• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Assembly Elections: ಒಂದಲ್ಲ, ಎರಡಲ್ಲ 7 ಲಕ್ಷ ರೂಪಾಯಿ ಹಣ ಸೊಂಟಕ್ಕೆ ಕಟ್ಟಿಕೊಂಡ! ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ ಐನಾತಿ?

Assembly Elections: ಒಂದಲ್ಲ, ಎರಡಲ್ಲ 7 ಲಕ್ಷ ರೂಪಾಯಿ ಹಣ ಸೊಂಟಕ್ಕೆ ಕಟ್ಟಿಕೊಂಡ! ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ ಐನಾತಿ?

ಸೊಂಟಕ್ಕೆ ಹಣ ಕೊಟ್ಟಿಕೊಂಡು ಬಂದ ವ್ಯಕ್ತಿ

ಸೊಂಟಕ್ಕೆ ಹಣ ಕೊಟ್ಟಿಕೊಂಡು ಬಂದ ವ್ಯಕ್ತಿ

ಚಿಕ್ಕೋಡಿಯ ಕುಗನೋಳ್ಳಿ ಚೆಕ್ ಪೋಸ್ಟ್ ನಲ್ಲಿ ನಿಪ್ಪಾನಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ತಪಾಸಣೆ ವೇಳೆ ಬರೋಬ್ಬರಿ 1.5 ಕೋಟಿ ರೂಪಾಯಿ ಸೀಜ್ ಮಾಡಿದ್ದಾರೆ.

  • News18 Kannada
  • 5-MIN READ
  • Last Updated :
  • Davanagere (Davangere), India
  • Share this:

ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ಘೋಷಣೆ ಬೆನ್ನಲ್ಲೇ ಮತದಾರರಿಗೆ (Voter) ಆಮಿಷ, ಉಡುಗೊರೆಗಳ (Gift) ಮಹಾಪೂರವೇ ಹರಿದುಬರುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ, ಮತದಾರರನ್ನ ಸೆಳೆಯಲು ಕಸರತ್ತು ಶುರುವಾಗಿದೆ‌. ಉಡುಗೊರೆ ಹಂಚುವುದು, ಆಮಿಷ ತೋರುವ ಪ್ರಕರಣಗಳು ಹೆಚ್ಚಾಗಿದೆ. ಪೊಲೀಸರು (Police) ಇಂತಹ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲೂ ಚೆಕ್​ಪೋಸ್ಟ್​ಗಳನ್ನು (Checkpost) ನಿರ್ಮಿಸಿ ಪೊಲೀಸರು ವಾಹನ ಸವಾರರನ್ನು ಪರಿಶೀಲನೆ ನಡೆಸುತ್ತಿದ್ದು, ಈ ವೇಳೆ ನೀತಿ ಸಂಹಿತೆ (Code of Conduct) ಉಲ್ಲಂಘನೆ ಮಾಡಿ ಯಾವುದೇ ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿದ್ದ ಪ್ರಕರಣಗಳು ವರದಿಯಾಗುತ್ತಿದ್ದು, ಇಂದು ಕೂಡ ಹಣವನ್ನು (Money) ಬೆಲ್ಟ್​ನಂತೆ ಸೊಂಟಕ್ಕೆ ಕಟ್ಟಿಕೊಂಡು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಹಣವನ್ನು ಸೀಜ್ ಮಾಡಿದ್ದಾರೆ. ದಾವಣಗೆರೆಯ ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್​​ಪೋಸ್ಟ್​ನಲ್ಲಿ ನಡೆದಿದೆ.


ನಿನ್ನೆ ತಡರಾತ್ರಿ 12 ಗಂಟೆ ಸರಿಸುಮಾರಿಗೆ ಘಟನೆ ನಡೆದಿದ್ದು, ಬೈಕ್​ನಲ್ಲಿ ಬಂದ ವ್ಯಕ್ತಿಯನ್ನು ಪರಿಶೀಲನೆ ನಡೆಸಿದ ವೇಳೆ 7.5 ಲಕ್ಷ ರೂಪಾಯಿ ಪತ್ತೆಯಾಗಿದೆ. ದಾಖಲೆ ಇಲ್ಲದೆ ಸೊಂಟದ ಸುತ್ತ ಹಣ ಇಟ್ಟುಕೊಂಡು ಹೋಗುತ್ತಿದ್ದ ವ್ಯಕ್ತಿಗಳು ಸೈಫುಲ್ಲಾ, ಮತ್ತು ಕುಮಾರ್ ಶಿಕಾರಿಪುರ ಮೂಲದವರು ಎನ್ನಲಾಗಿದೆ.


ಇದನ್ನೂ ಓದಿ: Mandya News: ಮ್ಯಾಟ್ರಿಮೋನಿಯಲ್ಲಿ ಯುವತಿಗೆ ಗಾಳ, 31 ಲಕ್ಷ ವಂಚಿಸಿದ ಖದೀಮ!


ಹಣ ಪತ್ತೆಯಾದ ಬಳಿಕ ವಿಚಾರಣೆ ವೇಳೆ ಸೈಫುಲ್ಲಾ ಮತ್ತು ಕುಮಾರ್ ಸರಿಯಾದ ಮಾಹಿತಿ ನೀಡಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ದಾವಣಗೆರೆಯಿಂದ ಬಂದ ವ್ಯಕ್ತಿಗಳು ಹೊನ್ನಾಳಿಯಿಂದ ಬಂದಿದ್ದು ಎಂದು ಪೊಲೀಸರ ಎದುರು ಗೊಂದಲ ಹೇಳಿಕೆ ನೀಡಿದ್ದಾರೆ.




ಚಿಕ್ಕೋಡಿಯಲ್ಲಿ 1.5 ಕೋಟಿ ನಗದು ಸೀಜ್​


ಇನ್ನು, ಚಿಕ್ಕೋಡಿಯ ಕುಗನೋಳ್ಳಿ ಚೆಕ್ ಪೋಸ್ಟ್ ನಲ್ಲಿ ನಿಪ್ಪಾಣಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ತಪಾಸಣೆ ವೇಳೆ ಬರೋಬ್ಬರಿ 1.5 ಕೋಟಿ ರೂಪಾಯಿ ಸೀಜ್ ಮಾಡಿದ್ದಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುಗನೋಳ್ಳಿ ಚೆಕ್ ಪೋಸ್ಟ್ ಬಳಿ ಮಹಾರಾಷ್ಟ್ರದ ಮುಂಬೈನಿಂದ ರಾಜ್ಯಕ್ಕೆ ಆಗಮಿಸುತ್ತಿದ್ದ ಬಸ್​​ನಲ್ಲಿ ಹಣ ಪತ್ತೆಯಾಗಿದೆ.


ಯಾವುದೇ ದಾಖಲಾತಿ ಇಲ್ಲದೆ ಕೋಟಿ ಕೋಟಿ ಹಣ ಸಾಗಾಟ ಮಾಡುತ್ತಿದ್ದ ಕಾರಣ ಹಣವನ್ನು ವಶಕ್ಕೆ ಪಡೆದುಕೊಂಡಿರುವ ನಿಪ್ಪಾಣಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

top videos
    First published: