• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಚನ್ನಪಟ್ಟಣದಲ್ಲೊಂದು ಡಿಜಿಟಲ್​ ಗ್ರಾಮ; ಸಹೋದರರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ

ಚನ್ನಪಟ್ಟಣದಲ್ಲೊಂದು ಡಿಜಿಟಲ್​ ಗ್ರಾಮ; ಸಹೋದರರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ

ಇಂಟರ್​ನೆಟ್​ ಸೇವೆ ನೀಡಿದ ಸಹೋದರರು

ಇಂಟರ್​ನೆಟ್​ ಸೇವೆ ನೀಡಿದ ಸಹೋದರರು

ಸಹೋದರರಿಬ್ಬರು  ಇಡೀ ಗ್ರಾಮಕ್ಕೆ ಇಂಟರ್​ನೆಟ್​ ಸೇವೆ ಕಲ್ಪಿಸಿದ್ದಾರೆ. ಈ ಮೂಲಕ ಗ್ರಾಮಸ್ಥರಿಗೂ ಅಂತರ್ಜಾಲದ ಸಾಕ್ಷರತೆ ಕಲಿಸಲು ಮುಂದಾಗಿದ್ದಾರೆ. 

  • Share this:

ಚನ್ನಪಟ್ಟಣ (ಅ.30): ಕೊರೋನಾ ಸೋಂಕಿನ ಹಿನ್ನಲೆ ಶಾಲೆಗಳು ಆನ್​ಲೈನ್​ ಶಿಕ್ಷಣದ ಮೊರೆ ಹೋದವು. ಆದರೆ, ಇದರಿಂದ ಗ್ರಾಮೀಣ ಭಾಗದ ಮಕ್ಕಳು ಸಮಸ್ಯೆ ಅನುಭವಿಸಿದ್ದು ತುಸು ಹೆಚ್ಚು. ಸ್ಮಾರ್ಟ್​ಫೋನ್​ಗಳ ಜೊತೆ ಇಂಟರ್​ನೆಟ್​ ಸಮಸ್ಯೆ ಹೆಚ್ಚು ಕಾಡಿತು. ಮಕ್ಕಳ ಈ  ತೊಂದರೆಯಾನ್ನು ಗಮನಿಸಿದ ಸಹೋದರರಿಬ್ಬರು  ಇಡೀ ಗ್ರಾಮಕ್ಕೆ ಇಂಟರ್​ನೆಟ್​ ಸೇವೆ ಕಲ್ಪಿಸಿದ್ದಾರೆ. ಈ ಮೂಲಕ ಗ್ರಾಮಸ್ಥರಿಗೂ ಅಂತರ್​ಜಾಲದ ಸಾಕ್ಷರತೆ ಕಲಿಸಲು ಮುಂದಾಗಿದ್ದಾರೆ.  ಇವರ ಈ ಕಾರ್ಯಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳ ಪೋಷಕರಿಗೆ ಹೆಚ್ಚಾಗಿ ಅಂತರ್ಜಾಲದ ಸೇವೆ ಬಗ್ಗೆ ತಿಳುವಳಿಕೆ ಇಲ್ಲದಿರುವುದು. ಹಾಗೂ ಆಂಡ್ರ್ಯಾಯ್ಡ್​ ಫೋನ್​ ಬಳಕೆ ಮಾಡದಿರುವುದರಿಂದ ಗ್ರಾಮದ ಮಕ್ಕಳು ಹೆಚ್ಚು ಕಷ್ಟ ಪಡುತ್ತಿದ್ದರು. ಇದನ್ನು ಗಮನಿಸಿದ ಮಹೇಶ್​ ಮತ್ತು ಹರೀಶ್​ ಎಂಬ ಇಬ್ಬರು ಸಹೋದರರು ಇಡೀ ಗ್ರಾಮಕ್ಕೆ ಅಂತರ್​ಜಾಲ ಸೇವೆ ಕಲ್ಪಿಸಿದ್ದು, ಇಡೀ ಹಳ್ಳಿಯನ್ನೇ ಡಿಜಿಟಲ್​ ಗ್ರಾಮವಾಗಿ ಮಾಡಿದ್ದಾರೆ. 

ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮ ಈಗ ಡಿಜಿಟಲ್​ ಗ್ರಾಮವಾಗಿ ಹೊರ ಹೊಮ್ಮಿದೆ. ಇಲ್ಲಿನ ಮಕ್ಕಳು ನಿರಂತರವಾಗಿ ಆನ್​ಲೈನ್​ ಸೇವೆ ಪಡೆಯುವ ಮೂಲಕ ಶಿಕ್ಷಣದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದಾರೆ. ಇದಕ್ಕೆ ಕಾರಣ ಮಹೇಶ್​ ಮತ್ತು ಹರೀಶ್​ ಎಂಬ ಸಹೋದರರು.


ಲಾಕ್​ಡೌನ್​ ಬಳಿಕ ಶಾಲೆಗಳು ಆನ್​ಲೈನ್​ ಶಿಕ್ಷಣ ಮೊರೆಹೋದಾಗ ಇಲ್ಲಿನ ವಿದ್ಯಾರ್ಥಿಗಳು ಬಹಳ ಸಮಸ್ಯೆ ಎದುರಿಸಿದ್ದರು. ಇಂಟರ್​ನೆಟ್​, ಸ್ಮಾರ್ಟ್​ಫೋನ್ ಇಲ್ಲದೇ ಮಕ್ಕಳು ಕಲಿಕೆಯಿಂದ ವಿಮುಖರಾಗಲು ಶುರು ಮಾಡಿದರು. ಇದನ್ನು ಗಮನಿಸಿದ ಈ ಸಹೋದರರು ಮಾತೃಭೂಮಿ ಸೇವಾ ಫೌಂಡೇಷನ್​ ಸಹಾಯದಿಂದ ಇಡೀ ಗ್ರಾಮವನ್ನೇ ಡಿಜಿಟಲೀಕರಣ ಮಾಡಲು ನಿರ್ಧರಿಸಿದರು. ಇಡೀ ಗ್ರಾಮಕ್ಕೆ ವೈಫೈ ನೀಡಿದರೆ, ವಿದ್ಯಾರ್ಥಿಗಳಲ್ಲದೇ ಇತರರಿಗೂ ಉಪಯೋಗವಾಗಲಿದೆ ಎಂಬುದು ಇವರ ವಾದ. ಅಷ್ಟೇ ಅಲ್ಲದೇ ಕೆಲ ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್​ ಫೋನ್​ ಹಾಗೂ ಮೂರು ನಾಲ್ಕು ಕಂಪ್ಯೂಟರ್​ಗಳನ್ನು ನೀಡಿ ಔದರ್ಯ ಮೆರೆದರು.


ಇದನ್ನು ಓದಿ: ನಾಳೆ ಕೆಆರ್​ಪೇಟೆ ಅಧ್ಯಕ್ಷಗಾದಿಗೆ ಚುನಾವಣೆ; ಅಧಿಕಾರ ಗದ್ದುಗೆಗಾಗಿ ಸಚಿವ ನಾರಾಯಣಗೌಡ ರಣತಂತ್ರ


​ ಸಹೋದರರ ಈ ಕಾರ್ಯಕ್ಕೆ ಯುತ್ ಬ್ರಾಂಡ್ ಬ್ಯಾಂಡ್ ಕೂಡ ಬೆಂಬಲ ನೀಡಿತು. ಬ್ರಾಂಡ್​ ಬ್ಯಾಂಡ್​ ಸಹಯೋಗದಲ್ಲಿ ಈ ಗ್ರಾಮಕ್ಕೆ  ಉಚಿತ ವೈ-ಫೈ ಯನ್ನು ನೀಡಲಾಗಿದೆ. ಗ್ರಾಮದ ಅಭಿವೃದ್ಧಿಗಾಗಿ ವೈ ಫೈ ಬಳಕೆಯನ್ನು  ಉತ್ತೇಜಿಸಲು ಗ್ರಾಮದ ಸಂಪನ್ಮೂಲ ಹೆಚ್ಚಿಸುವ ಉದ್ದೇಶದಿಂದ ಗ್ರಾಮದ ಜನರಿಗೆ ಉಚಿತವಾಗಿ ಈ ಸೇವೆ ನೀಡಲಾಗುತ್ತಿದೆ‌ ಎನ್ನುತ್ತಾರೆ ಟ್ರಸ್ಟ್ ನ ಮುಖ್ಯಸ್ಥ ಮಹೇಶ್.


ಗ್ರಾಮದ 25 ಪಾಯಿಂಟ್ ಗಳಲ್ಲಿ ಇಂಟರ್ ನೆಟ್ ಲಿಂಕ್ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯು ಡಿಜಿಟಲ್ ಮಾಧ್ಯಮದ ಮೂಲಕ ಶಿಕ್ಷಣ, ಆರೋಗ್ಯ ಅಥವಾ ಹಣಕಾಸು ಸೇವೆಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಇಡೀ ಗ್ರಾಮ ಸಮುದಾಯವನ್ನು ಸಬಲೀಕರಣಗೊಳಿಸುವತ್ತ ಗಮನಹರಿಸಲಾಗುತ್ತಿದೆ. ಡಿಜಿಟಲ್ ಕಲ್ಪನೆಯ ಹಳ್ಳಿಯಲ್ಲಿ, ನಿವಾಸಿಗಳು ಡಿಜಿಟಲ್ ಸಾಕ್ಷರರಾಗಲು ಪ್ರೋತ್ಸಾಹಿಸಲಾಗುತ್ತಿದೆ.


(ವರದಿ: ಎಟಿ. ವೆಂಕಟೇಶ್)

top videos
    First published: