರಮ ವಹಿಸಲಾಗಿದೆ ಅಂತಾನೂ ಬಿಬಿಎಂಪಿ ಮಾಹಿತಿ ನೀಡಿದೆ.
ಒಟ್ಟಿನಲ್ಲಿ ಕಳೆದ ವರ್ಷದ ಮಾರ್ಚ್ ನಲ್ಲಿ ಸೂಪರ್ ಸ್ಪ್ರೆಡ್ಡರ್ ಕಂಟಕವಾಗಿದ್ರೆ. ಈ ವರ್ಷ ಅಪಾರ್ಟ್ ಮೆಂಟ್ ಗಳು ಡೇಂಜರ್ ಆಗ್ತಿರೋದು ಆತಂಕದ ವಿಚಾರ. ಶತಾಯ ಗತಾಯ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಕ್ರಮ ವಹಿಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರ್ಬೇಕು ಅಂತಾನೂ ಮನವಿ ಮಾಡಿದೆ.
(ವರದಿ - ಆಶಿಕ್ ಮುಲ್ಕಿ)
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ