• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress Rebel: ಡಿಕೆಶಿ ಹಾಕಿರುವ ಸಂಧಾನ ಪೋಸ್ಟ್​​ ಸುಳ್ಳು; ಕೆಪಿಸಿಸಿ ಅಧ್ಯಕ್ಷರ ವಿರುದ್ಧ ‘ಕೈ’ ಟಿಕೆಟ್​ ಆಕಾಂಕ್ಷಿ ಡಾ ಯೋಗೇಶ್​ ಬಾಬು ಕಿಡಿ

Congress Rebel: ಡಿಕೆಶಿ ಹಾಕಿರುವ ಸಂಧಾನ ಪೋಸ್ಟ್​​ ಸುಳ್ಳು; ಕೆಪಿಸಿಸಿ ಅಧ್ಯಕ್ಷರ ವಿರುದ್ಧ ‘ಕೈ’ ಟಿಕೆಟ್​ ಆಕಾಂಕ್ಷಿ ಡಾ ಯೋಗೇಶ್​ ಬಾಬು ಕಿಡಿ

ಡಿಕೆ ಶಿವಕುಮಾರ್​/ಡಾ ಯೋಗೇಶ್​ ಬಾಬು

ಡಿಕೆ ಶಿವಕುಮಾರ್​/ಡಾ ಯೋಗೇಶ್​ ಬಾಬು

ಡಿಕೆ ಶಿವಕುಮಾರ್ ಅವರ ಫೇಸ್​​ಬುಕ್​​ ಪೋಸ್ಟ್ ಸುಳ್ಳು, ಬೇರೊಂದು ವಿಚಾರದ ಚರ್ಚೆಗೆ‌ ಡಿಕೆ ಶಿವಕುಮಾರ್​ ಕರೆದಿದ್ದರು ಎಂದು ಬಂಡಾಯ ನಾಯಕ ಡಾ. ಯೋಗೇಶ್​ ಬಾಬು ತಿಳಿಸಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಚಿತ್ರದುರ್ಗ: ಮೊಳಕಾಲ್ಮೂರು (Molakalmuru) ಕ್ಷೇತ್ರದ ಟಿಕೆಟ್ ವಂಚಿತರ ಬಂಡಾಯ ಶಮನ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ (KPCC President) ಡಿಕೆ ಶಿವಕುಮಾರ್ (DK Shivakumar)​ ಇಂದು ಬಂಡಾಯ ನಾಯಕ ಡಾ ಯೋಗೇಶ್​​ ಬಾಬು (Dr. Yogesh Babu) ಅವರೊಂದಿಗೆ ಇರುವ ಫೋಟೋವನ್ನು (Photo) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಡಿಕೆ ಶಿವಕುಮಾರ್​ ಅವರು ಪೋಸ್ಟ್​ ಕುರಿತು ಕೆಂಡಕಾರಿರುವ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ಡಾ ಯೋಗೇಶ್ ಬಾಬು, ಡಿಕೆ ಶಿವಕುಮಾರ್ ಅವರ ಪೋಸ್ಟ್ ಸುಳ್ಳು ಎಂದು ಹೇಳಿದ್ದಾರೆ. ಅಲ್ಲದೆ, ತಾವು ಚುನಾವಣೆಯಲ್ಲಿ (Election) ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.


ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿ ಡಾ. ಯೋಗೇಶ್​ ಬಾಬು


ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರದ ಟಿಕೆಟ್ ಸಿಗದೆ ಡಾ ಯೋಗೇಶ್ ಬಾಬು ನೊಂದಿದ್ದರು. ಈ ವೇಳೆ ಅವರೊಂದಿಗೆ ಇರುವ ಪೋಸ್ಟ್​ ಹಂಚಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷರು ಸಂಧಾನ ಯಶಸ್ವಿ ಎಂದು ತಿಳಿಸಿದ್ದರು.


ಡಿಕೆ ಶಿವಕುಮಾರ್ ಫೇಸ್​ಬುಕ್​ ಪೋಸ್ಟ್​


ಇದನ್ನೂ ಓದಿ: Bhavani Revanna: ಸಿಂ‘ಹಾಸನ’ ಟಿಕೆಟ್ ಕದನಕ್ಕೆ ಇತಿಶ್ರೀ; ಚಾಮರಾಜದತ್ತ ಭವಾನಿ ರೇವಣ್ಣ ಚಿತ್ತ! ಹೇಗಿದೆ ಕ್ಷೇತ್ರ ಲೆಕ್ಕಾಚಾರ?


ಟಿಕೆಟ್​ ಸಿಗದೆ ನೊಂದಿದ್ದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿ ಯೋಗೇಶ್​ ಬಾಬು ಅವರೊಂದಿಗೆ ಇಂದು ಯಶಸ್ವಿ ಸಂಧಾನ ಮಾತುಕತೆ ನಡೆಸಲಾಯಿತು. ಅವರ ರಾಜಕೀಯ ಬೆಳವಣಿಗೆಗೆ ಪಕ್ಷವು ಬೆನ್ನಾಗಿ ನಿಲ್ಲುವುದಾಗಿ ಭರವಸೆ ನೀಡಿ ಅವರನ್ನು ಸಂತೈಸಲಾಯಿತು ಎಂದು ಡಿಕೆ ಶಿವಕುಮಾರ್ ಫೇಸ್​​ಬುಕ್​​​ನಲ್ಲಿ ಬರೆದುಕೊಂಡಿದ್ದರು.


ಈಗ ಸಂಧಾನ ಯಶಸ್ವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ


ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಯೋಗೇಶ್​ ಬಾಬು, ಡಿಕೆ ಶಿವಕುಮಾರ್ ಅವರ ಪೋಸ್ಟ್ ಸುಳ್ಳು, ಬೇರೊಂದು ವಿಚಾರದ ಚರ್ಚೆಗೆ‌ ಎಂದು ಡಿಕೆ ಶಿವಕುಮಾರ್​ ಕರೆದಿದ್ದರು. ಆದರೆ ಈಗ ಸಂಧಾನ ಯಶಸ್ವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.


top videos



    ಗ್ರಾಮ ಪಂಚಾಯತಿವಾರು ಅಭಿಪ್ರಾಯ ಕೇಳುತ್ತಿದ್ದೇನೆ. ಮೊಳಕಾಲ್ಮೂರಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಇದೇ ವೇಳೆ ಯೋಗೇಶ್ ಬಾಬು ತಿಳಿಸಿದ್ದಾರೆ. ಇನ್ನು, ಮಾಜಿ ಶಾಸಕ ಎನ್.ವೈ ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್​ ಪಕ್ಷದ ಟಿಕೆಟ್ ಘೋಷಣೆ ಮಾಡಲಾಗಿತ್ತು. ಗೋಪಾಲಕೃಷ್ಣ ಅವರು ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಕ್ಷೇತ್ರದಲ್ಲಿ ಡಾ.ಯೋಗೇಶ್​ ಬಾಬು ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಕೈ ಟಿಕೆಟ್ ತಪ್ಪಿದ ಹಿನ್ನೆಲೆ ಬಂಡಾಯ ಸಾರಿದ್ದಾರೆ.

    First published: