Karnataka Politics: ಬಿಜೆಪಿ ನಾಯಕರ ವಿರುದ್ಧ ದೂರು ದಾಖಲಿಸಿದ್ಯಾಕೆ ಕಾಂಗ್ರೆಸ್​?

ದೂರು ಸಲ್ಲಿಸಿದ ಕಾಂಗ್ರೆಸ್ ನಿಯೋಗ

ದೂರು ಸಲ್ಲಿಸಿದ ಕಾಂಗ್ರೆಸ್ ನಿಯೋಗ

ಈ ಸಂಬಂಧ ದೂರು ನೀಡಲಾಗಿದೆ. ಕೂಡಲೇ ಅಮಿತ್ ಶಾ ಅವರನ್ನ ಬಂಧನ ಮಾಡಬೇಕು ಎಂದು ರಣ್​ದೀಪ್ ಸುರ್ಜೇವಾಲಾ ಒತ್ತಾಯಿಸಿದರು.

  • Share this:

ಬೆಂಗಳೂರು: ಚುನಾವಣೆಯಲ್ಲಿ ಬಿಜೆಪಿ ನಾಯಕರ (BJP Leaders) ಹೇಳಿಕೆ ಮತ್ತು ಭಾಷಣ ಖಂಡಿಸಿ ರಾಜ್ಯ ಕಾಂಗ್ರೆಸ್ ಇಂದು (Karnataka Congress) ಬೆಂಗಳೂರಿನ ಹೈಗ್ರೌಂಡ್ಸ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪೊಲೀಸ್ ಠಾಣೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್​ ಸುರ್ಜೇವಾಲಾ (Randeep Surjewala) ದೂರು ದಾಖಲಿಸಿದರು. ಸಚಿವ ವಿ ಸೋಮಣ್ಣ (V Somanna) ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ ಹಾಗೂ ಆಮಿಷವೊಡಿದ್ದಾರೆ ಎನ್ನಲಾದ ಆಡಿಯೋ ಲೀಕ್ ಆಗಿತ್ತು. ಚುನಾವಣೆ ಪ್ರಚಾರದ ವೇಳೆ ಅಮಿತ್ ಶಾ (Amit Shah), ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಾಟೆಗಳು, ಘರ್ಷಣೆಗಳು, ಗಲಭೆಗಳು ಹೆಚ್ಚಾಗುತ್ತವೆ ಎಂಬ ಹೇಳಿಕೆ ನೀಡಿದ್ದರು. ಈ ಇಬ್ಬರ ಹೇಳಿಕೆ ಖಂಡಿಸಿ ಇದೀಗ ಕಾಂಗ್ರೆಸ್ ದೂರು ದಾಖಲಿಸಿದೆ.


ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಣ್​ದೀಪ್​ ಸುರ್ಜೇವಾಲಾ, ನಾವು ಇವತ್ತು ಒಂದು ಗಂಭೀರ ವಿಚಾರದ ಬಗ್ಗೆ ದೂರು ನೀಡಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದೂರು ನೀಡಿದ್ದೇವೆ. ಏಪ್ರಿಲ್ 25 ರಂದು ಚುನಾವಣೆ ಭಾಷಣದ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮುಗಲಭೆಗಳು ಆಗುತ್ತವೆ ಅಂತ ಅಮಿತ್ ಶಾ ಹೇಳಿದ್ದಾರೆ. ಈ ಹೇಳಿಕೆ ಸಮುದಾಯಗಳ ನಡುವೆ ಘರ್ಷಣೆ ಉಂಟು ಮಾಡುತ್ತವೆ ಎಂದು ಹೇಳಿದರು.


Congress files complaint against bjp leaders mrq
ದೂರು ಸಲ್ಲಿಸಿದ ಕಾಂಗ್ರೆಸ್ ನಿಯೋಗ


ಅಮಿತ್ ಶಾ ಬಂಧನಕ್ಕೆ ಸುರ್ಜೇವಾಲಾ ಒತ್ತಾಯ


ಬಿಜೆಪಿ 40 ಸೀಟ್ ಗಿಂತ ಕಡಿಮೆ ಸ್ಥಾನವನ್ನ ಈ ಚುನಾವಣೆಯಲ್ಲಿ ಪಡೆಯಲಿದೆ. ಇದರಿಂದ ವಿಚಲಿತ ಗೊಂಡಿರುವ ಅಮಿತ್ ಶಾ ಈ ರೀತಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ದೂರು ನೀಡಲಾಗಿದೆ. ಕೂಡಲೇ ಅವರನ್ನ ಬಂಧನ ಮಾಡಬೇಕು ಎಂದು ರಣ್​ದೀಪ್ ಸುರ್ಜೇವಾಲಾ ಒತ್ತಾಯಿಸಿದರು.


Congress files complaint against bjp leaders mrq
ದೂರು ಸಲ್ಲಿಸಿದ ಕಾಂಗ್ರೆಸ್ ನಿಯೋಗ


ಶಾ ಅವರನ್ನ ಬ್ಯಾನ್ ಮಾಡಬೇಕು


ಅಮಿತ್ ಶಾ ಮತದಾರರನ್ನ ಹೆದರಿಸಿ ಕಾಂಗ್ರೆಸ್​ಗೆ ವೋಟ್ ನೀಡಬೇಡಿ ಅನ್ನೋದು ಅವರ ಹೇಳಿಕೆ ಉದ್ದೇಶ. ಕೇಂದ್ರ ಗೃಹ ಸಚಿವರ ಹೇಳಿಕೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿದೆ. ಚುನಾವಣೆ ಆಯೋಗ ಅಮಿತ್ ಶಾ ಅವರನ್ನು ಪ್ರಚಾರದಲ್ಲಿ ಭಾಗಿಯಾಗದಂತೆ ಬ್ಯಾನ್ ಮಾಡಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.




ಇದನ್ನೂ ಓದಿ:  Praveen Nettar ಕನಸಿನ ಗೂಡಿಗೆ ಗೃಹ ಪ್ರವೇಶ; ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿ


ಇದೇ ಹೇಳಿಕೆಯನ್ನ ಬೇರೆ ಯಾರಾದ್ರೂ ಮಾಡಿದ್ರೆ ದೊಡ್ಡ ಕ್ರಮ ತೆಗೆದುಕೊಳ್ಳುತ್ತಿದ್ದರು. ಸಣ್ಣ ಹೇಳಿಕೆಗೆ ನಮ್ಮ ನಾಯಕರ ಮೇಲೆ ಏನೆಲ್ಲಾ ಕ್ರಮಗಳು ಆಗಿವೆ ಅನ್ನೋದು ನಿಮಗೆ ಗೊತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

top videos
    First published: