• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Poll: ಸಸ್ಪೆನ್ಸ್​ಗಳಿಂದ ಕೂಡಿದ ಕಾಂಗ್ರೆಸ್ ಎರಡನೇ ಲಿಸ್ಟ್; ಬಂಡಾಯದ ಬಿಸಿ

Karnataka Poll: ಸಸ್ಪೆನ್ಸ್​ಗಳಿಂದ ಕೂಡಿದ ಕಾಂಗ್ರೆಸ್ ಎರಡನೇ ಲಿಸ್ಟ್; ಬಂಡಾಯದ ಬಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಿಂಗಸುಗೂರು ಪುಲಕೇಶಿಯ ನಗರ, ಕುಂದಗೋಳ, ಹರಿಹರ, ಶಿಡ್ಲಘಟ್ಟ, ಚಿಕ್ಕಪೇಟೆ, ಕೆಆರ್ ಪುರಂ, ಬೊಮ್ಮನಹಳ್ಳಿ, ದಾಸರಹಳ್ಳಿ, ಸಿವಿ ರಾಮನ್ ನಗರ, ಪುಲಿಕೇಶಿ ನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ.

  • News18 Kannada
  • 3-MIN READ
  • Last Updated :
  • Karnataka, India
  • Share this:

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ (Congress High Command) ಕೋಲಾರಕ್ಕೆ (Kolar) ಟಿಕೆಟ್ ಪ್ರಕಟಿಸಿಲ್ಲ. ಇತ್ತ ಹಾಲಿ ಶಾಸಕ ವಿ.ಮುನಿಯಪ್ಪ (MLA V Muniyappa) ಕ್ಷೇತ್ರ ಶಿಡ್ಲಘಟ್ಟ (Shidlaghatta) ಕೂಡ ಘೋಷಣೆ ಆಗಿಲ್ಲ. ಚಿತ್ರದುರ್ಗದಲ್ಲಿ ಮಾಜಿ ಪರಿಷತ್ ಸದಸ್ಯ ರಘು ಆಚಾರ್​ಗೆ (Raghu Achar) ಟಿಕೆಟ್ ಕೈ ತಪ್ಪಿದ್ದು, ದೊಡ್ಡಣ್ಣ ಅಳಿಯ ವೀರೇಂದ್ರ ಪಪ್ಪಿಗೆ ಮಣೆ ಹಾಕಿದೆ. ಬಿಜೆಪಿಯಿಂದ ಮತ್ತೆ ಕಾಂಗ್ರೆಸ್​ಗೆ ಬಂದ ಬಾಬುರಾವ್ ಚಿಂತನಸೂರ್​ಗೆ (Baburao Chinchanasuru) ಟಿಕೆಟ್ ಸಿಕ್ಕಿದೆ. ಹಾಲಿ ಶಾಸಕರ ಆಯ್ಕೆಯಲ್ಲಿ ಗೊಂದಲ ಮುಂದುವರಿದಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಶಿಗ್ಗಾಂವಿಯಲ್ಲಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದ್ರೆ, ಧಾರವಾಡ ಟಿಕೆಟ್ ನೀಡಲಾಗಿದೆ.


ಒಟ್ಟಿನಲ್ಲಿ ವೈಎಸ್​ವಿ ದತ್ತ ಹೊರತುಪಡಿಸಿ ಎಲ್ಲ ವಲಸಿಗರಿಗೆ ಟಿಕೆಟ್ ನೀಡಲಾಗಿದ್ದು, ಲಿಂಗಸುಗೂರು ಪುಲಕೇಶಿಯ ನಗರ, ಕುಂದಗೋಳ, ಹರಿಹರ, ಶಿಡ್ಲಘಟ್ಟ, ಚಿಕ್ಕಪೇಟೆ, ಕೆಆರ್ ಪುರಂ, ಬೊಮ್ಮನಹಳ್ಳಿ, ದಾಸರಹಳ್ಳಿ, ಸಿವಿ ರಾಮನ್ ನಗರ, ಪುಲಿಕೇಶಿ ನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ.


ಖರ್ಗೆ ಆಪ್ತರಿಗೆ ಸಿಕ್ತು ಟಿಕೆಟ್


ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಆಪ್ತ ಚನ್ನಾರೆಡ್ಡಿ ಪಾಟೀಲ ತುನ್ನೂರುಗೆ ಯಾದಗಿರಿ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಪಕ್ಷವು ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಯಾಗಿ ನನ್ನ ಹೆಸರು ಪ್ರಕಟ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿ ತರಬೇಕು ಎಂದು ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದ್ರು.


ಗಂಗಾವತಿ ಕಾಂಗ್ರೆಸ್​ನಲ್ಲಿ ಬಂಡಾಯ


ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದಕ್ಕೆ ಹೆಚ್.ಆರ್ ಶ್ರೀನಾಥ್ ಅಸಮಾಧಾನಗೊಂಡಿದ್ದಾರೆ. ಟಿಕೆಟ್ ಮಿಸ್ ಆಗಿದ್ದಕ್ಕೆ ಬೇಸರವಿದೆ. ಮುಂದೆ ಬೆಂಬಲಿಗರ ಸಭೆ ಕರೆದು ತೀರ್ಮಾನಿಸುತ್ತೇನೆ ಎಂದು ಹೇಳಿದರು.


ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ


ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ರಿಲೀಸ್ ಆಗ್ತಿದ್ದಂತೆ ರಾಯಚೂರಿನ ಲಿಂಗಸುಗೂರು ಕಾಂಗ್ರೆಸ್​ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಎಚ್.ಬಿ ಮುರಾರಿಗೆ ಟಿಕೆಟ್ ನೀಡಲೇಬೇಕು ಎಂದು ಕಾರ್ಯಕರ್ತರು ಬೀದಿಗಳಿದಿದ್ದಾರೆ.


ಸ್ಥಳೀಯ ಮಾದಿಗ ಸಮಾಜಕ್ಕೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ, ಕಾಲ್ನಡಿಗೆಯ ಮೂಲಕ ಬೀದಿಗಳಲ್ಲಿ ಸಂಚರಿಸಿ ಪ್ರತಿಭಟನೆ ಮಾಡಲಾಗ್ತಿದೆ. ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಹಾಲಿ‌ ಶಾಸಕ ಡಿ.ಎಸ್​ ಹೂಲಿಗೇರಿಗೂ ಟಿಕೆಟ್ ಘೋಷಿಸಿಲ್ಲ.


ಇದನ್ನೂ ಓದಿ:  JDS ತೊರೆದು ಕಾಂಗ್ರೆಸ್ ಸೇರಿದ್ದ YSV ದತ್ತಾಗೆ ನಿರಾಸೆ; ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಸಸ್ಪೆನ್ಸ್


ದೇವರ ಮೇಲಾಣೆ, ಕಾಂಗ್ರೆಸ್ ಸೋಲುತ್ತೆ


ಗುಡ್ಡೆಹಳ್ಳಿ ಕೆಂಚಪ್ಪನ ಆಣೆ, ಕಡೂರಲ್ಲಿ ಕಾಂಗ್ರೆಸ್ ಸೋಲುತ್ತೆ. ದತ್ತಣ್ಣಂಗೆ ಟಿಕೆಟ್ ಕೊಡ್ಲಿಲ್ಲ ಅಂದ್ರೆ ಕಡೂರಲ್ಲಿ ಕಾಂಗ್ರೆಸ್ ಗೆಲ್ಲಲ್ಲ ಎಂದು ವೈ.ಎಸ್.ವಿ ದತ್ತಾ ಅಭಿಮಾನಿಗಳು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಆಡಿಯೋ ವೈರಲ್ ಆಗಿದೆ.


top videos



    ಒಳ್ಳೆ ಮನುಷ್ಯನಿಗೆ ಟಿಕೆಟ್ ಸಿಕ್ಕಿಲ್ಲ ಅಂದ ಮೇಲೆ ಕಾಂಗ್ರೆಸ್ ಸೋಲೋದು ಪಕ್ಕಾ. ದತ್ತ ಮತ್ತೆ ಜೆಡಿಎಸ್​ಗೆ ಬಂದರೆ ನಾವಂತೂ ಗೆದ್ದೇ ಗೆಲ್ಲಿಸ್ತೀವಿ. 47 ಸಾವಿರ ವೋಟು ದತ್ತಣ್ಣನ ಜೇಬಲ್ಲಿ ಇದೆ ಎಂದು ಅಭಿಮಾನಿಗಳು ಶಪಥ ಮಾಡಿದ್ದಾರೆ.

    First published: