ಹಾವೇರಿ (ಸೆ.20): ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರಿನ ನಗರದಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕರಿಗೆ (Youths) ಚೂರಿಯಿಂದ ಇರಿಯಲಾಗಿದೆ ಎನ್ನಲಾಗ್ತಿದೆ. ರಾಣೆಬೆನ್ನೂರಿನ ನಗರದಲ್ಲಿ ನಡೆದ ಘಟನೆ ಇಬ್ಬರು ಯುವಕರಿಗೆ ಚೂರಿ ಇರಿತವಾಗಿದೆ, ಗಾಯಾಳು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ (Police) ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಗಲ್ಲಿಯ ಗಣಪತಿ ಮೆರವಣಿಗೆ (Ganapati utsav) ಸಮಯದಲ್ಲಿ ದುರ್ಗಾ ಸರ್ಕಲ್ ಗೆ ಬಂದಾಗ ಗಲಾಟೆ ನಡೆದಿದೆ. ದುರ್ಗಾ ವೃತ್ತದಲ್ಲಿರುವ ಮಸೀದಿ ಎದುರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ