• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Budget 2023: ಬಿಜೆಪಿ ಸರ್ಕಾರದ ಕೊನೆ ಬಜೆಟ್​ ಮಂಡನೆಗೆ ಕೌಂಟ್​ಡೌನ್; ಮಹಿಳೆಯರ ಮನಗೆಲ್ಲೋಕೆ ಬೊಮ್ಮಾಯಿ ಕೊಡ್ತಾರಾ ಗಿಫ್ಟ್?

Karnataka Budget 2023: ಬಿಜೆಪಿ ಸರ್ಕಾರದ ಕೊನೆ ಬಜೆಟ್​ ಮಂಡನೆಗೆ ಕೌಂಟ್​ಡೌನ್; ಮಹಿಳೆಯರ ಮನಗೆಲ್ಲೋಕೆ ಬೊಮ್ಮಾಯಿ ಕೊಡ್ತಾರಾ ಗಿಫ್ಟ್?

ಕರ್ನಾಟಕ ಬಜೆಟ್​ 2023-24

ಕರ್ನಾಟಕ ಬಜೆಟ್​ 2023-24

ಕೋವಿಡ್​ ಸಂಕಷ್ಟ ಅವಧಿಯ ಬಳಿಕ ಇಂದಿಗೂ ಸಣ್ಣ ವ್ಯಾಪಾರಸ್ಥರು, ಉದ್ದಿಮೆದಾರರು, ವಾಹನ ಚಾಲಕರು, ರೈತರು ಆರ್ಥಿಕತವಾಗಿ ಚೇತರಿಸಿಕೊಳ್ಳುತ್ತಿದ್ದು, ಎಲ್ಲಾ ವರ್ಗಗಳ ಜನರನ್ನು ಗಮನ ಸೆಳೆಯುವ ಯೋಜನೆಗಳಿಗೆ ಸರ್ಕಾರ ಮಣೆ ಹಾಕಲಿದೆ ಎನ್ನಲಾಗಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಇಂದು ರಾಜ್ಯ ಬಜೆಟ್ (Karnataka State Budget 2023-24) ಮಂಡಿಸಲಿದ್ದಾರೆ. ಚುನಾವಣಾ ವರ್ಷದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಜೆಟ್‌ನಲ್ಲಿ ಮಹಿಳೆಯರ (Women) ಮನಗೆಲ್ಲೋಕೆ ಬೊಮ್ಮಾಯಿ ಸರ್ಕಾರ ಪ್ಲಾನ್‌ ಮಾಡಿದೆ ಎನ್ನಲಾಗುತ್ತಿದೆ. ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ (JDS Pancharatna Yatra) ಮಹಿಳಾ ಸ್ವಸಹಾಯ ಸಂಘಗಳ (Women's Self-Help Groups) ಸಾಲಮನ್ನಾ (Loan Waiver ) ಮಾಡುವುದಾಗಿ ಘೋಷಣೆ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ (Lakshmi Yojana) ಮೂಲಕ ಪ್ರತಿ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಘೋಷಣೆ ಮಾಡಿದೆ. ಆದ್ದರಿಂದ ಬೊಮ್ಮಾಯಿ ಕೂಡಾ ಮಹಿಳೆಯರಿಗೆ ಬಿಗ್ ಗಿಫ್ಟ್ ನೀಡುವ ನಿರೀಕ್ಷೆ ಇದೆ.


ಇಂದು 10:15ಕ್ಕೆ ಬಜೆಟ್​ ಮಂಡನೆ ಆರಂಭ


ಚುನಾವಣೆಯ ಬಜೆಟ್​ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರ ಮೇಲಿನ ನಿರೀಕ್ಷೆಗಳೂ ಗರಿಗೆದರಿವೆ. ಇಂದು ಬೆಳಗ್ಗೆ 10:15ಕ್ಕೆ ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಅಂದಹಾಗೆ, ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಿರಲಿದ್ದು, ಸಿಎಂ ಬೊಮ್ಮಾಯಿ ಅವರ ಎರಡನೇ ಬಜೆಟ್ ಆಗಿರಲಿದೆ.


ಇದನ್ನೂ ಓದಿ: Karnataka Budget 2023: ಬಿಜೆಪಿ ಸರ್ಕಾರದ ಕಡೇ ಬಜೆಟ್​ ಮಂಡನೆಗೆ ಕೌಂಟ್​ಡೌನ್; ಮಹಿಳೆಯರ ಮನಗೆಲ್ಲೋಕೆ ಬೊಮ್ಮಾಯಿ ಕೊಡ್ತಾರಾ ಗಿಫ್ಟ್?


ರಾಜ್ಯ ಆದಾಯ ಹೆಚ್ಚಳದಿಂದ ಬಜೆಟ್​ ಗಾತ್ರವೂ ಹೆಚ್ಚಳ ಸಾಧ್ಯತೆ


ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಬಜೆಟ್​ ಬಗ್ಗೆ ಜನಸಾಮಾನ್ಯರ ನಿರೀಕ್ಷೆಗಳೂ ಗರಿಗೆದರಿವೆ. ಇದಕ್ಕೆ ಪೂರಕವಾಗಿ ಕಳೆದ 10 ತಿಂಗಳುಗಳಲ್ಲಿ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ ಆದಾಯವೂ ಸಂಗ್ರಹವಾಗಿದೆ. ಹೀಗಾಗಿ ದೊಡ್ಡ ಗಾತ್ರದ ಬಜೆಟ್​ ಅನ್ನು ಬೊಮ್ಮಾಯಿ ಮಂಡಿಸಬಹುದು ಎಂದು ಹೇಳಲಾಗುತ್ತಿದೆ.


ಕಳೆದ ಬಾರಿ 2 ಲಕ್ಷದ 65 ಸಾವಿರದ 720 ಕೋಟಿ ರೂಪಾಯಿ ಗಾತ್ರದ ಬಜೆಟ್​​ನ್ನ ಮಂಡನೆ ಮಾಡಿದ್ದರು. ಈ ವರ್ಷದ ತೆರಿಗೆ ಆದಾಯ ಹೆಚ್ಚಳವಾಗಿರುವುದರಿಂದ ಸಹಜವಾಗಿಯೇ ಬಜೆಟ್ ಗಾತ್ರ ಹೆಚ್ಚಿರಲಿದೆ ಎಂದು ನಿರೀಕ್ಷಿಸಲಾಗಿದೆ.




ಜನಪ್ರಿಯ ಯೋಜನೆಗಳಿಗೆ ಮಣೆ ಹಾಕ್ತಾರಾ ಸಿಎಂ ಬೊಮ್ಮಾಯಿ


ಈಗಾಗಲೇ ಬಜೆಟ್​ ಮಂಡನೆಗೆ ಸಿದ್ಧತೆಗಳು ಬಹುತೇಕ ಮುಕ್ತಾಯವಾಗಿದ್ದು, ಚುನಾವಣೆಯ ಹೊಸ್ತಿನಲ್ಲಿ ಜನಪ್ರಿಯ ಯೋಜನೆಗಳಿಗೆ ಸಿಎಂ ಬೊಮ್ಮಾಯಿ ಮಣೆ ಹಾಕಲಿದ್ದಾರೆ ಎನ್ನಲಾಗಿದೆ. ಗ್ರಾಮೀಣ, ರೈತರು ಹಾಗೂ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.


ಉಳಿದಂತೆ 7ನೇ ವೇತನ ಆಯೋಗ ರಚನೆ ಆಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಬಜೆಟ್​ನಲ್ಲಿ ಮಹತ್ವ ಘೋಷಣೆ ಆಗುವ ನಿರೀಕ್ಷೆ ಇದ್ದು, ಸರ್ಕಾರಿ ನೌಕರರ ವೋಟ್​​ಗಳನ್ನು ಸೆಳೆಯಲು ಬಿಜೆಪಿ ಸರ್ಕಾರ ಮುಂದಾಗುತ್ತಾ ಕಾದು ನೋಡಬೇಕಿದೆ.


ಸಿಎಂ ಬಸವರಾಜ ಬೊಮ್ಮಾಯಿ


ಇದನ್ನೂ ಓದಿ: Siddaramaiah: ರಾಜ್ಯದಲ್ಲಿ 'ಹೊಡೆದಾಕಿ’ ರಾಜಕೀಯದ ಗಲಾಟೆ! ಬಿಜೆಪಿಗೆ ಸೋಲಿನ ಭಯ ಎಂದ ಸಿದ್ದು, ಅಶ್ವತ್ಥ್ ನಾರಾಯಣ್ ವಿಷಾದದ ಮಾತು


ಎರಡನೇ ಬಾರಿಗೆ ಬಜೆಟ್​ ಮಂಡಿಸಲಿರುವ ಸಿಎಂ ಬೊಮ್ಮಾಯಿ


ಕೋವಿಡ್​ ಸಂಕಷ್ಟ ಅವಧಿಯ ಬಳಿಕ ಇಂದಿಗೂ ಸಣ್ಣ ವ್ಯಾಪಾರಸ್ಥರು, ಉದ್ದಿಮೆದಾರರು, ವಾಹನ ಚಾಲಕರು, ರೈತರು ಆರ್ಥಿಕತವಾಗಿ ಚೇತರಿಸಿಕೊಳ್ಳುತ್ತಿದ್ದು, ಎಲ್ಲಾ ವರ್ಗಗಳ ಜನರನ್ನು ಗಮನ ಸೆಳೆಯುವ ಯೋಜನೆಗಳಿಗೆ ಸರ್ಕಾರ ಮಣೆ ಹಾಕಲಿದೆ ಎನ್ನಲಾಗಿದೆ.


ಅದರಲ್ಲೂ ಕಾಂಗ್ರೆಸ್​ ಮತ್ತು ಜೆಡಿಎಸ್ ಸರ್ಕಾರದ ಪತನದ ಬಳಿಕ ಸರ್ಕಾರ ರಚನೆ ಮಾಡಿದ್ದ ಯಡಿಯೂರಪ್ಪ ಅವರು ಕೋವಿಡ್​ ಸಂಕಷ್ಟದ ಅವಧಿಯಲ್ಲಿ ಬಜೆಟ್​ ನೀಡಿದ್ದರು. ಆ ಬಳಿಕ ಅಧಿಕಾರ ವಹಿಸಿಕೊಂಡ ಬೊಮ್ಮಾಯಿ ಅವರಿಗೆ ಎರಡನೇ ಬಾರಿಗೆ ಬಜೆಟ್​ ಮಂಡಿಸುವ ಅವಕಾಶ ಲಭ್ಯವಾಗಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು