• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ಕಾಂಗ್ರೆಸ್​ನತ್ತ ಮುಖ ಮಾಡಿದ ಬಿಜೆಪಿ ಶಾಸಕ; ಇತ್ತ ಕೃಷಿ ಸಚಿವರಿಂದ ಆಪರೇಷನ್ ಲೋಟಸ್?

Karnataka Politics: ಕಾಂಗ್ರೆಸ್​ನತ್ತ ಮುಖ ಮಾಡಿದ ಬಿಜೆಪಿ ಶಾಸಕ; ಇತ್ತ ಕೃಷಿ ಸಚಿವರಿಂದ ಆಪರೇಷನ್ ಲೋಟಸ್?

ಬಿ.ಸಿ.ಪಾಟೀಲ್, ಕೃಷಿ ಸಚಿವರು

ಬಿ.ಸಿ.ಪಾಟೀಲ್, ಕೃಷಿ ಸಚಿವರು

ಹಿರೇಕೆರೂರೂರು ಕಾಂಗ್ರೆಸ್ ಟಿಕೆಟ್ ಯುಬಿ ಬಣಕಾರಗೆ ಘೋಷಣೆಯಾದ ಹಿನ್ನೆಲೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಲರ್ಟ್ ಆಗಿದ್ದಾರೆ. ಯು.ಬಿ.ಬಣಕಾರ ವಿರುದ್ಧ ಗೆಲ್ಲಲು ಖುದ್ದು ಆಪರೇಷನ್ ಕಮಲಕ್ಕೆ ಬಿ.ಸಿ.ಪಾಟೀಲ್ ಮುಂದಾಗಿದ್ದಾರೆ.

  • Share this:

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ (Karnataka Politics) ಪಕ್ಷಾಂತರ ಪರ್ವ ಮುಂದುವರಿದಿದೆ. ಗುಬ್ಬಿ ಶಾಸಕ ಎಸ್​ಆರ್ ಶ್ರೀನಿವಾಸ್ (SR Srinivas) ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ (Congress) ಅಂಗಳ ಪ್ರವೇಶಕ್ಕೆ ಕಾಯುತ್ತಿದ್ದಾರೆ. ಇದೀಗ ಮತ್ತೋರ್ವ ಹಾಲಿ ಶಾಸಕ ಬಿಜೆಪಿ (BJP MLA) ತೊರೆದು ಕಾಂಗ್ರೆಸ್ ಬಾವುಟ ಹಿಡಿಯುವ ಲಕ್ಷಣಗಳು ಕಾಣಿಸುತ್ತಿವೆ. ಕೂಡ್ಲಿಗಿ ಬಿಜೆಪಿ ಶಾಸಕ ಎನ್​ವೈ ಗೋಪಾಲಕೃಷ್ಣ (NY Gopalakrishna) ಮರಳಿ ಕಾಂಗ್ರೆಸ್ ಮನೆ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.


2018ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಎನ್  ವೈ ಗೋಪಾಲಕೃಷ್ಣ ಕೂಡ್ಲಿಗಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಕುರಿತು ಸೋಮವಾರ ಕೈ ನಾಯಕರ ಜೊತೆ ಕೈ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಸೇರ್ಪಡೆಯಾದ್ರೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.


ಕಾಂಗ್ರೆಸ್ ಸೇರ್ಪಡೆ ಯಾಕೆ?


ಮೊಳಕಾಲ್ಮೂರು ಕ್ಷೇತ್ರದಲ್ಲಿ ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆ ಹಿನ್ನೆಲೆ ಎನ್ ವೈ ಗೋಪಾಲಕೃಷ್ಣ ಮುನಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.




ಕೌರವ ಬಿ.ಸಿ.ಪಾಟೀಲ್​​ಗೆ ಹೈ ಟೆನ್ಷನ್​!


ಹಿರೇಕೆರೂರೂರು ಕಾಂಗ್ರೆಸ್ ಟಿಕೆಟ್ ಯುಬಿ ಬಣಕಾರಗೆ ಘೋಷಣೆಯಾದ ಹಿನ್ನೆಲೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಲರ್ಟ್ ಆಗಿದ್ದಾರೆ. ಯು.ಬಿ.ಬಣಕಾರ ವಿರುದ್ಧ ಗೆಲ್ಲಲು ಖುದ್ದು ಆಪರೇಷನ್ ಕಮಲಕ್ಕೆ ಬಿ.ಸಿ.ಪಾಟೀಲ್ ಮುಂದಾಗಿದ್ದಾರೆ.


ಇದನ್ನೂ ಓದಿ:  Karnataka Politics: ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುವ ಬಿಜೆಪಿ ಅಭ್ಯರ್ಥಿ ಯಾರು?


ಕಾಂಗ್ರೆಸ್ ಮಾಜಿ ಶಾಸಕ ಬಿ.ಹೆಚ್ ಬನ್ನಿಕೋಡ್ ಅವರಿಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದಾರಂತೆ. ಬನ್ನಿಕೋಡ್​ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿರುವ ಫೋಟೋಗಳು ನ್ಯೂಸ್ 19 ಕನ್ನಡಕ್ಕೆ ಲಭ್ಯವಾಗಿವೆ. ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಯು.ಬಿ.ಬಣಕಾರ್ ಅಸಮಾಧಾನಗೊಂಡಿದ್ದಾರೆ.

top videos
    First published: