• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ನೈತಿಕ ಪೊಲೀಸ್​ಗಿರಿ ಮಾಡಿದ್ರೆ ಮುಲಾಜಿಲ್ಲದೇ ಕ್ರಮ! ಸಂಘಟನೆಗಳಿಗೆ ಸಿಎಂ ಪರೋಕ್ಷ ವಾರ್ನಿಂಗ್

Siddaramaiah: ನೈತಿಕ ಪೊಲೀಸ್​ಗಿರಿ ಮಾಡಿದ್ರೆ ಮುಲಾಜಿಲ್ಲದೇ ಕ್ರಮ! ಸಂಘಟನೆಗಳಿಗೆ ಸಿಎಂ ಪರೋಕ್ಷ ವಾರ್ನಿಂಗ್

ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಯಾವುದೇ ಧರ್ಮ ಜಾತಿ ನೋಡದೆ ಅಪರಾಧ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಕಾನೂನು ಉಲ್ಲಂಘನೆ, ಅಪರಾಧ ಕೃತ್ಯಗಳು ಆದರೆ ಆ ಠಾಣೆಯ ಇನ್ಸ್ಪೆಕ್ಟರ್ ಜೊತೆಗೆ ಡಿಸಿಪಿ ಕೂಡ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ನೈತಿಕ ಪೊಲೀಸ್​ಗಿರಿಗೆ (Moral police) ಅವಕಾಶ ಇಲ್ಲ, ಹೀಗೆ ಮಾಡುವವರ‌ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪೊಲೀಸ್​ ಇಲಾಖೆಗೆ (Police Department) ಖಡಕ್ ಸೂಚನೆ ನೀಡಿದ್ದಾರೆ. ಒಂದು ವೇಳೆ ಇಂತಹ ಪ್ರಕರಣಗಳು ಬೆಳಕಿಗೆ ಬಂದರೆ ಆಯಾ ವಿಭಾಗದ ಡಿಸಿಪಿ ಹಾಗೂ ಎಸ್​ಪಿ (DSP and SP) ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿಎಂ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.


ನೈತಿಕ ಪೊಲೀಸ್​ಗಿರಿಗೆ ಅವಕಾಶ ಇಲ್ಲ


ಸುದ್ದಿಗೋಷ್ಠಿಯಲ್ಲಿ ಮಾನಾಡಿದ ಸಿದ್ದರಾಮಯ್ಯ ರಾಜ್ಯದಲ್ಲಿ ಇನ್ನು ಮುಂದೆ ನೈತಿಕ ಪೊಲೀಸ್ ಗಿರಿ ಇರಬಾರದು, ಅವೆಲ್ಲಾ ಇನ್ನು ಮುಂದೆ ನಡೆಯಲ್ಲ, ಅವೆಲ್ಲಾ ಇಲ್ಲಿಗೆ ಮುಗಿಯಿತು. ಯಾವುದೇ ಧರ್ಮ ಜಾತಿ ನೋಡದೆ ಅಪರಾಧ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಕಾನೂನು ಉಲ್ಲಂಘನೆ, ಅಪರಾಧ ಕೃತ್ಯಗಳು ಆದರೆ ಆ ಠಾಣೆಯ ಇನ್ಸ್ಪೆಕ್ಟರ್ ಜೊತೆಗೆ ಡಿಸಿಪಿ ಕೂಡ ನೇರ ಹೊಣೆ ಹೊರಬೇಕಾಗುತ್ತದೆ. ಇನ್ನು ಸಾರ್ವಜನಿಕರು ಠಾಣೆಗೆ ಬಂದರೆ ಸೌಜನ್ಯದಿಂದ ನಡೆದು ಕೊಳ್ಳಬೇಕು, ಇಲ್ಲವಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: Siddaramaiah: ನಾನು ಕೊಡುವುದು ಸೂಚನೆಯಲ್ಲ, ಎಚ್ಚರಿಕೆ! ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್


ಹಿಂದಿನ 4 ವರ್ಷಗಳ ಅವ್ಯವಸ್ಥೆ ಬೇಡ


ಕಳೆದ ನಾಲ್ಕು ವರ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ಏನಾಗಿದೆ ಎಂಬುದು ತಿಳಿದಿದೆ. ಈಗ ಆ ತಪ್ಪು ಮರುಕಳಿಸಬಾರದು. ರೌಡಿಸಂ ಸೇರಿ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣವಾಗಬೇಕು. ಅಕ್ರಮ ಕ್ಲಬ್​ಗಳು ಅವಕಾಶ ನೀಡಬಾರದು. ಯಾರಿಗೂ ತಾರತಮ್ಯ ಮಾಡದೆ ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಿ. ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಿದ್ದೀರಾ ಅಂತಾ ಗೊತ್ತಿದೆ. ಮುಂದೆ ಯಾರಿಗೂ ತಾರತಮ್ಯ ಮಾಡಬೇಡಿ ಎಂದು ತಿಳಿಸಿದ್ದಾರೆ.




ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ


ಇದೇ ಸಂದರ್ಭದಲ್ಲಿ ಬೆಂಗಳೂರಿಗೆ ಮಳೆಯಿಂದಾಗುವ ಅನಾಹುತ ತಪ್ಪಿಸಲು, ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಸೂಚನೆ ನೀಡಿದರು. ಹಿಂದಿನ ಸರ್ಕಾರ ಎಲ್ಲಿಗೆ ನಿಲ್ಲಿಸಿತ್ತೋ ಅಲ್ಲಿಂದ ಪ್ರಾರಂಭ ಮಾಡಿ, ಕೋರ್ಟ್​ನಲ್ಲಿ ಕೇಸ್ ಆದರೆ ಅದನ್ನ ನಮ್ಮ ಸರ್ಕಾರದ ವಕೀಲರು ನೋಡಿ ಕೊಳ್ಳುತ್ತಾರೆ. ಮಳೆ ಬಂದಾಗ ನೀರು ನಿಲ್ಲುವ ಅಂಡರ್ ಪಾಸ್ ಸಂಚಾರ ಬಂದ್ ಮಾಡಬೇಕು. ಮೋರಿಗಳನ್ನು ಕ್ಲೀನ್ ಮಾಡಬೇಕು.. ರಸ್ತೆಯಲ್ಲಿ ನೀರು ನಿಲ್ಲುವುದನ್ನ ತಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಇದನ್ನೂ ಓದಿ: DK Shivakumar: ಪೊಲೀಸ್ ಇಲಾಖೆ ಕೇಸರಿಕರಣ ಮಾಡಲು ಹೊರಟಿದ್ದೀರಾ? ಸಭೆಯಲ್ಲಿ ಪೊಲೀಸರಿಗೆ ಡಿಕೆಶಿ ಕ್ಲಾಸ್!


ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ


ಇದೇ ಸಂದರ್ಭದಲ್ಲಿ ಬೆಂಗಳೂರಿಗೆ ಮಳೆಯಿಂದಾಗುವ ಅನಾಹುತ ತಪ್ಪಿಸಲು, ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಸೂಚನೆ ನೀಡಿದರು. ಹಿಂದಿನ ಸರ್ಕಾರ ಎಲ್ಲಿಗೆ ನಿಲ್ಲಿಸಿತ್ತೋ ಅಲ್ಲಿಂದ ಪ್ರಾರಂಭ ಮಾಡಿ, ಕೋರ್ಟ್​ನಲ್ಲಿ ಕೇಸ್ ಆದರೆ ಅದನ್ನ ನಮ್ಮ ಸರ್ಕಾರದ ವಕೀಲರು ನೋಡಿ ಕೊಳ್ಳುತ್ತಾರೆ. ಮಳೆ ಬಂದಾಗ ನೀರು ನಿಲ್ಲುವ ಅಂಡರ್ ಪಾಸ್ ಸಂಚಾರ ಬಂದ್ ಮಾಡಬೇಕು. ಮೋರಿಗಳನ್ನು ಕ್ಲೀನ್ ಮಾಡಬೇಕು.. ರಸ್ತೆಯಲ್ಲಿ ನೀರು ನಿಲ್ಲುವುದನ್ನ ತಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

First published: