Congress: ಇಂದು ಬೀದರ್‌ನಲ್ಲಿ ‘ಕೈ’ ಶಕ್ತಿ ಪ್ರದರ್ಶನ

ಕಾಂಗ್ರೆಸ್ ಸಮಾವೇಶ

ಕಾಂಗ್ರೆಸ್ ಸಮಾವೇಶ

ಬೀದರ್‌ನಿಂದ ಹೆಲಿಪ್ಯಾಡ್ ಮೂಲಕ ಭಾಲ್ಕಿಗೆ ತೆರಳಿ ಶಾಸಕ ಈಶ್ವರ ಖಂಡ್ರೆ (MLA Eshwar Khandre) ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಲಿದ್ದಾರೆ.

  • Share this:

ಬೀದರ್: ಇಂದು ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ಕಾಂಗ್ರೆಸ್ (Congress) ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಭಾಲ್ಕಿ (Bhalki) ಹಾಗೂ ಹುಮನಾಬಾದ್‌‌ನಲ್ಲಿ (Humnabad) ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ (Congress Leader) ಭಾಗಿಯಾಗಲಿದ್ದಾರೆ. ಯುವ ಮತದಾರರನ್ನ ಸೆಳೆಯಲು ರಾಗಾ ನೇತೃತ್ವದಲ್ಲಿ ಕಾಂಗ್ರೆಸ್ ಶಕ್ತಿ‌ ಪ್ರದರ್ಶನಕ್ಕೆ ಮುಂದಾಗಿದೆ. ಬೆಳಗ್ಗೆ 11 ಗಂಟೆಗೆ ಬೀದರ್‌ಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಬೀದರ್‌ನಿಂದ ಹೆಲಿಪ್ಯಾಡ್ ಮೂಲಕ ಭಾಲ್ಕಿಗೆ ತೆರಳಿ ಶಾಸಕ ಈಶ್ವರ ಖಂಡ್ರೆ (MLA Eshwar Khandre) ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಲಿದ್ದಾರೆ.


ಕಾರ್ಯಕ್ರಮದಲ್ಲಿ‌ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಜಮೀರ್ ಅಹ್ಮದ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.


ಮಧ್ಯಾಹ್ನ 1-30 ರಿಂದ 2-30 ರವರೆಗೆ ಹುಮನಾಬಾದ್‌‌ನಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದ ಬಳಿಕ  ಹೈದರಾಬಾದ್‌ನಿಂದ ದೆಹಲಿಗೆ ರಾಹುಲ್​ ತೆರಳಲಿದ್ದಾರೆ.


ಶೆಟ್ಟರ್​ ಜೊತೆ ಕಾಂಗ್ರೆಸ್ ನಾಯಕರ ಸಭೆ


ಬಿಜೆಪಿಯ ಟಿಕೆಟ್ ಸಿಗದಿದ್ದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್​​ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಕಾಂಗ್ರೆಸ್​ ಪಕ್ಷಕ್ಕೆ ಶೆಟ್ಟರ್ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿದ ಜಗದೀಶ್ ಶೆಟ್ಟರ್​​, ಕಾಂಗ್ರೆಸ್​ ನಾಯಕರಾದ ರಣದೀಪ್ ಸುರ್ಜೆವಾಲಾ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​​, ಜಮೀರ್​ ಸೇರಿದಂತೆ ಹಲವು ನಾಯಕರ ಜೊತೆ ಸಭೆ ನಡೆಸಿದರು.


ಇದನ್ನೂ ಓದಿ:  Rahul Gandhi: ಡಿಕೆಶಿ ಭಾಷಣ ಆರಂಭವಾಗುತ್ತಿದ್ದಂತೆ ಎದ್ದು ಹೋದ ರಮೇಶ್​​ ಕುಮಾರ್; ರಾಹುಲ್​ ಬಂದರೂ ಕೈ ನಾಯಕರಲ್ಲಿ ಮೂಡದ ಒಮ್ಮತ!




ಚೌಕಾಸಿ ಸಭೆ


ಬೆಂಗಳೂರಿನ ಶಾಮನೂರು ಅಪಾರ್ಟ್​​ಮೆಂಟ್​​ನಲ್ಲಿ ಚೌಕಾಸಿ ಸಭೆ ನಡೆಸಿದ್ದು, ಶೆಟ್ಟರ್​ ಚೌಕಾಸಿಗೆಲ್ಲಾ ಸುರ್ಜೆವಾಲ, ಡಿಕೆಶಿ, ಸಿದ್ದು ಒಪ್ಪಿಗೆ ನೀಡಿದ್ದಾರೆ ಎನ್ನಲಾಗ್ತಿದೆ. ಶೆಟ್ಟರ್​ ಜೊತೆ 2 ಗಂಟೆ ಸಭೆ ನಡೆಸಿದ ಕಾಂಗ್ರೆಸ್ ನಾಯಕರು ಏನೂ ಮಾತಾಡದೇ ಹೊರಟರು..

First published: