ಚಿಕ್ಕೋಡಿ(ಮಾ.30): ಕೊರೋನಾ ಪರಿಣಾಮ ಇಡೀ ದೇಶವೇ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ದೆಹಲಿಯಲ್ಲಿ ಮಹತ್ವದ ಆದೇಶ ನೀಡಿದ್ದು, ರಾಷ್ಟ್ರೀಕೃತ, ಸಹಕಾರಿ ಮತ್ತು ಗ್ರಾಮೀಣ ಬ್ಯಾಂಕುಗಳು ಎಲ್ಲ ಫೈನಾನ್ಸ್ಗಳ ಎಲ್ಲಾ ರೀತಿಯ ಸಾಲಗಳ ಇಎಂಐ ಅನ್ನು ಜೂನ್ವರೆಗೆ ಮುಂದೂಡಿಕೆ ಮಾಡಿದ್ದಾರೆ.
ಡಿಸಿಎಂ ಲಕ್ಷ್ಮಣ್ ಸವದಿ ಅವರ ಸ್ವಕ್ಷೇತ್ರದಲ್ಲಿ ಅಥಣಿಯಲ್ಲಿ ವಿಸ್ತಾರ ಎನ್ನುವ ಖಾಸಗಿ ಫೈನಾನ್ಸ್ ಕಂಪನಿಯ ಸಿಬ್ಬಂದಿ ಆರಬಿಐ ಆದೇಶಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ. ಲಾಕ್ಡೌನ್ ನಡುವೆಯೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ರೈತರ ಮನೆಗೆ ತೆರಳಿದ ಫೈನಾನ್ಸ್ ಸಿಬ್ಬಂದಿ ಸಾಲ ಪಾವತಿಸುವಂತೆ ಆಗ್ರಹಿಸಿದ್ದಾರೆ.
ಸುಟ್ಟಟ್ಟಿ ಗ್ರಾಮದ ರೈತ ಮಾಹವೀರ ವೀರಗೌಡ ಎಂಬವವರಿಗೆ ಸಾಲ ಪಾವತಿಸುವಂತೆ ಆಗ್ರಹಿಸಲಾಗಿದೆ. ಇದಕ್ಕೆ ರೈತ ಮಹಾವೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಸ್ತಾರ ಫೈನಾನ್ಸ್ ಅವರಿಂದ ನಾಲ್ಕು ಲಕ್ಷ ಸಾಲ ಮಾಡಿದ್ದೇನೆ. ಈಗ ಕೊರೋನಾ ವೈರಸ್ ನಿಂದ ಕೆಲಸ ಇಲ್ಲ ಹಾಗೂ ಹೈನುಗಾರಿಕೆಗೆ ನಷ್ಟದಿಂದ ಈ ತಿಂಗಳು ಕಂತು ಕಟ್ಟಕ್ಕೆ ಆಗುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಜನರಿಂದ ಹಣ ಪಾವತಿಸಿಕೊಳ್ಳಬೇಡಿ ಎಂದು ಆರ್ಬಿಐ ನಿರ್ದೇಶನ ನೀಡಿದೆ. ಈ ಬಗ್ಗೆ ಫೈನಾನ್ಸ್ ಸಿಬ್ಬಂದಿಯನ್ನು ಕೇಳಿದರೇ ನಮಗೆ ಇದುವರೆಗೆ ಆರ್ಬಿಐ ನಿಂದ ಹಣ ಮರುಪಾವತಿ ಮುಂದೂಡಿ ಎಂದು ಯಾವುದೇ ನಿರ್ದೇಶನ ಬಂದಿಲ್ಲಾ ಎಂದು ಜಾರಿಕೊಂಡಿದ್ದಾರೆ.
ಇದನ್ನೂ ಓದಿ : ಗೋವಾ ಸರ್ಕಾರದಿಂದ ಕನ್ನಡಿಗರಿಗೆ ಹಳಸಿದ ಅನ್ನ; ನಮ್ಮದು ನಾಯಿ ಪಾಡು ಎಂದ ಕಾರ್ಮಿಕರು
ಅಥಣಿ ತಾಲೂಕಿನ ಕೆಲವು ಫೈನಾನ್ಸ್ಗಳು ವಸೂಲಿಗೆ ಮುಂದಾಗಿವೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಹಣ ಮರುಪಾವತಿ ಸಾಧ್ಯವಿಲ್ಲ ನಮಗೆ ಆತ್ಮಹತ್ಯೆ ಒಂದೇ ದಾರಿ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಒದಗಿಸಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ