• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಜಿಗಣಿ ಪುರಸಭೆಯಲ್ಲಿ ಅರಳಿದ ಕಮಲ; ಕೊರೋನಾ ನಿಯಮ ಉಲ್ಲಂಘಿಸಿ ಬಿಜೆಪಿಯಿಂದ ವಿಜಯೋತ್ಸವ

ಜಿಗಣಿ ಪುರಸಭೆಯಲ್ಲಿ ಅರಳಿದ ಕಮಲ; ಕೊರೋನಾ ನಿಯಮ ಉಲ್ಲಂಘಿಸಿ ಬಿಜೆಪಿಯಿಂದ ವಿಜಯೋತ್ಸವ

ಕೊರೋನಾ ನಿಯಮ ಉಲ್ಲಂಘಿಸಿ ಬಿಜೆಪಿಯಿಂದ ವಿಜಯೋತ್ಸವ

ಕೊರೋನಾ ನಿಯಮ ಉಲ್ಲಂಘಿಸಿ ಬಿಜೆಪಿಯಿಂದ ವಿಜಯೋತ್ಸವ

ಕೋವಿಡ್ - 19 ಉಲ್ಬಣಿಸುವುದನ್ನು ತಡೆಯುವ ಸಲುವಾಗಿ ಪರಿಸರಕ್ಕೆ ಹಾನಿ ಮಾಡುವ ಪಟಾಕಿ ನಿಷೇಧಿಸಲಾಗಿದೆ. ಹೀಗಿದ್ದರೂ ಸಂಭ್ರಮಾಚರಣೆ ವೇಳೆ ಹೆಚ್ಚು ಶಬ್ದ ಮತ್ತು ಮಾಲಿನ್ಯ ಮಾಡುವ ಪಟಾಕಿಗಳನ್ನು ರಸ್ತೆಯುದ್ದಕ್ಕೂ ಸಿಡಿಸಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಬಿಜೆಪಿ ನಾಯಕರೇ ಉಲ್ಲಂಘನೆ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಆನೇಕಲ್(ನ.10): ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಜಿಗಣಿ ಪುರಸಭೆಗೆ ಸೋಮವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದ್ದೂರಿಯಾಗಿ ಸಂಭ್ರಮಾಚರಣೆ ನಡೆಸಿದ್ದು, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೌದು, 23 ಸದಸ್ಯ ಬಲದ ಜಿಗಣಿ ಪುರಸಭೆಯಲ್ಲಿ 16 ಮಂದಿ ಬಿಜೆಪಿ, 5 ಮಂದಿ ಕಾಂಗ್ರೆಸ್, ತಲಾ ಒಬ್ಬ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರಿದ್ದಾರೆ. ಹಾಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ಪ್ರತಿ ಪಕ್ಷಗಳ ಸದಸ್ಯರು ನಾಮಪತ್ರ ಸಲ್ಲಿಕೆಯಾಗದಿದ್ದರಿಂದ ಅಧ್ಯಕ್ಷರಾಗಿ ಮಮತಾ ನರಸಿಂಹ ರೆಡ್ಡಿ, ಉಪಾಧ್ಯಕ್ಷರಾಗಿ ನಾಗೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭರ್ಜರಿಯಾಗಿ ವಿಜಯೋತ್ಸವ ಆಚರಿಸಿದ್ದಾರೆ.


ಎಮ್ಮೆ ಮೇಯಿಸೋಕೂ ಸಂಬಳ; ತಿಂಗಳಿಗೆ ಈತ ಪಡೆಯುವ ಹಣ ಎಷ್ಟು ಗೊತ್ತಾ?


ಕೋವಿಡ್ - 19 ಉಲ್ಬಣಿಸುವುದನ್ನು ತಡೆಯುವ ಸಲುವಾಗಿ ಪರಿಸರಕ್ಕೆ ಹಾನಿ ಮಾಡುವ ಪಟಾಕಿ ನಿಷೇಧಿಸಲಾಗಿದೆ. ಹೀಗಿದ್ದರೂ ಸಂಭ್ರಮಾಚರಣೆ ವೇಳೆ ಹೆಚ್ಚು ಶಬ್ದ ಮತ್ತು ಮಾಲಿನ್ಯ ಮಾಡುವ ಪಟಾಕಿಗಳನ್ನು ರಸ್ತೆಯುದ್ದಕ್ಕೂ ಸಿಡಿಸಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಬಿಜೆಪಿ ನಾಯಕರೇ ಉಲ್ಲಂಘನೆ ಮಾಡಿದ್ದಾರೆ. ಜೊತೆಗೆ ಬಿಜೆಪಿ ವಿಜಯೋತ್ಸವ ವೇಳೆ ಕೋವಿಡ್- 19 ನಿಯಮಗಳನ್ನು ಸಹ ಉಲ್ಲಂಘಿಸಿದ್ದು, ಸಾಮಾಜಿಕ ಅಂತರ ಪಾಲನೆ ಮಾಡಿಲ್ಲ.


ಅಲ್ಲದೆ ಮಾಸ್ಕ್​​​​​​​​​ಗಳನ್ನು ಸಹ ಸಂಪೂರ್ಣವಾಗಿ ಬಾಯಿ ಮತ್ತು ಮೂಗು ಮುಚ್ಚಿಕೊಳ್ಳುವಂತೆ ಧರಿಸದೆ ನೆಪ ಮಾತ್ರಕ್ಕೆ ಮಾಸ್ಕ್ ಧರಿಸುವುದು ಸೇರಿದಂತೆ ಅಗತ್ಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದೆಲ್ಲವನ್ನು ನೋಡಿದರೆ ಜನ ಸಾಮಾನ್ಯರಿಗೆ ಒಂದು ಕಾನೂನು. ಜನ ಪ್ರತಿನಿಧಿಗಳಿಗೆ ಒಂದು ಕಾನೂನಾ? ಎಂಬ ಪ್ರಶ್ನೆ ಮೂಡುತ್ತದೆ.

top videos
    First published: