• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru Rains: ಮಳೆಗೆ ಬೆಂಗಳೂರಿನಲ್ಲಿ ಯುವತಿ ಬಲಿ! ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

Bengaluru Rains: ಮಳೆಗೆ ಬೆಂಗಳೂರಿನಲ್ಲಿ ಯುವತಿ ಬಲಿ! ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು ಮಳೆಗೆ ಮೊದಲ ಬಲಿ

ಬೆಂಗಳೂರು ಮಳೆಗೆ ಮೊದಲ ಬಲಿ

ಮೃತ ಯುವತಿಯ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ. ಮೃತ ಭಾನುರೇಖಾ ಕುಟುಂಬಸ್ಥರಿಗೆ ಚಿಕಿತ್ಸೆ ಅಗತ್ಯವಿದ್ದರೆ ಸರ್ಕಾರವೇ ಅದರ ವೆಚ್ಚವನ್ನು ನೀಡುತ್ತೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸುರಿದ ಕೆಲವೇ ಗಂಟೆಗಳ ಮಳೆಗೆ (Rain) ಹಲವು ಅವಾಂತರಗಳು ಎದುರಾಗಿದ್ದು, ಮಳೆಯಿಂದ ಅಂಡರ್​​ಪಾಸ್​ನಲ್ಲಿ (Underpass) ಶೇಖರಣೆಯಾಗಿದ್ದ ಮಳೆ ನೀರಿನಲ್ಲಿ ಮುಳುಗಿ ಯುವತಿಯೊಬ್ಬರು (Woman) ಸಾವನ್ನಪ್ಪಿದ್ದಾರೆ. ನಗರದ ಕೆಆರ್ ಸರ್ಕಲ್ (KR Circle)​ ಅಂಡರ್​ಪಾಸ್​​ನಲ್ಲಿ ದುರ್ಘಟನೆ ನಡೆದಿದೆ. ಇನ್ನು, ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಲಭ್ಯವಾಗದೆ ಯುವತಿ ಸಾವನ್ನಪ್ಪಿದ ಆರೋಪ ಕೇಳಿ ಬಂದಿದೆ. ಇನ್ನು ಮಳೆಯ ಕುರಿತಂತೆ ಮಾಧ್ಯಮಗಳ ವರದಿ ಬೆನ್ನಲ್ಲೇ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಭೇಟಿ ನೀಡಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದು, ಮೃತ ಯುವತಿಯ ಕುಟುಂಸ್ಥರಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.


ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಜನತೆ ತತ್ತರಗೊಂಡಿದ್ದು, ಜೂನ್‌ನಲ್ಲಿ ಆರಂಭವಾಗುವ ಮಳೆಗಾಲಕ್ಕೆ ನಿಮ್ಮ ತಯಾರಿ ಏನು ಎಂದು ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದ್ದರು. ಆದರೆ ಸಿಎಂಗೆ ಸಮರ್ಪಕ‌ ಮಾಹಿತಿಯನ್ನು ಬಿಬಿಎಂಪಿ ಅಧಿಕಾರಿಗಳು ನೀಡಲು ವಿಫಲರಾಗಿದ್ದರು. ಸಿದ್ಧರಾಮಯ್ಯರ ಪ್ರಶ್ನೆಗೆ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದ್ದರು. ಕೇವಲ ಅರ್ಧ ಗಂಟೆ ಮಳೆಗೆ ಈ ರೀತಿ ಆದರೆ ಹೇಗೆ? ನೀವು ಕುಳಿತು ಬೇಸಿಗೆ ಕಾಲದಲ್ಲಿ ಮಾಡಿದ್ದೇನು? ಈಗ ನಾನೇ ಅಲ್ಲಿಗೆ ಬರಬೇಕಾ? ಎಂದು ಸಿಎಂ ಗರಂ ಆಗಿದ್ದರು.




ಇದನ್ನೂ ಓದಿ: Bengaluru: ಕೆಆರ್​ ಸರ್ಕಲ್​ನಲ್ಲಿ ಮಳೆ ನೀರಿನಲ್ಲಿ ಮುಳುಗಿದ ಕಾರು; ನಾಲ್ವರ ರಕ್ಷಣೆ, ಯುವತಿ ಸಾವು


ಅಲ್ಲದೇ, ಕೆ.ಆರ್.ಸರ್ಕಲ್ ಬಳಿಯ ದುರಂತದ ಬಗ್ಗೆ ಮೊದಲು ಒಬ್ಬ ಅಧಿಕಾರಿಯನ್ನು ಆಸ್ಪತ್ರೆಗೆ ಕಳುಹಿಸಿ ಎಂದು ಸಿಎಂ ಸಿದ್ಧರಾಮಯ್ಯ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸಿಎಂ ಸ್ವತಃ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಘಟನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಮಳೆ ಬಂದರೆ ಮೊದಲಿನಿಂದಲೂ ಅಂಡರ್ ಪಾಸ್​ನಲ್ಲಿ ನೀರು ನಿಲ್ಲುತ್ತದೆ. ಮಳೆ ನೀರು ನಿಲ್ಲುತ್ತಿದ್ದಂತೆ ಪೊಲೀಸರು ಬ್ಯಾರಿಕೇಡ್​​​ ಆಗಿದ್ದರು. ಆದರೆ ಮಳೆಯಿಂದ ಬ್ಯಾರಿಗೇಡ್​​ ಕೊಚ್ಚಿ ಹೋಗಿದೆ. ಇದನ್ನು ಗಮನಿಸದೆ ಚಾಲಕ ಅಂಡರ್​ ಪಾಸ್​​ಗೆ ಬಂದಿದ್ದಾನೆ.



ಚಿಕಿತ್ಸೆ ನೀಡಲು ತಡ ಆಗಿದ್ದರೆ ತನಿಖೆ ಕೈಗೊಂಡು ಕ್ರಮಕೈಗೊಳ್ಳಲಾಗುತ್ತದೆ. ಮೃತ ಯುವತಿಯ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ. ಯುವತಿ ಇನ್ಫೋಸಿಸ್​ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಭಾನುರೇಖಾ ಕುಟುಂಬಸ್ಥರಿಗೆ ಚಿಕಿತ್ಸೆ ಅಗತ್ಯವಿದ್ದರೆ ಸರ್ಕಾರವೇ ಅದರ ವೆಚ್ಚವನ್ನು ನೀಡಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

top videos
    First published: