ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ (BJP Janaspandana) ಸಮಾವೇಶ ನಡೀತಿದೆ. ಸರ್ಕಾರದ 3 ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷ ಬಿಜೆಪಿ (BJP) ಶಕ್ತಿ ಪ್ರದರ್ಶನ ಮಾಡಿದೆ. ಇದೇ ವೇಳೆ ಮಾತಾಡಿದ ಬಸವರಾಜ ಬೊಮ್ಮಾಯಿ (Basavaraj Bommai), ಭಾಷಣದ ಆರಂಭದಲ್ಲೇ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. 2023ಕ್ಕೆ ಮತ್ತೆ ಬಿಜೆಪಿಯ ಕಮಲ ಅರಳುತ್ತೆ ಎಂಬ ಸಂದೇಶವನ್ನು ತಾವು ಕೊಟ್ಟಿದ್ದೀರಿ ಎಂದು ಬೊಮ್ಮಾಯಿ ಹೇಳಿದ್ರು.
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಕೆಲಸ
ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ದ.ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಕೆಲಸ ನೀಡುವುದಾಗಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ನಿಂದ ಬಂದ ಎಲ್ಲ ಶಾಸಕರೂ ವೀರರು
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂಬ ಸಂದೇಶ ರವಾನೆ ಆಗಿದೆ. ನೀವು ಇಟ್ಟಿರುವ ವಿಶ್ವಾಸಕ್ಕೆ ನಾವು ದ್ರೋಹ ಮಾಡಲ್ಲ. 2019ರಲ್ಲೇ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಆದರೆ ಕಾಂಗ್ರೆಸ್ನ ಹುನ್ನಾರದಿಂದ ಅದು ಕೈತಪ್ಪಿತ್ತು. ಕಾಂಗ್ರೆಸ್ನಿಂದ ಬಂದ ಎಲ್ಲ ಶಾಸಕರೂ ವೀರರು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಕಾಂಗ್ರೆಸ್ಗೆ ಅಧಿಕಾರ ಲಾಲಸೆ ಇದೆ. ಹೀಗಾಗಿ ಈ ಹಿಂದೆ ಕುತಂತ್ರದಿಂದ, ವಾಮಾ ಮಾರ್ಗದ ಮೂಲಕ ಸಿದ್ದರಾಮಯ್ಯ ಮೈತ್ರಿ ಸರ್ಕಾರ ರಚನೆ ಮಾಡಿದ್ರು. ಜೆಡಿಎಸ್ ಪಕ್ಷವನ್ನು ಬೈಕೊಂಡು ಓಡಿದಾದ ಸಿದ್ದರಾಮಯ್ಯ ನವರೇ ಎಲ್ಲಿ ಹೋಯ್ತ್ರೀ, ನಿಮ್ಮ ನೀತಿ ಹಾಗೂ, ನೈತಿಕತೆ ಎಂದು ಕಿಡಿಕಾರಿದ್ರು. ಯಾರಿಗೆ ಉಪದೇಶ ಹೇಳ್ತೀರಿ ನೀವು, ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಸಿಎಂ ಬೊಮ್ಮಾಯಿಯಿಂದ ವೀರಾವೇಷದ ಭಾಷಣ ಮಾಡಿದ್ದಾರೆ.
ಇದನ್ನೂ ಓದಿ: Basavaraj Bommai: ತಾಕತ್ತಿದ್ರೆ ಬಂದು ನಿಲ್ಲಿಸಿ ನೋಡೋಣ; ಸಿದ್ದರಾಮಯ್ಯಗೆ ಬೊಮ್ಮಾಯಿ ಸವಾಲ್
ಕೇಂದ್ರ ಕೊಟ್ಟ ಅಕ್ಕಿಗೆ ನೀವು ಚೀಲ ಕೊಟ್ಟಿದ್ದೀರಿ
ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ರೆ ಜನರನ್ನು ನರಕಕ್ಕೆ ತಳ್ಳುತ್ತಿದ್ರು ಅನ್ನಭಾಗ್ಯ ಕೊಟ್ಟೆ ಅಂತಾ ಹೇಳ್ತೀರಲ್ಲ. ಅಕ್ಕಿ ಕೊಟ್ಟವರು ನೀವಾ ಎಂದ ಬೊಮ್ಮಾಯಿ, ಕೇಂದ್ರ ಸರ್ಕಾರ ಕೊಡುವ ಅಕ್ಕಿಗೆ ನೀವು ಚೀಲ ಮಾತ್ರ ಕೊಟ್ಟಿದ್ದೀರಿ ಎಂದು ಸಿದ್ದರಾಮಯ್ಯನವರ ಮಾತಿನ ಶೈಲಿಯಲ್ಲೇ ಸಿದ್ದರಾಮಯ್ಯಗೆ ಬೊಮ್ಮಾಯಿ ಟಾಂಗ್ ಕೊಟ್ಟಿದ್ರು.
ನಿಮ್ದು 100 ಪರ್ಸೆಂಟ್ ಕಾಂಗ್ರೆಸ್ ಸರ್ಕಾರ
ಪರ್ಸೆಂಟ್ ಬಗ್ಗೆ ಮಾತಾಡ್ತೀರಾ ಇವಾಗ, ನಿಮ್ದು 100 ಪರ್ಸೆಂಟ್ ಕಾಂಗ್ರೆಸ್ ಸರ್ಕಾರ, ನೀವು ಯಾವ್ದೆ ಕೆಲಸ ಮಾಡ್ದೆ ಬರೀ ಬಿಲ್ ತೆಗೆದು ದುಡ್ಡು ಹೊಡೆಯುತ್ತಿದ್ದವರು ನೀವು, ಸಿದ್ದರಾಮಯ್ಯ ಅವರ ದುಷ್ಟಕೂಟದ ನಾಟಕಕ್ಕೆ ಕೊನೆಯಾಡಬೇಕು. ಕಾಂಗ್ರೆಸ್ ಪಕ್ಷವನ್ನು 100 ಪರ್ಸೆಂಟ್ ಕಮಿಷನ್ ಎಂದು ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು ಕೊಟ್ಟರು.
ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ನಿಲ್ಲಿಸಿ
ಕಾಂಗ್ರೆಸ್ ನವರ ಕನಸ್ಸು ಬರೀ ಕನಸ್ಸಾಗಿಯೇ ಉಳಿಯುತ್ತದೆ. ರಾಜ್ಯದ ಜನರು ನಿಮ್ಮ ಭ್ರಷ್ಟಾಚಾರ ನೋಡಿದ್ದಾರೆ. ದೊಡ್ಡಬಳ್ಳಾಪುರದಿಂದ ಶುರುವಾದ ಈ ಜನಸ್ಪಂದನ ಇಡೀ ರಾಜ್ಯಾದ್ಯಂತ ಮಾಡಿ, ಜನರ ಮೆಚ್ಚುಗೆ ಗಳಿಸುತ್ತೇವೆ. ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಇದನ್ನು ನಿಲ್ಲಿಸಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಬೊಮ್ಮಾಯಿ ಚಾಲೆಂಜ್ ಹಾಕಿದ್ದಾರೆ.
ಇದನ್ನೂ ಓದಿ: Jana Spandana: ಬಿಜೆಪಿಯ ಜನಸ್ಪಂದನ ಕಾರ್ಯಕ್ರಮಕ್ಕೆ ಆರು ಸಚಿವರ ಗೈರು; ಸ್ಮೃತಿ ಇರಾನಿ ಅವರಿಂದ ಚಾಲನೆ
ನಿಮ್ಮ ಭ್ರಷ್ಟಾಚಾರ ಬಯಲಿಗೆಳೆಯುತ್ತೇವೆ
ನಿಮ್ಮ ಭ್ರಷ್ಟಾಚಾರದ ಬಗ್ಗೆ ಕೆಲವೇ ದಿನಗಳಲ್ಲಿ ಬಯಲಿಗೆ ಎಳೆಯುತ್ತೇವೆ. ನಿಮ್ಮ ವಿಕೃತ ಮನಸ್ಸು ಜನರಿಗೆ ತಿಳಿಸುತ್ತೇವೆ. ನಿಮ್ ನಿಜ ಬಣ್ಣವನ್ನು ಹೊರಗೆ ಎಳೆಯುತ್ತೇವೆ. ನಿಮ್ಮ ಗೋಮುಖ ವ್ಯಾಘ್ರ ಮುಖವಾಡದ ಬಗ್ಗೆ ಬಹಿರಂಗ ಆಗುತ್ತದೆ. ಜನರು ನಿಮಗೆ ಚೀ ಥೂ ಅಂತಾರೆ ಎಂದು ಬೊಮ್ಮಾಯಿ ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ