ಗ್ರಾಮಗಳಿಗೆ ಅಲ್ಲ, ಬಡಾವಣೆಗೆ 10 ಕೋಟಿ ನೀಡಿದ ದಾನಿಗಳ ಹೆಸರಿಡಲು ಚಿಂತನೆ; ಸಿಎಂ ಬಿಎಸ್ ಯಡಿಯೂರಪ್ಪ
ಗ್ರಾಮಗಳಿಗೆ ಮರುನಾಮಕರಣ ಮಾಡುವ ಯಾವುದೇ ಆಲೋಚನೆ ಇಲ್ಲ. 10 ಕೋಟಿಗೂ ಹೆಚ್ಚಿಗೆ ದೇಣಿಗೆ ನೀಡಿದವರ ಹೆಸರನ್ನು ಆ ಗ್ರಾಮಗಳ ಬಡಾವಣೆಗೆ ಇಡಲಾಗುವುದು ಎಂದು ಸಿಎಂ ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದ್ದಾರೆ

ಬಿಎಸ್ ಯಡಿಯೂರಪ್ಪ
- News18 Kannada
- Last Updated: August 16, 2019, 10:51 AM IST
ಬೆಂಗಳೂರು (ಆ.16): ಪ್ರವಾಹ ಪೀಡಿತ ಪ್ರದೇಶಗಳ ಪುನಶ್ಚೇತನಕ್ಕೆ 10 ಕೋಟಿ ನೀಡಿದ ದಾನಿಗಳ ಹೆಸರನ್ನು ಗ್ರಾಮಕ್ಕೆ ಇಡುವ ಕುರಿತ ಸಿಎಂ ನಿರ್ಧಾರಕ್ಕೆ ವ್ಯಾಪಕ ಟೀಕೆ ಕೇಳಿ ಬಂದ ಹಿನ್ನೆಲೆ ಯಡಿಯೂರಪ್ಪ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗ್ರಾಮಗಳ ಹೆಸರನ್ನು ಬದಲಾಯಿಸುವ ಕುರಿತು ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಬದಲಾಗಿ ದೇಣಿಗೆ ನೀಡಿದವರ ಹೆಸರನ್ನು ಆ ಗ್ರಾಮಗಳ ಬಡಾವಣೆಗೆ ಇಡಲಾಗುವುದು ಎಂದು ಅವರು ಯೂ ಟರ್ನ್ ಹೊಡೆದಿದ್ದಾರೆ.
ರಾಜ್ಯದ ಮುಕ್ಕಾಲು ರಾಜ್ಯ ಪ್ರವಾಹಕ್ಕೆ ಒಳಗಾಗಿದ್ದು, ಇವುಗಳ ಮರುನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬೇಕಾಗಿದೆ. ಈ ಹಿನ್ನೆಲೆ ಸಾರ್ವಜನಿಕ ಉದ್ಯಮಿ ಹಾಗೂ ಕೈಗಾರಿಕೋದ್ಯಮಗಳು ದೇಣಿಗೆ ಆಹ್ವಾನಿಸಿ ಮಾತನಾಡಿದ್ದ ಅವರು, 10 ಕೋಟಿಗೂ ಹೆಚ್ಚಿಗೆ ದೇಣಿಗೆ ನೀಡಿದ ದಾನಿ, ಸಂಸ್ಥೆಗಳ ಹೆಸರನ್ನು ಪುನರ್ನಿರ್ಮಾಣಗೊಂಡ ನೆರೆ ಪೀಡಿತ ಗ್ರಾಮಗಳಿಗೆ ಇಡಲಾಗುವುದು ಎಂದಿದ್ದರು.
ಮುಖ್ಯಮಂತ್ರಿಗಳ ಈ ನಿರ್ಧಾರಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗಿತ್ತು. ನೆರೆಯಿಂದ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರು ಈಗ ಸಿಎಂ ಬಿಎಸ್ವೈ ತುಘಲಕ್ ನಿರ್ಧಾರದಿಂದಾಗಿ ತಮ್ಮ ಗ್ರಾಮದ ಹೆಸರನ್ನೂ ಕಳೆದುಕೊಳ್ಳುವಂತೆ ಆಗಿದೆ., ಈ ರೀತಿ ಮಾಡಬೇಡಿ. ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ ಎಂದು ಬಿಎಸ್ವೈ ನಿರ್ಧಾರಕ್ಕೆ ಜೆಡಿಎಸ್ ತೀವ್ರ ಖಂಡನೆ ವ್ಯಕ್ತಪಡಿಸಿತು.
ಇದನ್ನು ಓದಿ: 10 ಕೋಟಿ ದೇಣಿಗೆ ನೀಡಿದ ಸಂಸ್ಥೆ ಹೆಸರು ನೆರೆಪೀಡಿತ ಗ್ರಾಮಕ್ಕೆ ನಾಮಕರಣ; ರಾಜ್ಯವನ್ನು ಮಾರಾಟಕ್ಕೆ ಇಡಬೇಡಿ ಎಂದ ಜೆಡಿಎಸ್
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗ್ರಾಮಗಳಿಗೆ ಮರುನಾಮಕರಣ ಮಾಡುವ ಯಾವುದೇ ಆಲೋಚನೆ ಇಲ್ಲ. 10 ಕೋಟಿಗೂ ಹೆಚ್ಚಿಗೆ ದೇಣಿಗೆ ನೀಡಿದವರ ಹೆಸರನ್ನು ಆ ಗ್ರಾಮಗಳ ಬಡಾವಣೆಗೆ ಇಡಲಾಗುವುದು ಎಂದು ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದ್ದಾರೆ
ರಾಜ್ಯದ ಮುಕ್ಕಾಲು ರಾಜ್ಯ ಪ್ರವಾಹಕ್ಕೆ ಒಳಗಾಗಿದ್ದು, ಇವುಗಳ ಮರುನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬೇಕಾಗಿದೆ. ಈ ಹಿನ್ನೆಲೆ ಸಾರ್ವಜನಿಕ ಉದ್ಯಮಿ ಹಾಗೂ ಕೈಗಾರಿಕೋದ್ಯಮಗಳು ದೇಣಿಗೆ ಆಹ್ವಾನಿಸಿ ಮಾತನಾಡಿದ್ದ ಅವರು, 10 ಕೋಟಿಗೂ ಹೆಚ್ಚಿಗೆ ದೇಣಿಗೆ ನೀಡಿದ ದಾನಿ, ಸಂಸ್ಥೆಗಳ ಹೆಸರನ್ನು ಪುನರ್ನಿರ್ಮಾಣಗೊಂಡ ನೆರೆ ಪೀಡಿತ ಗ್ರಾಮಗಳಿಗೆ ಇಡಲಾಗುವುದು ಎಂದಿದ್ದರು.
ಪ್ರವಾಹ ಪೀಡಿತ ಗ್ರಾಮಗಳ ಅಭಿವೃದ್ದಿಗಾಗಿ 10 ಕೋಟಿ ರೂ.ಹೆಚ್ಚು ನೆರವು ನೀಡುವ ಸಂಸ್ಥೆಗಳ ಹೆಸರನ್ನು ಅಲ್ಲಿ ನಿರ್ಮಿಸಲಾಗುವ ನೂತನ ಬಡಾವಣೆಗಳಿಗೆ ಇಡಲಾಗುವುದು.
ಗ್ರಾಮದ ಹೆಸರನ್ನು ಬದಲಾಯಿಸುವ ಪ್ರಸ್ತಾಪವಿಲ್ಲ- ಮುಖ್ಯಮಂತ್ರಿ ಯಡಿಯೂರಪ್ಪ
— CM of Karnataka (@CMofKarnataka) August 16, 2019
Loading...
ಇದನ್ನು ಓದಿ: 10 ಕೋಟಿ ದೇಣಿಗೆ ನೀಡಿದ ಸಂಸ್ಥೆ ಹೆಸರು ನೆರೆಪೀಡಿತ ಗ್ರಾಮಕ್ಕೆ ನಾಮಕರಣ; ರಾಜ್ಯವನ್ನು ಮಾರಾಟಕ್ಕೆ ಇಡಬೇಡಿ ಎಂದ ಜೆಡಿಎಸ್
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗ್ರಾಮಗಳಿಗೆ ಮರುನಾಮಕರಣ ಮಾಡುವ ಯಾವುದೇ ಆಲೋಚನೆ ಇಲ್ಲ. 10 ಕೋಟಿಗೂ ಹೆಚ್ಚಿಗೆ ದೇಣಿಗೆ ನೀಡಿದವರ ಹೆಸರನ್ನು ಆ ಗ್ರಾಮಗಳ ಬಡಾವಣೆಗೆ ಇಡಲಾಗುವುದು ಎಂದು ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದ್ದಾರೆ
Loading...